12:02 AM Wednesday19 - November 2025
ಬ್ರೇಕಿಂಗ್ ನ್ಯೂಸ್
ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ ಕೊಡಗಿನ ಪ್ರಮುಖ ಹಬ್ಬ ಪುತ್ತರಿಗೆ ದಿನಾಂಕ ನಿಗದಿ: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ… ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ… Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌…

ಇತ್ತೀಚಿನ ಸುದ್ದಿ

ಚೀನಾ, ಯುಎನ್ ಅಂತಾರಾಷ್ಟ್ರೀಯ ಒಕ್ಕೂಟ ಸೇರ್ಪಡೆಗೆ ಭಾರತ ಮುಕ್ತ ನಿಲುವು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ

19/11/2025, 23:10

ನವದೆಹಲಿ(reporterkarnataka.com): ಚೀನಾ ಸೇರಿದಂತೆ ಎಲ್ಲಾ ಯುಎನ್ ಅಂತಾರಾಷ್ಟ್ರೀಯ ಒಕ್ಕೂಟ ಸೇರುವ ಬಗ್ಗೆ ಭಾರತ ಮುಕ್ತ ನಿಲುವು ಹೊಂದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ದೆಹಲಿಯಲ್ಲಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನ ವೇಳೆ ಈ ಬಗ್ಗೆ ಸ್ಪಷ್ಟಪಡಿಸಿದ ಸಚಿವರು, ಭಾರತ ‘ ಒಂದು ಸೂರ್ಯ – ಒಂದು ಪ್ರಪಂಚ – ಒಂದು ಗ್ರಿಡ್ ” ಧ್ಯೇಯದೊಂದಿಗೆ ಪ್ರಧಾನಿ ನರೇಂದ್ರ ಮೋಡಿ ಅವರ ನಾಯಕತ್ವದಲ್ಲಿ ಮಹತ್ತರ ಹೆಜ್ಜೆ ಹಾಕಿದೆ ಎಂದು ಪ್ರತಿಪಾದಿಸಿದರು.

ಜಗತ್ತಿನ ನೂರಾರು ರಾಷ್ಟ್ರಗಳು ಭಾರತದ ಸೌರ ಪ್ರಗತಿಗೆ ಮಾರು ಹೋಗಿದ್ದು, ಭಾರತದ ನೇತೃತ್ವದಲ್ಲಿ ಸಾಗಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟವನ್ನು ಪ್ರತಿನಿಧಿಸುತ್ತವೆ. ಅಂತೆಯೇ ಚೀನಾ ಸೇರಿದಂತೆ ಎಲ್ಲಾ UN ಸದಸ್ಯರು ಅಂತರಾಷ್ಟ್ರೀಯ ಸೌರ ಒಕ್ಕೂಟಕ್ಕೆ (ISA) ಸೇರುವ ಬಗ್ಗೆ ಸಹ ಭಾರತ ಮುಕ್ತ ನಿಲುವು ಹೊಂದಿದೆ ಎಂಬುದನ್ನು ಸ್ಪಷ್ಟಪಡಿಸಿದರು.

*ಭಾರತದ ನಿವ್ವಳ ಶೂನ್ಯಕ್ಕೆ ಯುಕೆ ಶ್ಲಾಘನೆ:*
ಭಾರತದ ಇಂಧನ ಭದ್ರತೆ ಹಾಗೂ ನಿವ್ವಳ ಶೂನ್ಯಕ್ಕಾಗಿ ಯುಕೆ ವಿದೇಶಾಂಗ ಕಾರ್ಯದರ್ಶಿ ಎಡ್ವರ್ಡ್ ಮಿಲಿಬ್ಯಾಂಡ್ ಅವರಿಂದ ಶ್ಲಾಘನೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ. ನವೀಕರಿಸಬಹುದಾದ ಇಂಧನಕ್ಕಾಗಿ ಜಿ-ನೇತೃತ್ವದ ಒತ್ತಾಯ ಮಾಡಿದ್ದಾರೆ ಎಂದು ಹೇಳಿದರು.
“ಭಾರತ ಮೋದಿ ಅವರ ನಾಯಕತ್ವದಲ್ಲಿ ಇಂಧನ ಸುಸ್ಥಿರತೆ ಮಾತ್ರವಲ್ಲ ಭವಿಷ್ಯದ ಪೀಳಿಗೆಗೆ ಮಾದರಿ ಹೆಜ್ಜೆಯಿಡುತ್ತಿದೆ. ದೇಶಾದ್ಯಂತ ಒಂದು ಕೋಟಿ ಮನೆಗಳಿಗೆ ಸೌರ ಬೆಳಕು ಚೆಲ್ಲುವ ಗುರಿಯೊಂದಿಗೆ ಸಬ್ಸಿಡಿ ಸಹಿತ ಸೌರ ಮೇಲ್ಛಾವಣಿ ಫಲಕ ಅಳವಡಿಸಿ ಉಚಿತ ವಿದ್ಯುತ್ ಒದಗಿಸುವ ‘ಪಿಎಂ ಸೂರ್ಯ ಘರ್’ ಒಂದು ವಿದ್ಯುಕ್ತ ಯೋಜನೆಯಾಗಿದೆ ಎಂದು ಮಿಲಿಬ್ಯಾಂಡ್ ಸಂತಸ ವ್ಯಕ್ತಪಡಿಸಿದ್ದಾರೆ” ಎಂದರು ಜೋಶಿ.
ಕಳೆದ ದಶಕದಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣವು ನಾವೀನ್ಯತೆ, ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯತಂತ್ರದ ದೂರದೃಷ್ಟಿಗೆ ಸಾಕ್ಷಿಯಾಗಿದೆ. ನಿಗದಿತ ಸಮಯದೊಳಗೆ ಗುರಿ ಸಾಧಿಸಲಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ದೇಶೀಯ ಉತ್ಪಾದನಾ ಸಾಮರ್ಥ್ಯ ಗಣನೀಯ ಬೆಳವಣಿಗೆ ಕಂಡಿದೆ ಎಂದು ಹೇಳಿದರು.
2030ರ ನವೀಕರಿಸಬಹುದಾದ ಇಂಧನ ಗುರಿ ತಲುಪುವಲ್ಲಿ ಭಾರತ ಮುಂದಡಿ ಇಟ್ಟಿದೆ. ವಾರ್ಷಿಕ 50 GW ಸಾಮರ್ಥ್ಯವನ್ನು ಸೇರಿಸಲು ಬದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ಸೌರ ಶಕ್ತಿ, ಪವನ ಶಕ್ತಿ, ಗ್ರೀನ್ ಹೈಡ್ರೋಜನ್ ಅಲ್ಲಿ ಮಹತ್ವದ ಸಾಧನೆ ತೋರಿದೆ ಎಂದರು.

*ಹೂಡಿಕೆಗೆ ಒಳ್ಳೇ ಅವಕಾಶದ ವೇದಿಕೆ:* ಹೂಡಿಕೆದಾರರು ಹೂಡಿಕೆ ಮಾಡಲು ಈ ವಲಯ ಒಳ್ಳೇ ಅವಕಾಶದ ವೇದಿಕೆಯಾಗಿದೆ. ಇದರಲ್ಲಿ ಹೂಡಿಕೆ ಮಾಡಿ, ಹಣ ಗಳಿಸಬಹುದಲ್ಲದೆ, ಭೂಮಿಯನ್ನು ಸಹ ಉಳಿಸಬಹುದು’ ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯಿಸಿದರು.
PM ಸೂರ್ಯ ಘರ್ ಯೋಜನೆ ಯಶಸ್ಸು ಮತ್ತು PLI ಯೋಜನೆಗಳ ಮೂಲಕ ಸೌರ ಘಟಕಗಳ ದೇಶೀಯ ಉತ್ಪಾದನೆಗೆ ಒತ್ತು ನೀಡುತ್ತಿದ್ದು, ವಿದೇಶಗಳೂ ಈಗ ಭಾರತವನ್ನು ಅನುಸರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

*ಬಡವರ ಯೋಜನೆಗಳು ಬೇರೆಡೆ ಬದಲಾಗಬಾರದು:* ‘ಬಡವರ ಉದ್ದೇಶಿತವಾದ ಯಾವುದೇ ಯೋಜನೆಗಳು ಬೇರೆಡೆ ಬದಲಾಗಬಾರದು’ ಎಂಬುದು ನಮ್ಮ ತಂದೆಯವರ ನಿಲುವು ಮತ್ತು ಅಪೇಕ್ಷೆಯಾಗಿತ್ತು. ಇಂದಿಗೂ ನಾನದನ್ನು ಪಾಲಿಸುತ್ತ ಬಂದಿದ್ದೇನೆ. ಅವರ ಎಷ್ಟೋ ಮಾತುಗಳು, ಕಲಿಸಿದ ಜೀವನಪಾಠ ಇಂದಿಗೂ ನನ್ನ ಹೃದಯಕ್ಕೆ ಹತ್ತಿರವಾಗಿವೆ ಎಂದು ಪ್ರಲ್ಹಾದ ಜೋಶಿ ಸ್ಮರಿಸಿಕೊಂಡರು.
ನನ್ನ ಸಾರ್ವಜನಿಕ ಸೇವೆಯ ಉದ್ದಕ್ಕೂ ನಾನು ಈ ತತ್ವವನ್ನು ಅನುಸರಿಸಿದ್ದೇನೆ, ಪ್ರತಿಯೊಂದು ಕಾರ್ಯದಲ್ಲೂ ಅರ್ಹತೆ ಮತ್ತು ತ್ವರಿತ ವೇಗ ನೀಡುವುದನ್ನು ರೂಢಿಸಿಕೊಂಡಿದ್ದೇನೆ. ಅಂತೆಯೇ ಯಾವುದೇ ಹಸ್ತಕ್ಷೇಪವಿಲ್ಲದೆ ಯೋಜನೆಗಳನ್ನು ಅಗತ್ಯವಿರುವವರಿಗೆ ತಲುಪಿಸುತ್ತಿದ್ದೇನೆ’ ಎಂದೂ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು