9:32 AM Friday16 - January 2026
ಬ್ರೇಕಿಂಗ್ ನ್ಯೂಸ್
ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ…

ಇತ್ತೀಚಿನ ಸುದ್ದಿ

Eduction & Employment | ದುಬಾರಿಯಾದ ಜೀವನ ವ್ಯವಸ್ಥೆಯಲ್ಲಿ ದೀರ್ಘಕಾಲಿಕ ಶಿಕ್ಷಣ ವ್ಯವಸ್ಥೆ ಬೇಕೇ?

21/04/2025, 15:43

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ದಿನದಿಂದ ದಿನಕ್ಕೆ ಜೀವನದ ವೆಚ್ಚ ಏರುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಬದುಕು ತೀವ್ರ ಸಂಕಷ್ಟದತ್ತ ಸಾಗುತ್ತಿದೆ. ಆಹಾರ, ಬಾಡಿಗೆ, ಆರೋಗ್ಯ, ಸಾರಿಗೆ, ವಿದ್ಯುತ್, ನೀರು ಮತ್ತು ಇತರ ಮೂಲಭೂತ ಅಗತ್ಯ ಸೇವೆಗಳು ಈಗ ದುಬಾರಿಯ ಗಡಿಯಾಚಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಣವೂ ವ್ಯಾಪಾರೀಕರಣದ ದಾರಿಯಲ್ಲೇ ಸಾಗುತ್ತಿರುವುದರಿಂದ, “ಈ ದುಡಿಮೆಯ ಯುಗದಲ್ಲಿ ದೀರ್ಘಕಾಲಿಕ ಶಿಕ್ಷಣವೇಕೆ?” ಎಂಬ ಪ್ರಶ್ನೆ ಬಹುಜನರ ಮನದಲ್ಲಿ ಮೂಡುತ್ತಿದೆ.
ಒಂದೆಡೆ ಪದವೀಧರರಾಗುವವರೆಗೆ ಭಾರಿ ವೆಚ್ಚದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು, ನಂತರ ಉದ್ಯೋಗವಿಲ್ಲದೇ ನಿರಾಶೆಯಲ್ಲಿ ಸಿಲುಕುವ ಘಟನೆಗಳು ಹೆಚ್ಚುತ್ತಿರುವಾಗ, ಇನ್ನೊಂದೆಡೆ “ಸಣ್ಣ ಕೋರ್ಸ್ ಮಾಡಿ ಕೆಲಸ ಪಡೆಯೋಣ” ಎಂಬ ತಾತ್ಕಾಲಿಕ ಧೋರಣೆ ಸಹ ಸಾಮಾನ್ಯವಾಗಿದೆ. ತಾತ್ಕಾಲಿಕ ನೆಮ್ಮದಿಗೆ ಇದು ಸಹಕಾರಿಯಾಗಬಹುದು, ಆದರೆ ದೀರ್ಘಾವಧಿಯಲ್ಲಿ ಸಮರ್ಥ ಪರಿಹಾರವಲ್ಲ ಎಂಬುದರಲ್ಲಿ ತಜ್ಞರೊಬ್ಬರಿಗೂ ಅನುಮಾನವಿಲ್ಲ.
ದೀರ್ಘಕಾಲಿಕ ಶಿಕ್ಷಣ ಎಂದರೆ ಕೇವಲ ಪದವಿ ಪೂರ್ಣಗೊಳಿಸುವುದಲ್ಲ; ಇದು ನಿರಂತರ ಕಲಿಕೆಯ ಪ್ರಕ್ರಿಯೆ. ಬದಲಾಗುತ್ತಿರುವ ತಂತ್ರಜ್ಞಾನ, ಆರ್ಥಿಕತೆ ಹಾಗೂ ಸಾಮಾಜಿಕ ಪರಿವರ್ತನೆಗಳಿಗೆ ತಕ್ಕಂತೆ ಹೊಸ ಜ್ಞಾನವನ್ನು ಪಡೆದುಕೊಳ್ಳುವ ತವಕ ವ್ಯಕ್ತಿತ್ವದ ವೃದ್ಧಿಗೆ ಹಾಗೂ ಉದ್ಯೋಗಸಾಧ್ಯತೆಗಳಿಗೆ ಆಧಾರಸ್ತಂಭವಾಗಿದೆ. ಶಿಕ್ಷಣವು ವ್ಯಕ್ತಿಗೆ ವಿಶ್ಲೇಷಣಾ ಶಕ್ತಿ, ಜವಾಬ್ದಾರಿಯ ಭಾವನೆ ಹಾಗೂ ಸಮಾಜದ ಬಗ್ಗೆ ಅರಿವು ನೀಡುವ ಪ್ರಮುಖ ಸಾಧನವಾಗಿದೆ.
ಈ ಭವಿಷ್ಯ ನಿರ್ಮಾಣದಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ತ್ರಿಕೋನದಂತೆ ಕಾರ್ಯನಿರ್ವಹಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ, ಆಧುನಿಕ ಪಠ್ಯಕ್ರಮ, ತಾಂತ್ರಿಕ ಹಾಗೂ ವಿದೇಶಿ ಭಾಷಾ ತರಬೇತಿ ನೀಡುವ ಕಾರ್ಯಕ್ಕೆ ಆದ್ಯತೆ ನೀಡಬೇಕು.
“ಶಿಕ್ಷಣವೆಂದರೆ ಖರ್ಚು ಅಲ್ಲ, ಭವಿಷ್ಯದ ಹೂಡಿಕೆ” ಎಂಬ ಮನೋಭಾವ ಬೆಳೆಸಿದರೆ ಮಾತ್ರ ನಾವು ಅರಿವಿನ ಸಮಾಜವೊಂದನ್ನು ರೂಪಿಸಬಲ್ಲೆವು. ದುಬಾರಿ ಜಗತ್ತಿನಲ್ಲಿ ದೀರ್ಘಕಾಲಿಕ ಶಿಕ್ಷಣವೇ ನಿಜವಾದ ಬೆಳಗಿನ ಬೆಳಕು.ದುಬಾರಿಯಾದ ದುನಿಯಾ ಜೀವನ ವ್ಯವಸ್ಥೆಯಲ್ಲಿ ದೀರ್ಘಕಾಲಿಕ ಶಿಕ್ಷಣ ವ್ಯವಸ್ಥೆ ಬೇಕೇ ?

ಇತ್ತೀಚಿನ ಸುದ್ದಿ

ಜಾಹೀರಾತು