1:01 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚಳ್ಳಕೆರೆ ದೊಡ್ಡಉಳ್ಳಾರ್ತಿ ಜಾತ್ರೆ  ಸಮಾಪನ: ಗೌರಿದೇವಿ ವಿಸರ್ಜನೆ; ಮಕ್ಕಳಿಗಾಗಿ ಹೂ ತೊಟ್ಟಿಲ ಸೇವೆ

23/11/2021, 19:16

ಗೋಪಾನಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿಯ ಶ್ರೀಗೌರಿದೇವಿ ಜಾತ್ರೆ ಸಡಗರ ಸಂಭ್ರಮದಿಂದ ನಡೆದಿದ್ದು, ಗೌರಿದೇವಿ ವಿಸರ್ಜನೆ ಕಾರ್ಯ ನೆರವೇರಿತು.

ಗೌರಿ ದೇವಿಯ ಮೂರ್ತಿಗೆ ದೀಪಾಲಂಕರದಿಂದ ಶೃಂಗಾರಗೊಳಿಸಿ ದೊಡ್ಡ ಹಬ್ಬದಂತೆ ಆಚರಣೆ ಮಾಡಿದ್ದು ಒಂದು ವಿಶೇಷವಾಗಿತ್ತು. ಗ್ರಾಮದ ಗಂಡನ ಮನೆಯಾದ ವೀರಭದ್ರಸ್ವಾಮಿ ದೇವಾಲಯದಿಂದ ಸಂಪ್ರದಾಯದಂತೆ ಗೌರಿದೇವಿಯನ್ನು ಬೆಳಗಿನ ಜಾವ ಸುಮಾಎಉ 3.30ರಲ್ಲಿ ಎಡೆಮುಡಿ ಮೇಲೆ ಗೌರಿಯನ್ನು ಮೆರವಣಿಗೆಯ ಮೂಲಕ ತವರು ಮನೆಗೆ ಕರೆ ತರಲಾಯಿತು.ಊರಿನಲ್ಲಿ ಗುಡಿ ನಿರ್ಮಿಸಿ ಜಾತ್ರೆ ಮಾಡುತ್ತಿದ್ದರು ಎಂಬ ಪ್ರತೀತಿ ಇದೆ.ನಾವು ಸಹ ಹಿರಿಯರ ಆಶಯದಂತೆ ಮುಂದುವರೆಸಿಕೊಂಡು ಬರಲಾಗಿದೆ ಎಂಬುದು ಭಕ್ತರ ನಂಬಿಕೆ.

ಗೌರಿದೇವಿ ಜಾತ್ರೆ ಮೂಲತಃ ಹೆಣ್ಣು ಮಕ್ಕಳ ಹಬ್ಬ. ದೇವಿಗೆ ಪೂಜಾ ಕೈಂಕರ್ಯ ನಡೆಸುವವರೆಲ್ಲ ಒಪ್ಪತ್ತು ಮಾತ್ರ ಊಟ ಮಾಡಬೇಕು. ಆಚರಣೆಯಂತೆ ವಿದಿವಿಧಾನದಂತೆ ಸಮಂಗಲಿಯರು ಮಧ್ಯೆ ರಾತ್ರಿ ತಣ್ಣಿರಿನ ಸ್ನಾನ ಬಣ್ಣಬಣ್ಣದ ಮಡಿ ಸೀರೆಗಳನ್ನು ಉಟ್ಟುಕೊಂಡು ಮಂಜಾನೆ ದೇವಿಗೆ ಮಹಾ ಮಂಗಳಾರತಿ ಸಮರ್ಪಿಸಿದರು.

ದಿನವೆಲ್ಲ ಉಪವಾಸವಿರುವ ಪುರುಷರು ನಂತರ ರಾತ್ರಿ  ಚಳಿಯನ್ನು ಲೆಕ್ಕಿಸದೆ ತಣ್ಣಿರಿನಲ್ಲಿ ಸ್ನಾನಮಾಡಿ ದೇವಿಯನ್ನು ತವರು ಮನೆಯಿಂದ ಕರೆ ತರುವ ಸಂದರ್ಭದಲ್ಲಿ ಡಿಂಡುರುಳು ಸೇವೆ ಅರ್ಪಿಸಿದರು. ಇವರಿಗೆ ಮಹಿಳೆಯರು ಆರತಿ ಹಿಡಿಯುವ ಮೂಲಕ ಪ್ರೋತ್ಸಾಹ ನೀಡಿ ಚಳಿಯಲ್ಲು ಜಾತ್ರೆ ಕಳೆಕಟ್ಟುವಂತೆ ಮಾಡಿದರು.

ಕಂಕಣ ಬಲ ಕೂಡಿ ಬರಲು, ಒಳ್ಳೆಯ ಪತಿ ದೊರೆಯಲೆಂದು ಯುವತಿಯರು ದಿಂಡುರುಳು ಮತ್ತು ಆರತಿ ಹಿಡಿಯುವ ಹರಕೆ ಅರ್ಪಿಸಿದರು. ಮಕ್ಕಳ ಫಲ ಲಭಿಸಲಿ ಎಂದು ಮಕ್ಕಳಿಲ್ಲದವರು ಹೂವಿನ ತೊಟ್ಟಿಲ ಹರಕೆ ತೀರಿಸಿ ದೇವಿಯಲ್ಲಿ ತಮ್ಮ ಇಷ್ಟಾರ್ಥಗಳನ್ನು ಪುರೈಸು ಎಂಬ ಭಾವ ಮಹಿಳೆಯರಲ್ಲಿ ಎದ್ದು ಕಾಣುತ್ತಿತ್ತು. 

ಇತ್ತೀಚಿನ ಸುದ್ದಿ

ಜಾಹೀರಾತು