9:57 AM Sunday23 - August 2026
ಬ್ರೇಕಿಂಗ್ ನ್ಯೂಸ್
ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್…

ಇತ್ತೀಚಿನ ಸುದ್ದಿ

ರಾಜ್ಯದಲ್ಲಿ ಕಾಂಗ್ರೆಸ್ ತಾಲಿಬಾನ್ ರೀತಿ ಆಡಳಿತ ನಡೆಸುತ್ತಿದೆ: ಮಂಗಳೂರಿನಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪ

12/06/2024, 16:24

ಮಂಗಳೂರು(reporterkarnataka.com): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಕೋಮು ಸೌಹಾರ್ದತೆ ಹಾಳು ಮಾಡುವ ಮೂಲಕ ತಾಲಿಬಾನಿ ರೀತಿಯಲ್ಲಿ ಸರಕಾರ ನಡೆಸುತ್ತಿದೆ. ತಾಲಿಬಾನ್ ಸರಕಾರವನ್ನು ನಾವು ಬಗ್ಗು ಬಡಿಯುತ್ತೇವೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.
ಮಂಗಳೂರಿನ ಹೊರ ವಲಯದ ಬೋಳ್ಯಾರ್‌ನಲ್ಲಿ ನಡೆದ ಚೂರಿ ಇರಿತ ಪ್ರಕರಣದ ಕುರಿತು ನಗರದಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು
ಭಾರತ್ ಮಾತಾ ಕೀ ಜೈ ಘೋಷಣೆ ಮಾತ್ರ ಕೂಗಿದ್ದಾರೆ.
ನಂತರ ಅವರನ್ನು ಅಟ್ಟಾಡಿಸಿ ಡ್ರ್ಯಾಗನ್ ನಿಂದ ಹೊಟ್ಟೆಗೆ ತುಚ್ಚಿದ್ದಾರೆ. ಅವರ ಕೈಯಲ್ಲಿ ಡ್ರ್ಯಾಗನ್‌ ಹೇಗೆ ಬಂತು, ಇದು ಪೂರ್ವ ನಿಯೋಜಿತ ಕೊಲೆ ಪ್ರಯತ್ನ ಎಂದು ಆರ್. ಅಶೋಕ್ ಆಪಾದಿಸಿದರು.


ವಿಧಾನಸಭೆಯಲ್ಲಿ ಪಾಕಿಸ್ತಾನಕ್ಕೆ ಜೈ ಅಂದವರಿಗೆ ಬೇಲ್ ಕೊಡಿಸಿದ್ದಾರೆ. ಕರ್ನಾಟಕವನ್ನು ತಾಲಿಬಾನ್ ಮಾಡಲು ಹೋಗಿದ್ದಾರೆ. ತಾಲಿಬಾನ್ ಸರ್ಕಾರವನ್ನು ನಾವು ಬಗ್ಗು ಬಡಿಯುತ್ತೇವೆ. ಇದನ್ನು ಇಲ್ಲಿಗೆ ಬಿಡುದಿಲ್ಲ, ವಿಧಾನಸಭೆಯಲ್ಲಿ ಸ್ಪೀಕರ್ ಮುಂದೆ ಹೋರಾಟ ಮಾಡುತ್ತೇವೆ. ಇದು ಸ್ಪೀಕರ್ ಕ್ಷೇತ್ರದಲ್ಲಿ ನಡೆದಿರುವುದು.
ಹಲ್ಲೆಗೆ ಒಳಗಾದ ಪರವಾಗಿ ನಿಲ್ಲಬೇಕು ಅದು ಮನುಷ್ಯತ್ವ.
ಅದೇ ಆಸ್ಪತ್ರೆಗೆ ಆರೋಗ್ಯ ಸಚಿವರು ಹೋಗಿದ್ದರು, ಗಾಯಗೊಂಡವರನ್ನು ವಿಚಾರಿಸಿಲ್ಲ. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಮತ್ತೆ ಕೇಸ್ ಹಾಕಿದ್ದಾರೆ.
ಘಟನೆ ಆಗಿ ಮರುದಿನ ಕೇಸ್ ಮಾಡಿದ್ದಾರೆ, ಅಷ್ಟೋತ್ತು ಮಣ್ಣು ತಿನ್ನುತಿದ್ರಾ..? ಎಂದು ಅವರು ಕಿಡಿ ಮಾರಿದರು.
ವಿಡಿಯೋದಲ್ಲಿ ಪ್ರಚೋದನೆಕಾರಿ ಹೇಳಿದ್ರೆ ಬಿಡುಗಡೆ ಮಾಡಿ. ಅಮಾಯಕ ಮೇಲೆ ಕೇಸ್ ಮಾಡಿ, ಮೈನ್ ಕೇಸ್ ವೀಕ್ ಮಾಡುತ್ತಿದ್ದಾರೆ.
ಕಾರ್ಯಕರ್ತರ ಮೇಲೆ ಹಾಕಿದ ಕೇಸ್ ವಾಪಾಸು ತೆಗೆದುಕೊಳ್ಳಬೇಕು. ಕಾನೂನಿಗೆ ಬೆಲೆ ಇಲ್ಲ, ಹಾಳಾಗಿ ವರ್ಷ ಆಗಿದೆ. ಜಿಲ್ಲೆಗೆ ಒಬ್ಬೊಬ್ಬ ಹೋಮ್ ಮಿನಿಸ್ಟರ್ ಆಗಿದ್ದಾರೆ.
ಕ್ರೈಂ ರೇಟ್ 40% ಜಾಸ್ತಿಯಾಗಿದೆ. ಗೂಂಡಾ ರಾಜ್ಯ ಆಗೋಕೆ ಎಲ್ಲರನ್ನು ಪ್ರಿಪೇರ್ ಮಾಡಿದ್ದಾರೆ ಎಂದು ಅವರು ನುಡಿದರು.
ಸರ್ಕಾರ ಬದುಕಿದೆಯಾ? ಸತ್ತಿದೆಯಾ ಗೊತ್ತಾಗುತ್ತಿಲ್ಲ.
ಕಾಂಗ್ರೆಸ್‌ನಲ್ಲಿ ಪುಡಿ ರೌಡಿಗಳಿಗೆ ಪರವಾನಿಗೆ ಕೊಟ್ಟಂತೆ ಆಗಿದೆ.
ನಿಮ್ಮ ಯೋಗ್ಯತೆಗೆ ಗ್ಯಾರಂಟಿ ಏನಾಯ್ತು?, ನಿಮ್ಮ ಶಾಸಕರೇ ಉಗಿಯುತ್ತಿದ್ದಾರೆ.
ನಾಳೆ ಸಭೆ ಸೇರಿ, ಇದಕ್ಕೆ ಯಾವ ಹೋರಾಟ ಮಾಡುತ್ತೇವೆ ಎನ್ನುವ ತೀರ್ಮಾನ ಮಾಡುತ್ತೇವೆ. ಕಾರ್ಯಕರ್ತರ ಪರವಾಗಿ ನಿಲ್ಲುತ್ತೇವೆ
ಜಿಲ್ಲಾಡಳಿತ ಚೂರಿ ಇರಿತಕ್ಕೆ ಒಳಗಾದವರ ವೆಚ್ಚ ಭರಿಸಬೇಕು‌ ಎಂದು ಅವರು ಒತ್ತಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು