2:22 PM Wednesday18 - February 2026
ಬ್ರೇಕಿಂಗ್ ನ್ಯೂಸ್
ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ

ಇತ್ತೀಚಿನ ಸುದ್ದಿ

ದೇವಿಯ ಬಿಂಬಕ್ಕೆ ನೇತ್ರವಿಟ್ಟು ಜನರ ವಂಚನೆಗೆ ಯತ್ನ: ಕೃತಕ ಕಣ್ಣು ಕೀಳಿಸಿ ಬ್ರೇಕ್ ಹಾಕಿದ ಲೇಡಿ ತಹಶೀಲ್ದಾರ್! 

03/07/2021, 08:01

ಬೆಳಗಾವಿ(reporterkarnataka news): ಕಾಗವಾಡಿ ತಾಲೂಕಿನ ಐನಾಪುರ ಗ್ರಾಮದ ಸಂತೂ ಬಾಯಿ ದೇವಸ್ಥಾನದಲ್ಲಿ ದೇವರಿಗೆ ಕೃತಕ ಕಣ್ಣುಗಳನ್ನಿಟ್ಟು ಜನರನ್ನು ಮೂಢನಂಬಿಕೆಗೆ ತಳ್ಳುವ ಪ್ರಯತ್ನವನ್ನು ಅಲ್ಲಿನ ತಹಶೀಲ್ದಾರ್ ವಿಫಲಗೊಳಿಸಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲೇ ದೇವಿಯ ಬಿಂಬಕ್ಕೆ ಅಂಟಿಸಲಾದ ಕೃತಕ ಕಣ್ಣುಗಳನ್ನು ಪೂಜಾರಿಯ ಕೈಯಿಂದಲೇ ತೆಗೆದಿದ್ದಾರೆ.

ದೇವಿಯ ಬಿಂಬಕ್ಕೆ ಕೆಲವು ಕಿಡಿಗೇಡಿಗಳು ಕಣ್ಣನ್ನು ಅಂಟಿಸಿ ಜನರನ್ನು ಮೂಢನಂಬಿಕೆಗೆ ತಳ್ಳಲು ಯತ್ನಿಸಿದ್ದರು. ದೇವಿ ಕೋಪಗೊಂಡು ಕಣ್ಣು ಬಿಟ್ಟಿದ್ದಾಳೆ ಎಂದು ಜನರನ್ನು ಹೆದರಿಸುವ ತಂತ್ರ ಇದಾಗಿತ್ತು. ಆದರೆ ತಹಶೀಲ್ದಾರ್ ಪ್ರಮೀಳಾ ದೇಶಪಾಂಡೆ ಅವರು ಗ್ರಾಮಕ್ಕೆ ಭೇಟಿ ನೀಡಿ ಗುಡಿಯಲ್ಲಿ ದೇವಿಯ ಬಿಂಬವನ್ನು ಪರಿಶೀಲಿಸಿ ಕೃತಕ ಕಣ್ಣು ತೆಗೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು