4:36 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

Foreign News | ಮಲೇಷ್ಯಾದಲ್ಲಿ ಗ್ಯಾಸ್ ಪೈಪ್‌ಲೈನ್ ಸ್ಫೋಟ: ನೂರಾರು ಮಂದಿಗೆ ಸುಟ್ಟ ಗಾಯ; ಉಸಿರಾಟ ತೊಂದರೆ

02/04/2025, 22:42

ಕೌಲಾಲಂಪುರ(reporterkarnataka.com): ಮಲೇಷ್ಯಾದ ಕೌಲಾಲಂಪುರ ನಗರದ ಹೊರವಲಯದಲ್ಲಿ ಪುಚಾಂಗ್ ಎಂಬಲ್ಲಿ ಗ್ಯಾಸ್ ಪೈಪ್‌ಲೈನ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 100ಕ್ಕೂ ಹೆಚ್ಚು ಮಂದಿ ಸುಟ್ಟಗಾಯಗೊಂಡಿದ್ದಾರೆ.
ಗ್ಯಾಸ್ ಪೈಪ್ವಲೈನ್ ಸ್ಫೋಟದಿಂದ ನಾಗರಿಕರಿಗೆ
ಉಸಿರಾಟದ ತೊಂದರೆಗೀಡಾಗಿದ್ದಾರೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಾಗಿದೆ. ಸಾವಿನ ಪ್ರಮಾಣ ಇನ್ನೂ ವರದಿ ಆಗಿಲ್ಲ.
ಈ ಅವಘಡದಲ್ಲಿ ಬೆಂಕಿಯ ಕೆನ್ನಾಲಗೆ 20 ಮಹಡಿಗಳ ಮನೆಯಷ್ಟು ಎತ್ತರಕ್ಕೆ ಹರಡಿದ್ದು, ಐದಾರು ಮೈಲಿ ದೂರದಿಂದಲೂ ಕಾಣಿಸುತ್ತಿದೆ ಅಂತೆ. ಇದು ಎಲ್ಲೋ ದೂರದ ಕಥೆ. ನಮ್ಮ ಕರಾವಳಿಯಲ್ಲೂ ನಾವು ಇಂತಹದೇ ಅಗ್ನಿಕುಂಡದ ಮೇಲೆ ಬದುಕುತ್ತಿದ್ದೇವೆ ಎಂಬುದನ್ನು ಮರೆಯುವಂತಿಲ್ಲ. ಮಂಗಳೂರು-ಕೊಚ್ಚಿ ಗ್ಯಾಸ್ ಪೈಪ್‌ಲೈನ್, ಮಂಗಳೂರು – ಹಾಸನ – ಬೆಂಗಳೂರು ಪೈಪ್ ಲೈನ್, ಪೆರ್ಮುದೆಯಿಂದ ಪಾದೂರಿಗೆ ISPRL ಪೈಪ್‌ಲೈನ್.. ಹೀಗೆ.
ರಾಜಕಾರಣಿಗಳ ಗದ್ದಲ, ಬೇಜವಾಬ್ದಾರಿಗಳೆಲ್ಲ ಏನೇ ಇರಲಿ…. ಇಂತಹ ಅಪಾಯಕಾರಿ ಪೈಪ್‌ಲೈನ್‌ಗಳು, ಪೆಟ್ರೋಲಿಯಂ ರಿಸರ್ವ್ ಎಲ್ಲವೂ ಸುವ್ಯವಸ್ಥಿತ ಮತ್ತು ಸುರಕ್ಷಿತವಾಗಿ ಇರುವಂತೆ ಜವಾಬ್ದಾರಿ ಹೊಂದುವ ಬುದ್ಧಿಯನ್ನು ನಮ್ಮ ದೈವದೇವರುಗಳು ನಮ್ಮ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಕರುಣಿಸಲಿ. ಈ ಎಲ್ಲ ಪೈಪ್‌ಲೈನ್‌ಗಳು ದಟ್ಟ ಜನಸಂದಣಿಗಳ-ಫಲವತ್ತಾದ ಭೂಮಿಗಳ ನಡುವೆಯೇ ಇರುವಂತಹವು. ಹಾಗಾಗಿ ಕರಾವಳಿಯನ್ನು ಇಂತಹ ಅಗ್ನಿ ಅವಘಡಗಳಿಂದ ರಕ್ಷಿಸುವ ಜವಾಬ್ದಾರಿಯನ್ನು ನಾವು ನಂಬಿದ ದೈವಗಳಿಗೇ ಬಿಡೋಣ.
ಮಲೇಷ್ಯಾದಲ್ಲಿ ಸಂಭವಿಸಿದಂತಹ ಈ ಅವಘಡಗಳ ಸುದ್ದಿ ಕೇಳಿದಾಗಲೆಲ್ಲ, ಮನಸ್ಸು ತಳಮಳಿಸುತ್ತದೆ. ಯಾರದ್ದೋ “ವಿಕಾಸಕ್ಕೆ” ನಮ್ಮ ಜೀವಗಳನ್ನೆಲ್ಲ ನಾವು ಅಡಾವು ಇಟ್ಟು ಕುಳಿತುಕೊಳ್ಳುವ ಸ್ಥಿತಿ ಬಂದಿದೆಯಲ್ಲಾ ಎಂದು.

(ಚಿತ್ರ ಸೌಜನ್ಯ: ರಾಯಿಟರ್)

ಇತ್ತೀಚಿನ ಸುದ್ದಿ

ಜಾಹೀರಾತು