4:41 AM Monday16 - March 2026
ಬ್ರೇಕಿಂಗ್ ನ್ಯೂಸ್
Mangaluru | ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ ಗೆ 2025 ಕೇಂದ್ರ ಸಾಹಿತ್ಯ… ಉತ್ತರಿಸದ ಸಚಿವರು: ಇದೇ ಮೊದಲ ಬಾರಿಗೆ ಸ್ಪೀಕರ್ ಸಭಾತ್ಯಾಗ; ಮೂವರು ಅಧಿಕಾರಿಗಳಿಗೆ ತಲೆದಂಡ ರಾಜ್ಯ ಉಪ ಚುನಾವಣೆ: ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಏಪ್ರಿಲ್ 9ರಂದು ಮತದಾನ, ಮೇ… ಕಾರಿನ ಮೇಲೆ ಉರುಳಿದ ಕಟ್ಟಿಗೆ ತುಂಬಿದ ಲಾರಿ: ಮಗು ಸಹಿತ ದಂಪತಿ ಪವಾಡಸದೃಶ… ಕಲಬುರಗಿ; ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್… ವಿವಿಧ ಬೇಡಿಕೆ ಆಗ್ರಹಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಫ್ರೀಡಂ… ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್

ಇತ್ತೀಚಿನ ಸುದ್ದಿ

ಡಿ. 25ರಿಂದ 30ರ ವರೆಗೆ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ: ಕೇಂದ್ರ ಸಚಿವ ಜೋಶಿ, ಸೋಮಣ್ಣ ಭಾಗಿ

14/12/2025, 18:42

ಹಾವೇರಿ(reporterkarnataka.com): ಹುಕ್ಕೇರಿ ಮಠದ ಶ್ರೀಗಳು ಸಮಾಜ ಶುದ್ದೀಕರಣ ಕ್ರಾಂತಿ ಮಾಡುತ್ತಿದ್ದಾರೆ. ಡಿ. 25 ರಿಂದ 30ರ ವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ವಿ. ಸೋಮಣ್ಣ, ಮೈಸೂರಿನ ಒಡೆಯರಾದ ಸಂಸದ ಯದುವೀರ್ ಒಡರಯರ್ ಭಾಗವಹಿಸುತ್ತಿದ್ದಾರೆ. ಇದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಹುಕ್ಕೇರಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಾಕೇಂದ್ರ, ಶಾಲೆಗಳ ಸುವರ್ಣ ಮಹೋತ್ಸವ. ನಾಡಿನ ಈ ಭಾಗದಲ್ಲಿ ಐವತ್ತು ವರ್ಷ ಸುದೀರ್ಘವಾಗಿ ಜಾತಿ ಭೇದ ಇಲ್ಲದೇ ಎಲ್ಲ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಟ್ಟು ಸುಸಂಸ್ಕೃತ ವಾದ ವಿದ್ಯಾವಂತ ಸಮುದಾಯವನ್ನು ನಿರ್ಮಿಸಲು ಮಾಡಿರುವ ಸುದೀರ್ಘ ತಪಸ್ಸಿನ ಯಶಸ್ಸಿನ ಆಚರಣೆಯೇ ಸುವರ್ಣ ಮಹೋತ್ಸವ. ವಿದ್ಯಾರ್ಥಿ ನಿಲಯ ಉದ್ಘಾಟನೆ, ಭಕ್ತಿಯ ಗುರುವಂದನೆ, ಪರಮ ಪೂಜ್ಯರ ತುಲಾಭಾರ, ಇವೆಲ್ಲವನ್ನು ಭಕ್ತರು ಭಕ್ತಿ ಭಾವದ ಭಾವನೆ ಸಮರ್ಪಣೆಗೆ ಈ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ‌ ಎಂದು ಹೇಳಿದರು.

*ಒಂದು ತಿಂಗಳಿಂದ ಕಾರ್ಯಕ್ರಮ;*
ಹುಕ್ಕೇರಿ ಮಠದ ಶ್ರಿಗಳದ್ದು ಗಾಂಭಿರ್ಯದ ಸಾಧನೆಯ ವ್ಯಕ್ತಿತ್ವ ಅದಕ್ಕಾಗಿ ಧರ್ಮ ಜಾಗೃತಿಯ ಜೊತೆಗೆ ಯುವಕರಲ್ಲಿ ಶ್ರದ್ದಾ ಭಾವನೆ ಮೂಡಿಸಿ ಅವರಲ್ಲಿರುವ ದುಶ್ಚಟ, ಕೆಟ್ಟ ವಿಚಾರ ಹೋಗಲಾಡಿಸಿ ಅವರ ಬದುಕು ಶುದ್ದವಾಗಬೇಕು ಬರುವಂತ ದಿನಗಳಲ್ಲಿ ಈ ಭಾಗದ ಜನರು ನೆಮ್ದದಿಯಿಂದ ಬದುಕುವಂತೆ ಮಾಡಲು ಒಂದು ತಿಂಗಳಿಂದ ಕಾರ್ಯಕ್ರಮ ಮಾಡುತ್ತಿದ್ದಾರೆ. ಸಮಾಜ ಶುದ್ದೀಕರಣ ಕ್ರಾಂತಿಯನ್ನು ಹುಕ್ಕೇರಿ ಮಠದ ಶ್ರೀಗಳು ತೆಗೆದುಕೊಂಡಿದ್ದಾರೆ. ಆಧುನಿಕತೆಯ ಪ್ರಭಾವದಲ್ಲಿ ನಮ್ಮತನ, ನಮ್ಮ ಸಂಸ್ಕಾರ, ನಮ್ಮ ಅಸ್ತಿತ್ವವನ್ನೆ ಮುಳುಗಿಸುವ ಪ್ರಭಾವದಿಂದ ಪ್ರಕೃತಿಯೇ ಕೆಟ್ಟು ಹೋಗುವ ಪರಿಸ್ಥಿತಿ ಇದೆ‌. ಶೇಗುಣಸಿ, ಅಕ್ಕಿ ಆಲೂರು ಸೇರಿ ಎಲ್ಲ ಗುರುಗಳನ್ನು ಕರೆಸಿದ್ದಾರೆ. ಈ ಪ್ರವಚನ ನಿರಂತರ ನಡೆಯುತ್ಗಿದೆ ಪ್ರತಿ ದಿನ ಎಂಟರಿಂದ ಹತ್ತು ಸಾವಿರ ಜನ ಸೇರುತ್ತಿದ್ದಾರೆ‌ ಜನರಲ್ಲಿ ಬಕ್ತಿ ಭಾವ ಸಮೂಹವಾಗಿ ವ್ಯಕ್ತ ಆಗುತ್ತಿದೆ. ನಮ್ಮ ದಿನನಿತ್ಯದ ಚಟುವಟಿಕೆತಳಲ್ಲಿ ಅಳವಡಿಸಿಕೊಂಡಾಗ ನಮ್ ಸಂಸ್ಕೃತಿ ಆಗುತ್ತದೆ. ನಾಗರಿಕತೆ ಮತ್ತು ಸಂಸ್ಕೃತಿ ನಡುವಿನ ವ್ಯತ್ಯಾಸ ಜನರು ಮರೆತಿದ್ದಾರೆ. ನಮ್ಮ ಬಳಿ ಏನಿದೆಯೊ ಅದು ನಾಗರಿಕತೆ, ನಾವೇನಾಗಿದ್ದೇವೊ ಅದು ಸಂಸ್ಕೃತಿ ಎಂದರು.

*ಐತಿಹಾಸಿಕ ಕಾರ್ಯಕ್ರಮ,;*
ಇದು ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ಹುಕ್ಕೇರಿ ಮಠದ ಶ್ರೀಗಳು ಬೆಳ್ಳಿ ತುಲಾಭಾರವನ್ನು ವಿದ್ಯಾರ್ಥಿಗಳ ಪ್ರಸಾದ ಕ್ಕೆ ನೀಡುತ್ತಿದ್ದಾರೆ‌. ಅವರು ಯಾವುದನ್ನೂ ಇಟ್ಡುಕೊಂಡಿಲ್ಲ.
ಮಠ ಮಾನ್ಯಗಳು ರಾಜ್ಯದಲ್ಲಿ ದೊಡ್ಡ ಪಾತ್ರ ವಹಿಸುತ್ತಿವೆ‌ ಸಂಕಷ್ಟದ ಪರಿಸ್ಥಿತಿಯಲ್ಲಿ ಮಠಗಳು ಮಾರ್ಗದರ್ಶನ ಮಾಡುತ್ತಿವೆ‌ ಹುಕ್ಕೇರಿ ಮಠ ಇಡಿ ಉತ್ತರ ಕರ್ನಾಟಕ ಕ್ಜೆ ಮಾರ್ಗರ್ಶಕ ಮಠ ಆಗುತ್ತದೆ ಎನ್ನುವ ವಿಶ್ವಾದ ಇದೆ ಎಂದು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು