8:27 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

Foreign News | ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ: ನೂರಾರು ಮಂದಿಗೆ ಸುಟ್ಟ ಗಾಯ; ಉಸಿರಾಟ ತೊಂದರೆ

02/04/2025, 22:42

ಕೌಲಾಲಂಪುರ(reporterkarnataka.com): ಮಲೇಷ್ಯಾದ ಕೌಲಾಲಂಪುರ ನಗರದ ಹೊರವಲಯದಲ್ಲಿ ಪುಚಾಂಗ್ ಎಂಬಲ್ಲಿ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 100ಕ್ಕೂ ಹೆಚ್ಚು ಮಂದಿ ಸುಟ್ಟಗಾಯಗೊಂಡಿದ್ದಾರೆ.
ಗ್ಯಾಸ್ ಪೈಪ್ವಲೈನ್ ಸ್ಫೋಟದಿಂದ ನಾಗರಿಕರಿಗೆ
ಉಸಿರಾಟದ ತೊಂದರೆಗೀಡಾಗಿದ್ದಾರೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿದೆ. ಸಾವಿನ ಪ್ರಮಾಣ ಇನ್ನೂ ವರದಿ ಆಗಿಲ್ಲ.
ಈ ಅವಘಡದಲ್ಲಿ ಬೆಂಕಿಯ ಕೆನ್ನಾಲಗೆ 20 ಮಹಡಿಗಳ ಮನೆಯಷ್ಟು ಎತ್ತರಕ್ಕೆ ಹರಡಿದ್ದು, ಐದಾರು ಮೈಲಿ ದೂರದಿಂದಲೂ ಕಾಣಿಸುತ್ತಿದೆ ಅಂತೆ. ಇದು ಎಲ್ಲೋ ದೂರದ ಕಥೆ. ನಮ್ಮ ಕರಾವಳಿಯಲ್ಲೂ ನಾವು ಇಂತಹದೇ ಅಗ್ನಿಕುಂಡದ ಮೇಲೆ ಬದುಕುತ್ತಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. ಮಂಗಳೂರು-ಕೊಚ್ಚಿ ಗ್ಯಾಸ್ ಪೈಪ್‌ಲೈನ್, ಮಂಗಳೂರು – ಹಾಸನ – ಬೆಂಗಳೂರು ಪೈಪ್ ಲೈನ್, ಪೆರ್ಮುದೆಯಿಂದ ಪಾದೂರಿಗೆ ISPRL ಪೈಪ್‌ಲೈನ್.. ಹೀಗೆ.
ರಾಜಕಾರಣಿಗಳ ಗದ್ದಲ, ಬೇಜವಾಬ್ದಾರಿಗಳೆಲ್ಲ ಏನೇ ಇರಲಿ…. ಇಂತಹ ಅಪಾಯಕಾರಿ ಪೈಪ್‌ಲೈನ್‌ಗಳು, ಪೆಟ್ರೋಲಿಯಂ ರಿಸರ್ವ್ ಎಲ್ಲವೂ ಸುವ್ಯವಸ್ಥಿತ ಮತ್ತು ಸುರಕ್ಷಿತವಾಗಿ ಇರುವಂತೆ ಜವಾಬ್ದಾರಿ ಹೊಂದುವ ಬುದ್ಧಿಯನ್ನು ನಮ್ಮ ದೈವದೇವರುಗಳು ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕರುಣಿಸಲಿ. ಈ ಎಲ್ಲ ಪೈಪ್‌ಲೈನ್‌ಗಳು ದಟ್ಟ ಜನಸಂದಣಿಗಳ-ಫಲವತ್ತಾದ ಭೂಮಿಗಳ ನಡುವೆಯೇ ಇರುವಂತಹವು. ಹಾಗಾಗಿ ಕರಾವಳಿಯನ್ನು ಇಂತಹ ಅಗ್ನಿ ಅವಘಡಗಳಿಂದ ರಕ್ಷಿಸುವ ಜವಾಬ್ದಾರಿಯನ್ನು ನಾವು ನಂಬಿದ ದೈವಗಳಿಗೇ ಬಿಡೋಣ.
ಮಲೇಷ್ಯಾದಲ್ಲಿ ಸಂಭವಿಸಿದಂತಹ ಈ ಅವಘಡಗಳ ಸುದ್ದಿ ಕೇಳಿದಾಗಲೆಲ್ಲ, ಮನಸ್ಸು ತಳಮಳಿಸುತ್ತದೆ. ಯಾರದ್ದೋ “ವಿಕಾಸಕ್ಕೆ” ನಮ್ಮ ಜೀವಗಳನ್ನೆಲ್ಲ ನಾವು ಅಡಾವು ಇಟ್ಟು ಕುಳಿತುಕೊಳ್ಳುವ ಸ್ಥಿತಿ ಬಂದಿದೆಯಲ್ಲಾ ಎಂದು.

(ಚಿತ್ರ ಸೌಜನ್ಯ: ರಾಯಿಟರ್)

ಇತ್ತೀಚಿನ ಸುದ್ದಿ

ಜಾಹೀರಾತು