5:52 AM Tuesday27 - January 2026
ಬ್ರೇಕಿಂಗ್ ನ್ಯೂಸ್
ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:… ಸೋಮವಾರಪೇಟೆ ಕಾಜೂರಿನಲ್ಲಿ ಭಾರೀ ಬೆಂಕಿ ಅವಘಡ: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕ ಬಚಾವ್ ಮಾಡಿದ… ಕೊಡಗಿನ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಉಸ್ತುವಾರಿ ಸಚಿವ ಬೋಸರಾಜ್ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಾರ್ಯಾಲದಲ್ಲಿ ಗಣರಾಜ್ಯೋತ್ಸವ: 130ಕ್ಕೂ ಅಧಿಕ ವಾಹನ ಚಾಲಕಿಯರಿಗೆ… ರಾಜ್ಯದಲ್ಲಿದ್ದಾರೆ ಒಟ್ಟು 10,365 ಟ್ರಾನ್ಸ್ ಜೆಂಡರ್: ಸಮೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ… ಹುಬ್ಬಳ್ಳಿ | ಕೊಳೆಗೇರಿ ನಿವಾಸಿಗಳ ಮುಖ್ಯವಾಹಿನಿಗೆ ತರಲು ಬೃಹತ್ ಪ್ರಮಾಣದಲ್ಲಿ ಮನೆ ವಿತರಣೆ:… ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ

ಇತ್ತೀಚಿನ ಸುದ್ದಿ

ಕೊಡಗಿನ ಪಾಲಿ ಬೆಟ್ಟದಿಂದ ಮೂಡಿಗೆರೆಗೆಯ ಗೋಣಿಬೀಡಿಗೆ: ಸತ್ತು ಹೋದ ಮರಿಯ ಹುಡುಕಿಕೊಂಡು ಕಾಡಾನೆ 150 ಕಿಮೀ. ಪಯಣ!!

29/07/2025, 14:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬುದ್ದಿವಂತ ಪ್ರಾಣಿ ಮನುಷ್ಯನ ಪ್ರೀತಿಯನ್ನೂ ಮೀರಿಸಿದ್ದು ಪ್ರಾಣಿ ಪ್ರೀತಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಸತ್ತಿರೋ ಮರಿ ಹುಡುಕಿಕೊಂಡು ಹೆಣ್ಣು ಕಾಡಾನೆಯೊಂದು 150 ಕಿ.ಮೀ. ದೂರ ಬಂದಿದೆ.
ಕಾಡಾನೆ ಬಂದದ್ದು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ.
ಕೊಡಗು ಜಿಲ್ಲೆಯ ಪಾಲಿ ಬೆಟ್ಟದಿಂದ ಮೂಡಿಗೆರೆಯ
ಗೋಣಿಬೀಡಿಗೆ ಒಲ್ಡ್ ಬೆಲ್ಟ್ ಕಾಡಾನೆ ಬಂದಿದೆ.
ನಿನ್ನೆ ಬೆಳಗ್ಗೆ ಮಡಿಕೇರಿಯ ಪಾಲಿ ಬೆಟ್ಟದಲ್ಲಿ ಜನರು ಓಲ್ಡ್ ಬೆಲ್ಟ್ ಕಾಡಾನೆಯನ್ನು ಓಡಿಸಿದ್ದರು. ಈ ಕುರಿತು
ಮಡಿಕೇರಿಯ ಪಾಲಿಬೆಟ್ಟದಲ್ಲಿದ್ದ ಸಿಸಿಟಿವಿ ವಿಡಿಯೋ ಕೂಡ ಲಭ್ಯವಿದೆ.


ಸಂಜೆ ವೇಳೆಗೆ ಮರಿಯನ್ನು ಹುಡುಕಿಕೊಂಡು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ ಬಂದಿದೆ. ಓಲ್ಡ್ ಬೆಲ್ಟ್ ಕೊರಳಲ್ಲಿರೋ ರೆಡಿಯೋ ಕಾಲರ್ ನಿಂದ ಲೊಕೇಶನ್ ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕೆ ಬೇಲೂರು-ಮೂಡಿಗೆರೆಯ ಗಡಿ ಲಕ್ಷ್ಮಿ ಎಸ್ಟೇಟ್ ನಲ್ಲಿದೆಯೆಂಬ ಮಾಹಿತಿ ಇದೆ. ಓಲ್ಡ್ ಬೆಲ್ಟ್ ಮರಿ ತಿಂಗಳುಗಳ ಮುಂಚೆಯೇ ಸಾವನ್ನಪ್ಪಿದೆ.
ಆದರೆ, ಸಾವನ್ನಪ್ಪಿರೋ ಮರಿ ಹುಡುಕಿಕೊಂಡು 150 ಕಿ.ಮೀ ದೂರ ಈ ಹೆಣ್ಣಾನೆ ಬಂದಿದೆ.
ಲಕ್ಷ್ಮಿ ಎಸ್ಟೇಟ್ ಚಿಕ್ಕಮಗಳೂರು-ಹಾಸನ ಜಿಲ್ಲೆಯ ಗಡಿ ಭಾಗದಲ್ಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು