9:56 AM Wednesday17 - September 2025
ಬ್ರೇಕಿಂಗ್ ನ್ಯೂಸ್
Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಕಾಂಗ್ರೆಸ್ ತಾಲಿಬಾನ್ ರೀತಿ ಆಡಳಿತ ನಡೆಸುತ್ತಿದೆ: ಮಂಗಳೂರಿನಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪ

12/06/2024, 16:24

ಮಂಗಳೂರು(reporterkarnataka.com): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೋಮು ಸೌಹಾರ್ದತೆ ಹಾಳು ಮಾಡುವ ಮೂಲಕ ತಾಲಿಬಾನಿ ರೀತಿಯಲ್ಲಿ ಸರಕಾರ ನಡೆಸುತ್ತಿದೆ. ತಾಲಿಬಾನ್ ಸರಕಾರವನ್ನು ನಾವು ಬಗ್ಗು ಬಡಿಯುತ್ತೇವೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಮಂಗಳೂರಿನ ಹೊರ ವಲಯದ ಬೋಳ್ಯಾರ್‌ನಲ್ಲಿ ನಡೆದ ಚೂರಿ ಇರಿತ ಪ್ರಕರಣದ ಕುರಿತು ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು
ಭಾರತ್ ಮಾತಾ ಕೀ ಜೈ ಘೋಷಣೆ ಮಾತ್ರ ಕೂಗಿದ್ದಾರೆ.
ನಂತರ ಅವರನ್ನು ಅಟ್ಟಾಡಿಸಿ ಡ್ರ್ಯಾಗನ್ ನಿಂದ ಹೊಟ್ಟೆಗೆ ತುಚ್ಚಿದ್ದಾರೆ. ಅವರ ಕೈಯಲ್ಲಿ ಡ್ರ್ಯಾಗನ್‌ ಹೇಗೆ ಬಂತು, ಇದು ಪೂರ್ವ ನಿಯೋಜಿತ ಕೊಲೆ ಪ್ರಯತ್ನ ಎಂದು ಆರ್. ಅಶೋಕ್ ಆಪಾದಿಸಿದರು.


ವಿಧಾನಸಭೆಯಲ್ಲಿ ಪಾಕಿಸ್ತಾನಕ್ಕೆ ಜೈ ಅಂದವರಿಗೆ ಬೇಲ್ ಕೊಡಿಸಿದ್ದಾರೆ. ಕರ್ನಾಟಕವನ್ನು ತಾಲಿಬಾನ್ ಮಾಡಲು ಹೋಗಿದ್ದಾರೆ. ತಾಲಿಬಾನ್ ಸರ್ಕಾರವನ್ನು ನಾವು ಬಗ್ಗು ಬಡಿಯುತ್ತೇವೆ. ಇದನ್ನು ಇಲ್ಲಿಗೆ ಬಿಡುದಿಲ್ಲ, ವಿಧಾನಸಭೆಯಲ್ಲಿ ಸ್ಪೀಕರ್ ಮುಂದೆ ಹೋರಾಟ ಮಾಡುತ್ತೇವೆ. ಇದು ಸ್ಪೀಕರ್ ಕ್ಷೇತ್ರದಲ್ಲಿ ನಡೆದಿರುವುದು.
ಹಲ್ಲೆಗೆ ಒಳಗಾದ ಪರವಾಗಿ ನಿಲ್ಲಬೇಕು ಅದು ಮನುಷ್ಯತ್ವ.
ಅದೇ ಆಸ್ಪತ್ರೆಗೆ ಆರೋಗ್ಯ ಸಚಿವರು ಹೋಗಿದ್ದರು, ಗಾಯಗೊಂಡವರನ್ನು ವಿಚಾರಿಸಿಲ್ಲ. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಮತ್ತೆ ಕೇಸ್ ಹಾಕಿದ್ದಾರೆ.
ಘಟನೆ ಆಗಿ ಮರುದಿನ ಕೇಸ್ ಮಾಡಿದ್ದಾರೆ, ಅಷ್ಟೋತ್ತು ಮಣ್ಣು ತಿನ್ನುತಿದ್ರಾ..? ಎಂದು ಅವರು ಕಿಡಿ ಮಾರಿದರು.
ವಿಡಿಯೋದಲ್ಲಿ ಪ್ರಚೋದನೆಕಾರಿ ಹೇಳಿದ್ರೆ ಬಿಡುಗಡೆ ಮಾಡಿ. ಅಮಾಯಕ ಮೇಲೆ ಕೇಸ್ ಮಾಡಿ, ಮೈನ್ ಕೇಸ್ ವೀಕ್ ಮಾಡುತ್ತಿದ್ದಾರೆ.
ಕಾರ್ಯಕರ್ತರ ಮೇಲೆ ಹಾಕಿದ ಕೇಸ್ ವಾಪಾಸು ತೆಗೆದುಕೊಳ್ಳಬೇಕು. ಕಾನೂನಿಗೆ ಬೆಲೆ ಇಲ್ಲ, ಹಾಳಾಗಿ ವರ್ಷ ಆಗಿದೆ. ಜಿಲ್ಲೆಗೆ ಒಬ್ಬೊಬ್ಬ ಹೋಮ್ ಮಿನಿಸ್ಟರ್ ಆಗಿದ್ದಾರೆ.
ಕ್ರೈಂ ರೇಟ್ 40% ಜಾಸ್ತಿಯಾಗಿದೆ. ಗೂಂಡಾ ರಾಜ್ಯ ಆಗೋಕೆ ಎಲ್ಲರನ್ನು ಪ್ರಿಪೇರ್ ಮಾಡಿದ್ದಾರೆ ಎಂದು ಅವರು ನುಡಿದರು.
ಸರ್ಕಾರ ಬದುಕಿದೆಯಾ? ಸತ್ತಿದೆಯಾ ಗೊತ್ತಾಗುತ್ತಿಲ್ಲ.
ಕಾಂಗ್ರೆಸ್‌ನಲ್ಲಿ ಪುಡಿ ರೌಡಿಗಳಿಗೆ ಪರವಾನಿಗೆ ಕೊಟ್ಟಂತೆ ಆಗಿದೆ.
ನಿಮ್ಮ ಯೋಗ್ಯತೆಗೆ ಗ್ಯಾರಂಟಿ ಏನಾಯ್ತು?, ನಿಮ್ಮ ಶಾಸಕರೇ ಉಗಿಯುತ್ತಿದ್ದಾರೆ.
ನಾಳೆ ಸಭೆ ಸೇರಿ, ಇದಕ್ಕೆ ಯಾವ ಹೋರಾಟ ಮಾಡುತ್ತೇವೆ ಎನ್ನುವ ತೀರ್ಮಾನ ಮಾಡುತ್ತೇವೆ. ಕಾರ್ಯಕರ್ತರ ಪರವಾಗಿ ನಿಲ್ಲುತ್ತೇವೆ
ಜಿಲ್ಲಾಡಳಿತ ಚೂರಿ ಇರಿತಕ್ಕೆ ಒಳಗಾದವರ ವೆಚ್ಚ ಭರಿಸಬೇಕು‌ ಎಂದು ಅವರು ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು