10:02 PM Wednesday18 - February 2026
ಬ್ರೇಕಿಂಗ್ ನ್ಯೂಸ್
ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್

ಇತ್ತೀಚಿನ ಸುದ್ದಿ

ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳಿಂದ ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಮತ್ತು ಮಜ್ಜಿಗೆ ವಿತರಣೆ

25/02/2025, 15:06

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮಹಾಶಿವರಾತ್ರಿ ಅಂಗವಾಗಿ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಹೊರ ಜಿಲ್ಲೆಗಳಿಂದ ಬರುವ ಭಕ್ತಾದಿಗಳಿಗೆ ಮಲೆನಾಡು ಪ್ರದೇಶದಲ್ಲಿ ವಿಶಿಷ್ಟ ಭಕ್ತಿಯ ಸ್ಮರಣೆ ಮೂಡಿಸಿತು. ದೈವ ಮಾನವ ಎಂದೇ ಹೆಸರುವಾಸಿಯಾಗಿದ್ದ ದಿ. ಮಹೇಂದ್ರ ಕುಮಾರ್ ಪಲ್ಗುಣಿ ಅವರ ಸವಿನೆನಪಿನಲ್ಲಿ ಪಲ್ಗುಣಿ ಒಕ್ಕೂಟದ ವಾಟ್ಸಪ್ ಗ್ರೂಪಿನ ಅಭಿಮಾನಿಗಳು ಭಕ್ತಾದಿಗಳಿಗೆ ಕಲ್ಲಂಗಡಿ ಹಣ್ಣು, ದ್ರಾಕ್ಷಿ ಹಣ್ಣು ಮತ್ತು ಮಜ್ಜಿಗೆ ಹಂಚುವ ಮೂಲಕ ಅವರ ಭಕ್ತಿಯ ನಮನವನ್ನು ಸಲ್ಲಿಸಿದರು.


ಈ ಪುಣ್ಯ ಕಾರ್ಯದಲ್ಲಿ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಮರಡಿಹಳ್ಳಿ ನಾಗಚಂದ್ರ ಸೇರಿದಂತೆ ಹಲವರು ಭಾಗವಹಿಸಿದರು. ಅವರ ಜೊತೆ ನಟ ತರುಣ್ ಶಿಶೀರ್, ಛಾಯಾಗ್ರಾಹಕರು ಪಿಕೆ ಹೆಚ್ ದಾಸ್, ರವಿಕುಮಾರ್ ಬೆಂಗಳೂರು, ರಾಕೇಶ್ ರೇವಣ್ಣ, ರಿಜ್ವಾನ್, ಪ್ರವೀಣ್ ಪೂಜಾರಿ, ನಿರಂಜನ್ ಜಿಂದಾಲ್, ಮತ್ತು ಪ್ರಕರ್ತಾ ಸಂತೋಷ್ ಅತ್ತಿಗೆರೆ ಹಾಜರಿದ್ದರು.
ಮರಡಿಹಳ್ಳಿ ನಾಗಚಂದ್ರ ಅವರ ಗುರು ಭಕ್ತಿ ಮತ್ತು ಬದುಕಿನ ಮೇಲೆ ಅವರ ಪ್ರಭಾವದ ಕಥೆ ವಿಶೇಷವಾಗಿದೆ. ಅವರು ಗುರುಗಳೊಂದಿಗೆ 25 ವರ್ಷಗಳ ಪರಿಚಯವನ್ನು ಹೊಂದಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನದಿಂದ “ನಾಗಚಂದ್ರ” ಎಂಬ ಹೆಸರನ್ನು ಬದಲಾಯಿಸಿ “ಮರಡಿಹಳ್ಳಿ ನಾಗಚಂದ್ರ” ಎಂಬ ಹೊಸ ಗುರುತನ್ನು ಗಳಿಸಿದರು. ಗುರುಗಳ ಸ್ಪೂರ್ತಿಯಿಂದ ಅವರ ಬದುಕಿಗೆ ದಾರಿ ದೀಪ ಸಿಕ್ಕಿತು. ಚಿತ್ರರಂಗದಲ್ಲಿ ಗುರುಗಳ ನಂಟು ಅಪಾರವಾಗಿದ್ದು, ಅವರಿಂದ ಪಡೆದ ಸ್ಫೂರ್ತಿಯಿಂದ नागಚಂದ್ರ ಅವರ ಚಿತ್ರಜೀವನ ಗಾಢವಾಗಿದೆ.

ಈ ಪ್ರಸಂಗವು ಗುರು-ಶಿಷ್ಯರ ಅಜರಾಮರ ಸಂಬಂಧವನ್ನು ಸ್ಮರಿಸಿತು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಸಂದೇಶವು ಈ ಕಾರ್ಯಕ್ರಮದ ಆತ್ಮವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು