9:46 AM Tuesday16 - September 2025
ಬ್ರೇಕಿಂಗ್ ನ್ಯೂಸ್
ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ

ಇತ್ತೀಚಿನ ಸುದ್ದಿ

ಇಂಫಾಲ್ ನಲ್ಲಿ ಭಾರೀ ಪ್ರವಾಹ; ಕಣಿವೆ ಪ್ರದೇಶದ ಹಲವು ಭಾಗಗಳು ಜಲಾವೃತ; ಜನಜೀವನ ಅಸ್ತವ್ಯಸ್ತ

31/05/2025, 20:02

ಇಂಫಾಲ್(reporterkarnataka.com): ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಇಂಫಾಲ್ ಪೂರ್ವ ಜಿಲ್ಲೆಯ ಕಣಿವೆ ಪ್ರದೇಶದ ಹಲವು ಭಾಗಗಳು ಜಲಾವೃತಗೊಂಡಿದ್ದು,ಜನಜೀವನ ಅಸ್ತವ್ಯಸ್ತಗೊಂಡಿದೆ.
ಇಂಫಾಲ್ ನದಿಯಿಂದ ಭಾರೀ ಪ್ರಮಾಣದಲ್ಲಿ
ನೀರು ಹರಿದು ಬರುತ್ತಿದ್ದು, ಹಠಾತ್ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಕೆಲವು ಪೀಡಿತ ಪ್ರದೇಶಗಳಲ್ಲಿ ಖುರೈ ಪ್ರದೇಶ, ಖುರೈ ಹೈಕ್ರುಮಾಖೋಂಗ್ ಪ್ರದೇಶ, ಹೀಂಗಾಂಗ್ ಮತ್ತು ಕೊನುಂಗ್ ಮಾಮಾಂಗ್ ಪ್ರದೇಶಗಳ ಭಾಗಗಳು ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ಪ್ರದೇಶಗಳು ಸೇರಿವೆ.
ಮಣಿಪುರ ಗವರ್ನರ್ ಅಜಯ್ ಕುಮಾರ್ ಭಲ್ಲಾ ಅವರು ನೊಂಗ್‌ಪೋಕ್ ಥಾಂಗ್, ಲೈರಿಕ್ಯೆನ್‌ಬಾಮ್ ಲೈಕೈ ಮತ್ತು ಸಿಂಜಮೇಯ್‌ನಲ್ಲಿ ಜಲಸಂಪನ್ಮೂಲಗಳ ಆಯುಕ್ತರೊಂದಿಗೆ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಈ ಮಧ್ಯೆ, ಖುರೈ ಅಸೆಂಬ್ಲಿ ಶಾಸಕ ಎಲ್.ಸುಶೀಂದ್ರೋ ಅವರು ತಮ್ಮ ಖುರೈ ಪ್ರದೇಶಗಳಲ್ಲಿ ಸ್ಥಳೀಯರೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರ ಪ್ರಕಾರ, ಐದು ಗ್ರಾಮ ಪಂಚಾಯತ್ ಪ್ರದೇಶಗಳು ಖುರೈ ಪ್ರದೇಶದಲ್ಲಿವೆ: ನಂದೆಬಾಮ್ ಲೈಕೈ, ಕೊನ್ಸಮ್ ಲೈಕೈ, ಲಿಯಾಶ್ರಮ್ ಲೈಕೈ, ಮತ್ತು ಚಿಂಗಖುಮ್ ಲೈಕೈ. ಈ ಪ್ರದೇಶಗಳು ಪ್ರವಾಹಕ್ಕೊಳಗಾಗಿವೆ.

ಇತ್ತೀಚಿನ ಸುದ್ದಿ

ಜಾಹೀರಾತು