11:22 PM Tuesday29 - July 2025
ಬ್ರೇಕಿಂಗ್ ನ್ಯೂಸ್
Bangaluru | ಪತ್ರಿಕಾ ಸಂಪಾದಕರ ಕೈಕಟ್ಟಿ ಹಾಕಲಾಗುತ್ತಿದೆ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ… Mandya | ಒಂದೇ ದಿನ 1146 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ… ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ… ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ…

ಇತ್ತೀಚಿನ ಸುದ್ದಿ

ಕೊಡಗಿನ ಪಾಲಿ ಬೆಟ್ಟದಿಂದ ಮೂಡಿಗೆರೆಗೆಯ ಗೋಣಿಬೀಡಿಗೆ: ಸತ್ತು ಹೋದ ಮರಿಯ ಹುಡುಕಿಕೊಂಡು ಕಾಡಾನೆ 150 ಕಿಮೀ. ಪಯಣ!!

29/07/2025, 14:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬುದ್ದಿವಂತ ಪ್ರಾಣಿ ಮನುಷ್ಯನ ಪ್ರೀತಿಯನ್ನೂ ಮೀರಿಸಿದ್ದು ಪ್ರಾಣಿ ಪ್ರೀತಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಸತ್ತಿರೋ ಮರಿ ಹುಡುಕಿಕೊಂಡು ಹೆಣ್ಣು ಕಾಡಾನೆಯೊಂದು 150 ಕಿ.ಮೀ. ದೂರ ಬಂದಿದೆ.
ಕಾಡಾನೆ ಬಂದದ್ದು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ.
ಕೊಡಗು ಜಿಲ್ಲೆಯ ಪಾಲಿ ಬೆಟ್ಟದಿಂದ ಮೂಡಿಗೆರೆಯ
ಗೋಣಿಬೀಡಿಗೆ ಒಲ್ಡ್ ಬೆಲ್ಟ್ ಕಾಡಾನೆ ಬಂದಿದೆ.
ನಿನ್ನೆ ಬೆಳಗ್ಗೆ ಮಡಿಕೇರಿಯ ಪಾಲಿ ಬೆಟ್ಟದಲ್ಲಿ ಜನರು ಓಲ್ಡ್ ಬೆಲ್ಟ್ ಕಾಡಾನೆಯನ್ನು ಓಡಿಸಿದ್ದರು. ಈ ಕುರಿತು
ಮಡಿಕೇರಿಯ ಪಾಲಿಬೆಟ್ಟದಲ್ಲಿದ್ದ ಸಿಸಿಟಿವಿ ವಿಡಿಯೋ ಕೂಡ ಲಭ್ಯವಿದೆ.


ಸಂಜೆ ವೇಳೆಗೆ ಮರಿಯನ್ನು ಹುಡುಕಿಕೊಂಡು ಮೂಡಿಗೆರೆ ತಾಲೂಕಿನ ಗೋಣಿಬೀಡಿಗೆ ಬಂದಿದೆ. ಓಲ್ಡ್ ಬೆಲ್ಟ್ ಕೊರಳಲ್ಲಿರೋ ರೆಡಿಯೋ ಕಾಲರ್ ನಿಂದ ಲೊಕೇಶನ್ ಮಾಹಿತಿ ಲಭ್ಯವಾಗಿದೆ.
ಸದ್ಯಕ್ಕೆ ಬೇಲೂರು-ಮೂಡಿಗೆರೆಯ ಗಡಿ ಲಕ್ಷ್ಮಿ ಎಸ್ಟೇಟ್ ನಲ್ಲಿದೆಯೆಂಬ ಮಾಹಿತಿ ಇದೆ. ಓಲ್ಡ್ ಬೆಲ್ಟ್ ಮರಿ ತಿಂಗಳುಗಳ ಮುಂಚೆಯೇ ಸಾವನ್ನಪ್ಪಿದೆ.
ಆದರೆ, ಸಾವನ್ನಪ್ಪಿರೋ ಮರಿ ಹುಡುಕಿಕೊಂಡು 150 ಕಿ.ಮೀ ದೂರ ಈ ಹೆಣ್ಣಾನೆ ಬಂದಿದೆ.
ಲಕ್ಷ್ಮಿ ಎಸ್ಟೇಟ್ ಚಿಕ್ಕಮಗಳೂರು-ಹಾಸನ ಜಿಲ್ಲೆಯ ಗಡಿ ಭಾಗದಲ್ಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು