5:51 AM Wednesday2 - July 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,… ಜೆಡಿಎಸ್ ಇನ್ನೊಬ್ಬರ ಹೆಗಲ ಮೇಲೆ ಕೈ ಹಾಕೊಂಡೇ ಅಧಿಕಾರಕ್ಕೆ ಬರಬೇಕು, ಸ್ವಂತ ಶಕ್ತಿಯಿಂದ… Karnataka CM | ಸರಕಾರ 5 ವರ್ಷ ಬಂಡೆಯಂತೆ ಭದ್ರವಾಗಿರುತ್ತದೆ: ಮೈಸೂರಿನಲ್ಲಿ ಸಿಎಂ… ಮಾಂಸಕ್ಕಾಗಿ ಜಿಂಕೆ ಕೊಲ್ಲುತ್ತಿದ್ದ ಪಾಪಿಯ ಬಂಧನ: 10 ಜಿಂಕೆ,1 ಕಾಡು ಹಂದಿ ಮಾಂಸ,… Shivamogga | ಯುವತಿಗೆ ಲೈಂಗಿಕ ಕಿರುಕುಳ: ಮೆಗ್ಗಾನ್ ಆಸ್ಪತ್ರೆ ವೈದ್ಯ ಡಾ.ಅಶ್ವಿನ್ ಹೆಬ್ಬಾರ್… Chikkamagaluru | 3 ದಿನಗಳು ಕಳೆದರೂ ನಾಪತ್ತೆಯಾದ ಫಾರೆಸ್ಟ್ ಗಾರ್ಡ್ ಪತ್ತೆ ಇಲ್ಲ:…

ಇತ್ತೀಚಿನ ಸುದ್ದಿ

ಜಂಗಮರೆಂದರೆ ಯಾರು?

08/10/2023, 20:32

ಜಂಗಮರೆಂದರೆ ಯಾರು? ಯಾರು??
ಯಾರು? ಯಾರು?? ಜಂಗಮರೆಂದರೆ!! ಪ!!
ಎಲ್ಲವನ ಕೊಟ್ಟು ಇಹದೆಲ್ಲವನ ಬಿಟ್ಟು
ಬಲ್ಲಿದನ ಜೋಳಿಗೆಯ ಕರದಲಿ ಪಿಡಿದು
ಕಲ್ಲು ಮನಸುಗಳ ಹೂವಾಗಿಸುವದೆಡೆಗೆ
ಮಲ್ಲಿನಾಥನ ಮಗನಾಗಿ ಯೋಗಿಯಾದವರೆ!! ಜಂಗಮ!!

ಬಣ್ಣ ಬಣ್ಣಗಳ ಕನಸುಗಳನೆಲ್ಲ ತೊರೆದು
ಬಿನ್ನಹದಿಂದಲೆ ಜೀವನದ ಸಾರವ ಸಾರೊ
ಕಣ್ಣು ಕಣ್ಣುಗಳ ತೆರೆಸೊ ಜ್ಞಾನ ಭಂಡಾರವು
ಹುಣ್ಣುಮೆಯ ತಂಪನೇ ಚೆಲ್ಲೊ ಕಾಂತಿಯೆ!! ಜಂಗಮ!!

ಬದುಕಿನ ತಿರುಳನ್ನು ವಚನದಲಿ ಸಾರುತ್ತ
ಹೃದಯಗಳಲಿ ಅಮೃತವನೆ ಧಾರೆಯೆರೆವ
ಹದಿಬದೆಯ ಧರ್ಮದ ತಿರುಳನೆ ಬಿತ್ತುವ
ವಿಧಿತದಲಿ ಸರ್ವರಾ ಬಾಳನೆ ಬೆಳಗುವವರೆ!! ಜಂಗಮ!!

ಕಾಮ ಕ್ರೋಧ ಲೋಭ ಮೋಹ ಮತ್ಸರವ
ಯಾಮದಿಂದಲೆ ತೊರೆದು ಸಾಧುವಾಗಿಹ
ಸೋಮ ಸೂರ್ಯರಂತೆಯೆ ಜಗ ಕಾಯುವ
ನಾಮ ನಿರ್ದೇಶಿತ ಕಾವಿಯ ಕಾರ್ಮಿಕರೆ!! ಜಂಗಮ!!

– ಅನಿತಾ ಸಾಲಿಮಠ ಅಂತರಗಂಗೆ
(ವಿದ್ಯಾ ಚೇತನ ಪದವಿ ಪೂರ್ವ ಕಾಲೇಜು ಲಿಂಗಸೂರ್)

ಇತ್ತೀಚಿನ ಸುದ್ದಿ

ಜಾಹೀರಾತು