10:42 AM Tuesday22 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ…

ಇತ್ತೀಚಿನ ಸುದ್ದಿ

ಸಿ.ಟಿ‌. ರವಿ ಪತ್ರ ಬರೆದಿದ್ದಾರೆ, ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ: ಸಭಾಪತಿ ಬಸವರಾಜ್ ಹೊರಟ್ಟಿ

25/12/2024, 16:58

ಹುಬ್ಬಳ್ಳಿ(reporterkarnataka.com): ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಈಗಾಗಲೇ 7 ಪೇಜ್ ಗಳ ಪತ್ರವನ್ನು ಬರೆದಿದ್ದಾರೆ. ಆದರೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರಿಂದ ಇದುವರೆಗೆ ಯಾವುದೇ ಪತ್ರ ಬಂದಿಲ್ಲ‌ ಎಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಈ ಕುರಿತು ನಗರದಲ್ಲಿ‌ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷತ್ ಸದಸ್ಯರಾದ ಸಿ.ಟಿ. ರವಿಯವರು ಪತ್ರದಲ್ಲಿ ಪೊಲೀಸರು ನಡೆಸಿಕೊಂಡಿರುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿ.ಟಿ. ರವಿಯವರು ಸ್ಟ್ರೈಕ್ ಮಾಡುವ ವೇಳೆ ಸಂಜೆ 6 ಗಂಟೆಗೆ ಪೊಲೀಸರ ವಶಕ್ಕೆ ಪಡೆದಿರುವುದು ಹೇಳಿಕೊಂಡಿದ್ದಾರೆ.‌ ರವಿಯವರು ನಮ್ಮ ಸದನದ ಸದಸ್ಯರಾಗಿದ್ದು, ಹಾಗಾಗಿ‌ ಅವರ ಹಕ್ಕುಚ್ಯುತಿ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಜತೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಇನ್ನೂ
ಬಂದಿಲ್ಲ. ಘಟನಾ ದಿನ ಲಕ್ಷ್ಮೀ ‌ಅವರು ನೋವಿನಲ್ಲಿದ್ದರು, ಇತ್ತೀಚಿನ ಎರಡು ದಿನಗಳಿಂದ ಮಾಧ್ಯಮಗಳಲ್ಲಿ‌ ಅವರ ಹೇಳಿಕೆ ಗಮನಿಸಿದ್ದೇವೆ. ಅವರ ಹೇಳಿಕೆ ನೋಡಿದ್ದಾಗ‌ ಅವರು ನೊಂದಿರುವುದು ಗೊತ್ತಾಗುತ್ತೆ. ಕಾನೂನು ತನಿಖೆ ಹೊರತುಪಡಿಸಿ ಹೆಣ್ಮಕ್ಕಳಿಗೆ‌ ಗೌರವ ನೀಡುವುದು ನಮ್ಮ‌ ಧರ್ಮ. ನಮ್ಮಗೂ ಹೆಣ್ಮಕ್ಕಳು ಇದ್ದಾರೆ. ಲಕ್ಷ್ಮೀ ಅವರು ನಮ್ಮಗೆ ಮಗಳೆ ಅಂತಾ ತಿಳ್ಕೊಂಡಿದ್ದೇವೆ.‌ ಸಿಎಂ ಅವರೊಂದಿಗೆ ಮಾತಾಡಿ ಸದ್ಯ ಈ ವಾತಾವರಣ ತಿಳಿ ಮಾಡೋ ಪ್ರಯತ್ನದಲ್ಲಿದ್ದೇನಿ. ನನ್ನ ತೀರ್ಮಾನ ತೆಗೆದುಕೊಂಡಿದ್ದೇನೆ, ಅದಕ್ಕೆ ಬಹುತೇಕರು ಒಳ್ಳೆಯ ತೀರ್ಮಾನ ಅಂತಿದ್ದಾರೆ.‌ ಯಾರಿಗೂ ನೋವಾಗದ ರೀತಿಯಲ್ಲಿ ತೀರ್ಮಾನ ಮಾಡಿದ್ದೇನಿ. ಪರಿಷತ್ ಸದನದ ಘಟನೆಯ ಕುರಿತು ರಾಜ್ಯಪಾಲರ ಮಾಹಿತಿ ಕೇಳಿರುವ ವಿಚಾರ ಮಾತನಾಡಿ, ರಾಜ್ಯಪಾಲರು ಮಾಹಿತಿ ಕೇಳಿರುವುದು ನಿಜ. 19 ದಿನಾಂಕದಂದು ಆಗಿರುವ ಘಟನೆ ವಿವರಣೆ ಕೇಳಿದರು, ರಾಜ್ಯಪಾಲರಿಗೆ ವಿವರಣೆ ನೀಡಿದ್ದೇನಿ. ಡಿಸೆಂಬರ್ 27 ರಂದು ಬೆಳಗಾವಿಗೆ ತೆರಳಲಿದ್ದೇನಿ ಸಿಕ್ಕರೆ ಮಾತಾಡುತ್ತೇನೆ, ಇಲ್ವಾದಲ್ಲಿ ಬೆಂಗಳೂರಿನಲ್ಲಿ ಮಾತಾಡುತ್ತೇನೆ. ಈ ಪ್ರಕರಣ ಸಾಮಾಧಾನ ಮಾಡೋ ಜವಾಬ್ದಾರಿ ಎಲ್ಲರ ಮೇಲೂ ಇದೆ, ಸಮಾಧಾನ ಮಾಡೋವುದು ಎಲ್ಲರಿಗೂ ಒಳ್ಳೆಯದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು