5:25 AM Sunday28 - June 2026
ಬ್ರೇಕಿಂಗ್ ನ್ಯೂಸ್
2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ

30/07/2025, 18:06

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ದೂರುದಾನ ಸಮ್ಮುಖದಲ್ಲಿ ಸ್ಪಾಟ್ ನಂಬರ್ 2 ಮತ್ತು 3ರ ಅಗೆತ ನಡೆದಿದ್ದು, ಯಾವುದೇ ಅಸ್ತಿಪಂಜರ ಲಭ್ಯವಾಗಿಲ್ಲದ ಹಿನ್ನೆಲೆಯಲ್ಲಿ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭಗೊಂಡಿದೆ.
ಈಗಾಗಲೇ ಉತ್ಖನನ ನಡೆಸಿದ ಸ್ಪಾಟ್ ನಂಬರ್ 1,2 ಮತ್ತು 3ಕ್ಕಿಂತ ಈ ಪ್ರದೇಶ ಭೌಗೋಳಿಕ ಸ್ವಲ್ಪ ಭಿನ್ನವಾಗಿದೆ. ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರ ಜತೆ ಎಸ್ಐಟಿ ತಂಡ ಸ್ಪಾಟ್ ನಂಬರ್ 4ಕ್ಕೆ ತೆರಳಿದೆ. ಕಡಿದಾದ ದಾರಿಯಲ್ಲಿ ಈ ಸ್ಪಾಟ್ ಗೆ ಎಸ್ ಐಟಿ ಹಾಗೂ ಅಧಿಕಾರಿಗಳ ತಂಡ ತೆರಳಬೇಕಾಗಿದೆ.
ಇಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ.
ಶವ ಹೂತ್ತಿಟ್ಟ ಸ್ಥಳದ ಉತ್ಖನನ ಕಾರ್ಯ ನಿನ್ನೆ(ಮಂಗಳವಾರ) ಆರಂಭಿಸಲಾಗಿತ್ರು. ನಿನ್ನೆ ಸ್ಪಾಟ್ ನಂಬರ್ 1ರಲ್ಲಿ ಅಗೆತ ನಡೆಸಲಾಗಿತ್ರು. ಆದರೆ, ಎಸ್ ಐಟಿ ತಂಡ ಯಾವುದೇ ಅಸ್ತಿಪಂಜರ ಸಿಗದ ಬರಿಗೈಯಲ್ಲಿ ವಾಪಸಾಗಿತ್ತು. ಎರಡನೇ ದಿನವಾದ ಇಂದು(ಬುಧವಾರ) ಸ್ಪಾಟ್ 2, 3ರಲ್ಲಿ ಮಧ್ಯಾಹ್ನ 3 ಗಂಟೆ ತನಕ ಉತ್ಖನನ ನಡೆಸಿತ್ತು. ಆದರೆ ಅಸ್ತಿಪಂಜರವಿರುವ ಯಾವುದೇ ಕುರುಹು ಲಭ್ಯವಾಗಲಿಲ್ಲ. ಆದರೆ, ಸ್ಪಾಟ್ ನಂಬರ್ 1ರಲ್ಲಿ ಡೆಬಿಟ್ ಮತ್ತು ಪಾನ್ ಕಾರ್ಡ್ ಲಭ್ಯವಾಗಿರುವ ಮಾಹಿತಿ ಇದೆ. ಇದೀಗ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭವಾಗಿದೆ. ಇಂದು ಸ್ಪಾಟ್ ನಂಬರ್ 2, 3 ಮತ್ತು 4ರ ಉತ್ಖನನ ನಡೆಸಲು ಈ ಮುನ್ನವೇ ನಿರ್ಧರಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು