ಇತ್ತೀಚಿನ ಸುದ್ದಿ
ವಿದ್ಯುತ್ ಕಂಬಕ್ಕೆ ಡಿಕ್ಕಿ: 50 ಅಡಿ ದೂರ ಕಂಬವನ್ನು ಎಳೆದೊಯ್ದ ಕಾರು; ಚಾಲಕನ ಪ್ರಾಣ ಉಳಿಸಿದ ಏರ್ ಬ್ಯಾಗ್
21/06/2025, 20:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾರೊಂದು ಲೈಟ್ ಕಂಬಕ್ಕೆ ಡಿಕ್ಕಿಯೊಡೆದು ಸುಮಾರು 50 ಅಡಿ ದೂರ ಕಂಬವನ್ನು ಎಳೆದೊಯ್ದ ಘಟನೆ ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಬಳಿ ನಡೆದಿದೆ.
ಕಂಬಕ್ಕೆ ಡಿಕ್ಕಿಯಾಗುತ್ತಿದ್ದಂತೆ ಓಪನ್ ಆದ ಏರ್ ಬ್ಯಾಗ್
ಚಾಲಕನ ಜೀವ ಉಳಿಸಿದೆ.
ಸಣ್ಣ ಕಾರಿನ ದೊಡ್ಡ ಏರ್ ಬ್ಯಾಗ್ ಅಪಘಾತ ಸಂದರ್ಭದಲ್ಲಿ ಮಹತ್ತರ ಪಾತ್ರವಹಿಸಿದೆ.
ಚಿಕ್ಕಮಗಳೂರು ನೋಂದಣಿಯ ಸೆಲೋರಿಯಾ ಕಾರು ಇದಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ನೆಲದಲ್ಲಿ ಹೂತಿದ್ದ ವಿದ್ಯುತ್ ಕಂಬ ಕಿತ್ತು ಬಂದಿದೆ. ಕಂಬಕ್ಕೆ ಹಾಕಿದ್ದ ಗೌಂಡಿಂಗ್ ವೈರ್ ಕೂಡ ಕಿತ್ತು ಕಂಬದ ಜೊತೆಯೇ ಹೋಗಿದೆ.
ಕಂಬ ಮುರಿದು ಬೀಳುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಟ್ ಆಗಿರುವುದರಿಂದ ಭಾರೀ ಅನಾಹುತ ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಭೀಕರ ಅಪಘಾತಕ್ಕೀಡಾಗಿದೆ.
ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.