6:30 AM Tuesday13 - May 2025
ಬ್ರೇಕಿಂಗ್ ನ್ಯೂಸ್
Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!!

ಇತ್ತೀಚಿನ ಸುದ್ದಿ

ಚಳ್ಳಕೆರೆ ದೊಡ್ಡಉಳ್ಳಾರ್ತಿ ಜಾತ್ರೆ  ಸಮಾಪನ: ಗೌರಿದೇವಿ ವಿಸರ್ಜನೆ; ಮಕ್ಕಳಿಗಾಗಿ ಹೂ ತೊಟ್ಟಿಲ ಸೇವೆ

23/11/2021, 19:16

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿಯ ಶ್ರೀಗೌರಿದೇವಿ ಜಾತ್ರೆ ಸಡಗರ ಸಂಭ್ರಮದಿಂದ ನಡೆದಿದ್ದು, ಗೌರಿದೇವಿ ವಿಸರ್ಜನೆ ಕಾರ್ಯ ನೆರವೇರಿತು.

ಗೌರಿ ದೇವಿಯ ಮೂರ್ತಿಗೆ ದೀಪಾಲಂಕರದಿಂದ ಶೃಂಗಾರಗೊಳಿಸಿ ದೊಡ್ಡ ಹಬ್ಬದಂತೆ ಆಚರಣೆ ಮಾಡಿದ್ದು ಒಂದು ವಿಶೇಷವಾಗಿತ್ತು. ಗ್ರಾಮದ ಗಂಡನ ಮನೆಯಾದ ವೀರಭದ್ರಸ್ವಾಮಿ ದೇವಾಲಯದಿಂದ ಸಂಪ್ರದಾಯದಂತೆ ಗೌರಿದೇವಿಯನ್ನು ಬೆಳಗಿನ ಜಾವ ಸುಮಾಎಉ 3.30ರಲ್ಲಿ ಎಡೆಮುಡಿ ಮೇಲೆ ಗೌರಿಯನ್ನು ಮೆರವಣಿಗೆಯ ಮೂಲಕ ತವರು ಮನೆಗೆ ಕರೆ ತರಲಾಯಿತು.ಊರಿನಲ್ಲಿ ಗುಡಿ ನಿರ್ಮಿಸಿ ಜಾತ್ರೆ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ.ನಾವು ಸಹ ಹಿರಿಯರ ಆಶಯದಂತೆ ಮುಂದುವರೆಸಿಕೊಂಡು ಬರಲಾಗಿದೆ ಎಂಬುದು ಭಕ್ತರ ನಂಬಿಕೆ.

ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ ಹಬ್ಬ. ದೇವಿಗೆ ಪೂಜಾ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು ಮಾತ್ರ ಊಟ ಮಾಡಬೇಕು. ಆಚರಣೆಯಂತೆ ವಿದಿವಿಧಾನದಂತೆ ಸಮಂಗಲಿಯರು ಮಧ್ಯೆ ರಾತ್ರಿ ತಣ್ಣಿರಿನ ಸ್ನಾನ ಬಣ್ಣಬಣ್ಣದ ಮಡಿ ಸೀರೆಗಳನ್ನು ಉಟ್ಟುಕೊಂಡು ಮಂಜಾನೆ ದೇವಿಗೆ ಮಹಾ ಮಂಗಳಾರತಿ ಸಮರ್ಪಿಸಿದರು.

ದಿನವೆಲ್ಲ ಉಪವಾಸವಿರುವ ಪುರುಷರು ನಂತರ ರಾತ್ರಿ  ಚಳಿಯನ್ನು ಲೆಕ್ಕಿಸದೆ ತಣ್ಣಿರಿನಲ್ಲಿ ಸ್ನಾನಮಾಡಿ ದೇವಿಯನ್ನು ತವರು ಮನೆಯಿಂದ ಕರೆ ತರುವ ಸಂದರ್ಭದಲ್ಲಿ ಡಿಂಡುರುಳು ಸೇವೆ ಅರ್ಪಿಸಿದರು. ಇವರಿಗೆ ಮಹಿಳೆಯರು ಆರತಿ ಹಿಡಿಯುವ ಮೂಲಕ ಪ್ರೋತ್ಸಾಹ ನೀಡಿ ಚಳಿಯಲ್ಲು ಜಾತ್ರೆ ಕಳೆಕಟ್ಟುವಂತೆ ಮಾಡಿದರು.

ಕಂಕಣ ಬಲ ಕೂಡಿ ಬರಲು, ಒಳ್ಳೆಯ ಪತಿ ದೊರೆಯಲೆಂದು ಯುವತಿಯರು ದಿಂಡುರುಳು ಮತ್ತು ಆರತಿ ಹಿಡಿಯುವ ಹರಕೆ ಅರ್ಪಿಸಿದರು. ಮಕ್ಕಳ ಫಲ ಲಭಿಸಲಿ ಎಂದು ಮಕ್ಕಳಿಲ್ಲದವರು ಹೂವಿನ ತೊಟ್ಟಿಲ ಹರಕೆ ತೀರಿಸಿ ದೇವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪುರೈಸು ಎಂಬ ಭಾವ ಮಹಿಳೆಯರಲ್ಲಿ ಎದ್ದು ಕಾಣುತ್ತಿತ್ತು. 

ಇತ್ತೀಚಿನ ಸುದ್ದಿ

ಜಾಹೀರಾತು