10:20 AM Wednesday5 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ…

ಇತ್ತೀಚಿನ ಸುದ್ದಿ

ಗೆಳತಿಗೆ ಸುತ್ತಾಡಲು ಸಾಲುತ್ತಿರಲಿಲ್ಲ ಸಂಬಳ : ಕೆಲಸ ಬಿಟ್ಟು ಸರಗಳ್ಳತನ ಶುರು ಮಾಡಿಕೊಂಡ ಸಿವಿಲ್ ಎಂಜಿನಿಯರ್

03/11/2021, 14:04

ಮುಂಬಯಿ (Reporterkarnataka.com)

ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಸಿಗೋ ಸ್ವಲ್ಪ ಸಂಬಳದಲ್ಲಿ ಇಡೀ ಸಂಸಾರವನ್ನು ನೋಡಿ‌ಕೊಳ್ಳುವವರ ನಡುವೆ ಇಲ್ಲೊಬ್ಬ ಭೂಪ ತನ್ನ ಗರ್ಲ್ ಫ್ರೆಂಡ್‌ಗೆ ಸುತ್ತಾಡಲು ಸಂಬಳ ಸಾಲುವುದಿಲ್ಲವೆಂದು ಸಿವಿಲ್‌ ಇಂಜಿನಿಯರಿಂಗ್‌ ಕೆಲಸ ಬಿಟ್ಟು ಸರ ಕಳ್ಳತನದ ದಂಧೆಗೆ ಇಳಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

2015 ರಲ್ಲಿಯೇ ಸಿವಿಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಉಮೇಶ್‌ ಪಾಟೀಲ್‌ (27) ನಂತರ ಕಾಂಟ್ರಾಕ್ಟರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕಾಂಟ್ರಾಕ್ಟರ್‌ ಕೆಲಸದಲ್ಲಿ ಬರುವ ಸಂಬಳದಲ್ಲಿ ತನ್ನ ಖರ್ಚು ಹಾಗೂ ತನ್ನ ಗೆಳತಿಯ ಖರ್ಚನ್ನು ನಿಭಾಯಿಸಲು ಆಗುತ್ತಿರಲಿಲ್ಲಾ.

ಬೇರೆ ಕೆಲಸ ಮಾಡುವಂತ ಶ್ರಮಜೀವಿಯೂ ಈತನಾಗಿರಲಿಲ್ಲ. ಈ ಕಾರಣದಿಂದ ಸುಲಭ ವಿಧಾನದಲ್ಲಿ ಆದಾಯ ಗಳಿಸಬೇಕೆಂಬುದು ಉಮೇಶ್‌ ಪಾಟೀಲ್‌ ಲೆಕ್ಕಾಚಾರವಾಗಿತ್ತು.

ಇಷ್ಟೇ ಅಲ್ಲದೇ ಉಮೇಶ್‌ ಪಾಟೀಲ್‌ ಸರಕಳ್ಳತನ ಮಾಡಿದ 45 ಲಕ್ಷ ಹಣದಿಂದ ಫ್ಲಾಟ್‌ ಖರೀದಿಸಿದ್ದಾನೆ. ಅಲ್ಲದೇ ಉಮೇಶ್‌ ಪಾಟೀಲ್‌ ಬ್ಯಾಂಕ್‌ ಅಕೌಂಟ್‌ ನಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್‌ ಕೂಡ ಪತ್ತೆಯಾಗಿದೆ. ಗೆಳತಿ ಜೊತೆ ಸುತ್ತಾಡಲು ಹಾಗೂ ಐಷಾರಾಮಿ ಜೀವನ ನಡೆಸಲು ತನ್ನ ವೇತನ ಸಾಲುತ್ತಿರಲಿಲ್ಲಾ ಹೀಗಾಗಿ ಸರಕಳ್ಳತನಕ್ಕೆ ಇಳಿದಿರುವುದಾಗಿ ಪೋಲಿಸರ ಮುಂದೆ ಉಮೇಶ್‌ ಪಾಟೀಲ್‌ ಬಾಯಿ ಬಿಟ್ಟಿದ್ದಾನೆ.

ಇತ್ತೀಚಿನ ಸುದ್ದಿ

ಜಾಹೀರಾತು