2:01 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ಹಿರಿಯ ಶಿಕ್ಷಕ‌, ಪತ್ರಕರ್ತ ಜಯಾನಂದ ಪೆರಾಜೆಗೆ ಅಮೃತ ಸಮ್ಮಾನ ಗೌರವ ರಾಜ್ಯ ಪ್ರಶಸ್ತಿ

08/09/2023, 19:20

ಉಡುಪಿ(reporterkarnataka.com): ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 34 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಪ್ರಸ್ತುತ ಪತ್ರಕರ್ತರಾಗಿರುವ ಹಿರಿಯ ಶಿಕ್ಷಕ ಜಯಾನಂದ ಪೆರಾಜೆಯವರಿಗೆ ‌ಅಮೃತ ಸಮ್ಮಾನ ಗೌರವ ಪ್ರಶಸ್ತಿ ನೀಡಿ ಶಿಕ್ಷಕ ದಿನಾಚರಣೆಯಂದು ಉಡುಪಿಯಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ಹುಬ್ಬಳ್ಳಿ ವತಿಯಿಂದ ನಡೆದ ಶಿಕ್ಷಕ ಸಾಹಿತಿಗಳ ಆರನೆಯ ರಾಜ್ಯ ಸಮ್ಮೇಳನವು ಉಡುಪಿ ಅಂಬಲಪ್ಪಾಡಿ ಶ್ರೀ ಜನಾರ್ದನ ಮಹಾಂಕಾಳಿ ದೇವಸ್ಥಾನದ ಶ್ರೀ ಭವಾನಿ ಮಂಟಪದಲ್ಲಿ ಜರಗಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನೆಂಪು ನರಸಿಂಹ ಭಟ್ಟರ ಸರ್ವಾಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಧರ್ಮದರ್ಶಿ ಡಾ. ವಿಜಯ ಬಲ್ಲಾಳ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉದ್ಯಮಿ ವಿಶ್ವನಾಥ ಶೆಣೈ, ಕ.ಚು.ಸಾ. ಪ.ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ,
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ‌ಅತಿಥಿಯಾಗಿದ್ದರು.
ರಾಜ್ಯದ ಶಿಕ್ಷಕ ಸಾಹಿತಿಗಳಾದ ಕೆ.ವಿ.ಶ್ರೀಕಾಂತ್‌ ಹೊಸಕೋಟೆ, ಅಶೋಕ ಧರ್ಮಸ್ಥಳ, ವನಿತಾ ಕುಮಾರಿ ದ.ಕ., ಎ.,ಗೌರೀಶ ತಮ್ಮಣ್ಣ ನಾಯಕ, ಹೊನ್ನಪ್ಪ ನಾರಾಯಣ ನಾಯಕ ಅಂಕೋಲ, ಜಿ.ಯು.ನಾಯಕ ಚೇರ್ಕಾಡಿ,ಟಿ.ಕೆ.ಆಚಾರ್‌ ಉಡುಪಿ, ರಾಜು ಆಚಾರ್ಯ ಉಡುಪಿ, ಮನೋಜ್ ಕಡಬ, ಸೋಮಶೇಖರ ಶೆಟ್ಟಿ ನೆಂಪು ಇವರನ್ನು ಅಮೃತ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.


ಉಡುಪಿ ಜಿಲ್ಲಾ ಉಪಾಧ್ಯಕ್ಷ ರಾಜು ಎನ್.ಆಚಾರ್ಯ‌ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು.
ಡಾ.ರಾಧಾಕೃಷ್ಣನ್ ಕಂಡಂತೆ ಶೈಕ್ಷಣಿಕ ಕ್ಷೇತ್ರವಕುರಿತು ಶಾಂತಾ‌ ಪುತ್ತೂರು ವಿಚಾರ ಮಂಡಿಸಿದರು.
ನೈತಿಕ ಶಿಕ್ಷಣ ಬಗ್ಗೆ ಸಾವಿತ್ರಿ ಮನೋಹರ ಕಾರ್ಕಳ‌ ಮಾತನಾಡಿದರು.
ಬಹುಭಾಷಾ‌ ಕವಿ ಅಂಶುಮಾಲ ಅಧ್ಯಕ್ಷತೆಯಲ್ಲಿ‌ ಕವಿಗೋಷ್ಠಿ ನಡೆಯಿತು. ಶೇಖರ‌ ಅಜೆಕಾರು, ಡಾ.‌ಸವಿತಾ ದುರುಗಪ್ಪ ಮಂಡ್ಯ ಉಪಸ್ಥಿತರಿದ್ದರು. ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವ ಜರುಗಿತು. ಕಲಾವಿದರಾದ ಗುರುರಾಜ್ ಕಾಸರಗೋಡು,ರೇಖಾ ಸುದೇಶ ರಾವ್, ಡಾ.ವಂದನಾ ರಾವ್ ಹುಬ್ಬಳ್ಳಿ ನಿರೂಪಿಸಿದರು. ಕಲಾವಿದರನ್ನು ಗೌರವ ಸ್ಮರಣಿಕೆ ನೀಡಿ ಸತ್ಕರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು