2:00 PM Monday7 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಇದೇನು ಕೊರೊನಾ ಮೆರವಣಿಗೆಯೇ ?: ಸರಕಾರದ ಗೈಡ್ ಲೈನ್ಸ್ ಸಚಿವ ಲಿಂಬಾವಳಿ, ಶಾಸಕ ಸುನಿಲ್ ಗೆ ಅನ್ವಯಿಸುವುದಿಲ್ಲವೇ?

11/07/2021, 18:58

ಕಾರ್ಕಳ(reporterkarnataka news): ಒಂದು ಕಡೆ ಕೊರೊನಾ ಎರಡನೇ ಅಲೆಯ ಅರ್ಭಟ ಇನ್ನೂ ತಗ್ಗಿಲ್ಲ. ಇನ್ನೊಂದು ಕಡೆ ಮೂರನೇ ಅಲೆಯ ಭೀತಿ ಶುರುವಾಗಿದೆ. ಇವೆಲ್ಲದರ ನಡುವೆ ರಾಜಕೀಯ ಮೇಲಾಟ ಶುರುವಾಗಿದೆ. ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಎರಡೂ ಕೂಡ ಅಲ್ಲಲ್ಲಿ ಸಭೆ- ಸಮಾರಂಭ ಆಯೋಜಿಸುತ್ತಿವೆ. ಜನರು ಕೂಡ ಯಾವುದೇ ಭಯವಿಲ್ಲದೆ ಹುಚ್ಚೆದ್ದು ಸೇರುತ್ತಿದ್ದಾರೆ. ಇದಕ್ಕೊಂದು ಸಾಕ್ಷಿ ಕಾರ್ಕಳದ ಬಲ್ಲಿರಿ ಗ್ರಾಮದಲ್ಲಿ ನಡೆದ ಸಮಾರಂಭ.

ಮೊನ್ನೆ ಮೊನ್ನೆ ಮಂಗಳೂರು, ಉಡುಪಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಸಭೆ – ಸಂವಾದ ನಡೆಯಿತು. ಇಂದು ಮಂಗಳೂರು ರೈಲು ನಿಲ್ದಾಣದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದಲ್ಲಿ ಗಾಜಿನ ಛಾವಣಿಯ ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮ ನಡೆಯಿತು. ಎಲ್ಲೂ ಸಾಮಾಜಿಕ ಅಂತರವಿರಲಿಲ್ಲ.


ಇದರ ಜತೆಗೆ ಕಾರ್ಕಳದ ನಲ್ಲೂರು ಗ್ರಾಮದಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಭಾರಿ ಗೌಜಿ ಗಮತ್ತಿನ ಮೆರವಣಿಗೆ ನಡೆಯಿತು. ಪದ್ಮಶ್ರೀ ಸಾಲುಮರ ತಿಕ್ಕಮ್ಮ ವೃಕ್ಚ್ಯೋದ್ಯಾನಕ್ಕೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಇದಾಗಿತ್ತು. ಕೇರಳ ಶೈಲಿಯ ಚೆಂಡೆ, ಗೊಂಬೆ ಕುಣಿತದೊಂದಿಗೆ ಶಿಲಾನ್ಯಾಸ ನಡೆಯುವ ಸ್ಥಳಕ್ಕೆ ಸಚಿವ ಲಿಂಬಾವಳಿ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಕಾರ್ಕಳ ಶಾಸಕ ಸುನಿಲ್ ಕುಮಾರ್ ಮುಂತಾದ ಗಣ್ಯರು ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನವರ ಬಾಯಿಯಲ್ಲಿ ಮಾಸ್ಕ್ ಇರುವುದು ಬಿಟ್ಟರೆ ಸಾಮಾಜಿಕ ಅಂತರ ಎಲ್ಲೂ ಇರಲಿಲ್ಲ. ಸಚಿವರು, ಶಾಸಕರು, ಸಾರ್ವಜನಿಕರು ಹೆಗಲಿಗೆ ಹೆಗಲು ತಾಗಿಸಿಕೊಂಡಿಯೇ ಮೆರವಣಿಗೆಯಲ್ಲಿ ಸಾಗಿದರು. ರಾಜ್ಯ ಸರಕಾರದ ಗೈಡ್ಸ್ ಲೈನ್ ಪಾಲನೆ

ಸಚಿವ, ಶಾಸಕರಿಗೆ ಬೇಕಾಗಿಲ್ಲ. ಇವರಿಗೆ ಕೊರೊನಾದ ಭಯವಿಲ್ಲ. ಯಾಕೆಂದರೆ ಇವರದೆಲ್ಲ ಎರಡು ಡೋಸ್ ಲಸಿಕೆಯಾಗಿದೆ. ಇಮ್ಯುನಿಟಿ ಬೂಸ್ಟರ್ ಸೇವಿಸುತ್ತಾರೆ. ಅಗತ್ಯ ಬಿದ್ದರೆ ಆಕ್ಸಿಜನ್ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತದೆ.

ಆದರೆ ಬಡಪಾಯಿಗಳ ಗತಿ ಏನು? ನಾವೇ ಚಿಂತಿಸಿ, ಉತ್ತರ ಕಂಡುಕೊಳ್ಳಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು