7:30 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚಳ್ಳಕೆರೆ: ಶೂನ್ಯದ ಮಾರಮ್ಮ ದೇವರಿಗೆ ಅದ್ದೂರಿಯ ಎತ್ತಿನ ಗೂಡು ಕಾರ್ಯಕ್ರಮ

27/01/2022, 13:13

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com

ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ತೋಡ್ಲರಹಟ್ಟಿ ಬಳಿ ದೇವರ ಎತ್ತುಗಳನ್ನು ಮೆರೆಸುವ ಮೂಲಕ ಶ್ರೀ ಶೂನ್ಯದ ಮಾರಮ್ಮ ದೇವರ ಎತ್ತಿನ ಗೂಡು ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಬುಡಕಟ್ಟು ಮ್ಯಾಸನಾಯಕರ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಶೂನ್ಯ ಮಾರಮ್ಮ ದೇವರ ಎತ್ತಿನಗೂಡು ಕಾರ್ಯಕ್ರವು ಮಂಗಳವಾರ ತೋಡ್ಲರಹಟ್ಟಿ ಬಳಿ ದೇವರ ಪದಿಗಳನ್ನು ತಂಗಟೆ, ಪುವಲಿ, ಬಂದರಕಳ್ಳೆಗಳಿಂದ ದೇವರ ಪದಿಗಳ ನಿರ್ಮಾಣ ಮಾಡುವ ಮೂಲಕ ಆರಂಭವಾಗುತ್ತದೆ. ಅಂದು ಸಂಜೆ ನೂರಾರು ಭಕ್ತಾಧಿಗಳು ದೇವರ ಪದಿಗಳ ಬಳಿ ದೇವರ ಎತ್ತುಗಳ ಜೊತೆಯಲ್ಲಿ ವಾಸ್ತವ್ಯ ಮಾಡುತ್ತಾರೆ. ಭಕ್ತಾಧಿಗಳು ತಂದಂತ ರೊಟ್ಟಿಯನ್ನು ಎತ್ತುಗಳಿಗೆ ನೀಡಿ ಭಕ್ತಿಯನ್ನು ಸಮರ್ಪಣೆ ಮಾಡುತ್ತಾರೆ.

ಇನ್ನು ಮಂಗಳಾವರ ರಾತ್ರಿ ಶೂನ್ಯದ ಮಾರಮ್ಮ ದೇವಿಯನ್ನು ಕಿಲಾರಿಗಳು ಕಟ್ಟಿದ ಹುಲ್ಲಿನ ಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.

 ಇನ್ನು ಬುಧವಾರ ಬೆಳಿಗ್ಗೆಯಿಂದ ಶೂನ್ಯದ ಮಾರಮ್ಮ ದೇವಿ ಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಮಾರಮ್ಮ ಮೂರ್ತಿಗೆ ಭಕ್ತಾಧಿಗಳು ಹೂ ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸಲಾಯಿತು.

ನಂತರ ಸೂರ್ಯನು ಸ್ವಲ್ಪ ಇಳಿಮುಖವಾದಗ ಮೇಯಲು ಹೋದ ದೇವರ ಎತ್ತುಗಳನ್ನು ಹೊಡೆದಂದು ದೇವರ ಪದಿಗಳ ಮುಂದೆ ಅಯಾ ಬೆಡಿಗಿನವರು ಎತ್ತುಗಳನ್ನು ಪ್ರತ್ಯೇಕ ಮಾಡಿಕೊಂಡು ಮೂರು ಬಾರಿ ಮರೆಸಿ, ಆಯಾ ದೇವರ ಪದಿಗಗಳ ಹಮುಂದೆ ಭಕ್ತಾಧಿಗಳ ತಮ್ಮ ಮನೆಯ ದೇವರ ಎತ್ತುಗಳಿಗೆ ಮಂಡಕ್ಕಿ ತೂರಿ ಹಾರಕುತ್ತಾರೆ.

ಎತ್ತುಗಳಿಗೆ, ತದನಂತರ ಕಿಲಾರಿಗಳು ತಮ್ಮ ಪದಿಗಳ ಮುಂದೆ ಕರಿ ಕಂಬಳಿ ಹಾಕಿದಾಗ ಭಕ್ತಾದಿಗಳು ಹೂವು, ಹಣ್ಣು, ಕಾಯಿ ಕಾಸು ಇಟ್ಟು ಪೂಜೆ ಸಲ್ಲಿಸುತ್ತಾರೆ.

ದೇವರ ಎತ್ತುಗಳ ಗೂಡಿನ ಸನ್ನಿಧಿಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಜೃಂಭಣೆಯಿಂದ ಜಾತ್ರೆ ಆಚರಿಸುತ್ತಾರೆ. ಇತ್ತೀಚೆಗೆ ನಮ್ಮ ಮ್ಯಾಸ ಬೇಡರ ಸಂಪ್ರದಾಯ ನಶಿಸಿ ಹೋಗ್ತಿದೆ. ಅಂತದ್ರಲ್ಲಿ ನಮ್ಮ ಸಮುದಾಯದವರು ಕೆಲವು ಕಡೆ ಈ ರೀತಿಯ ಹಬ್ಬ ಆಚರಣೆಗಳನ್ನು ಮಾಡೋದ್ರಿಂದ ನಮ್ಮ ಮ್ಯಾಸ ನಾಯಕರ ಸಂಪ್ರದಾಯ ಉಳಿಯಲಿದೆ.

ವಿಶೇಷ ಪೂಜೆನಂತರ ದಾಸಯ್ಯರಿಂದ ಮಣೇವು ಕಾರ್ಯಕ್ರಮ ಜರುಗುತ್ತದೆ, ನಂತರ ಶೂನ್ಯದ ಮಾರಮ್ಮ ದೇವಿಯ ಮೂರ್ತಿಯನ್ನು ಸೂರ್ಯ ಉದಯಿಸುವ ಕಡೆ ಸಾಗಿಹಾಕಿದ ನಂತರ ಅನ್ನದಾಸೋಹ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

.

ಇತ್ತೀಚಿನ ಸುದ್ದಿ

ಜಾಹೀರಾತು