6:13 PM Friday18 - April 2025
ಬ್ರೇಕಿಂಗ್ ನ್ಯೂಸ್
Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:… Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ

ಇತ್ತೀಚಿನ ಸುದ್ದಿ

ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳಿಂದ ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಮತ್ತು ಮಜ್ಜಿಗೆ ವಿತರಣೆ

25/02/2025, 15:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಹಾಶಿವರಾತ್ರಿ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಹೊರ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಮಲೆನಾಡು ಪ್ರದೇಶದಲ್ಲಿ ವಿಶಿಷ್ಟ ಭಕ್ತಿಯ ಸ್ಮರಣೆ ಮೂಡಿಸಿತು. ದೈವ ಮಾನವ ಎಂದೇ ಹೆಸರುವಾಸಿಯಾಗಿದ್ದ ದಿ. ಮಹೇಂದ್ರ ಕುಮಾರ್ ಪಲ್ಗುಣಿ ಅವರ ಸವಿನೆನಪಿನಲ್ಲಿ ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳು ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು ಮತ್ತು ಮಜ್ಜಿಗೆ ಹಂಚುವ ಮೂಲಕ ಅವರ ಭಕ್ತಿಯ ನಮನವನ್ನು ಸಲ್ಲಿಸಿದರು.


ಈ ಪುಣ್ಯ ಕಾರ್ಯದಲ್ಲಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಸೇರಿದಂತೆ ಹಲವರು ಭಾಗವಹಿಸಿದರು. ಅವರ ಜೊತೆ ನಟ ತರುಣ್ ಶಿಶೀರ್, ಛಾಯಾಗ್ರಾಹಕರು ಪಿಕೆ ಹೆಚ್ ದಾಸ್, ರವಿಕುಮಾರ್ ಬೆಂಗಳೂರು, ರಾಕೇಶ್ ರೇವಣ್ಣ, ರಿಜ್ವಾನ್, ಪ್ರವೀಣ್ ಪೂಜಾರಿ, ನಿರಂಜನ್ ಜಿಂದಾಲ್, ಮತ್ತು ಪ್ರಕರ್ತಾ ಸಂತೋಷ್ ಅತ್ತಿಗೆರೆ ಹಾಜರಿದ್ದರು.
ಮರಡಿಹಳ್ಳಿ ನಾಗಚಂದ್ರ ಅವರ ಗುರು ಭಕ್ತಿ ಮತ್ತು ಬದುಕಿನ ಮೇಲೆ ಅವರ ಪ್ರಭಾವದ ಕಥೆ ವಿಶೇಷವಾಗಿದೆ. ಅವರು ಗುರುಗಳೊಂದಿಗೆ 25 ವರ್ಷಗಳ ಪರಿಚಯವನ್ನು ಹೊಂದಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನದಿಂದ “ನಾಗಚಂದ್ರ” ಎಂಬ ಹೆಸರನ್ನು ಬದಲಾಯಿಸಿ “ಮರಡಿಹಳ್ಳಿ ನಾಗಚಂದ್ರ” ಎಂಬ ಹೊಸ ಗುರುತನ್ನು ಗಳಿಸಿದರು. ಗುರುಗಳ ಸ್ಪೂರ್ತಿಯಿಂದ ಅವರ ಬದುಕಿಗೆ ದಾರಿ ದೀಪ ಸಿಕ್ಕಿತು. ಚಿತ್ರರಂಗದಲ್ಲಿ ಗುರುಗಳ ನಂಟು ಅಪಾರವಾಗಿದ್ದು, ಅವರಿಂದ ಪಡೆದ ಸ್ಫೂರ್ತಿಯಿಂದ नागಚಂದ್ರ ಅವರ ಚಿತ್ರಜೀವನ ಗಾಢವಾಗಿದೆ.

ಈ ಪ್ರಸಂಗವು ಗುರು-ಶಿಷ್ಯರ ಅಜರಾಮರ ಸಂಬಂಧವನ್ನು ಸ್ಮರಿಸಿತು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಸಂದೇಶವು ಈ ಕಾರ್ಯಕ್ರಮದ ಆತ್ಮವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು