1:07 AM Saturday4 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ…

ಇತ್ತೀಚಿನ ಸುದ್ದಿ

ಬೆಳಗಾವಿ: ಉಕ್ಕಿ ಹರಿಯುತ್ತಿದೆ ನದಿಗಳು; ಹೆದ್ದಾರಿ ಸೇತುವೆ ಜಲಾವೃತ, ಪ್ರಯಾಣಿಕರ ಪರದಾಟ

23/07/2021, 22:27

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಳಗಾವಿಯ ನದಿಗಳೆಲ್ಲ ಉಕ್ಕಿಹರಿಯುತ್ತಿವೆ. ಹಳ್ಳ ಕೊಳ್ಳ ತುಂಬಿದ್ದು, ಒಂಟಮುರಿ‌ ಘಾಟಿ ಬಳಿ ರಾಷ್ಟ್ರೀಯ ಹೆದ್ದಾರಿಯ ಸೇತುವೆ ಜಲಾವೃತಗೊಂಡಿದೆ.

ಪ್ರವಾಹದಿಂದ ಜನರು ದಿಕ್ಕೆಟ್ಟು ಹೋಗಿದ್ದಾರೆ. ನದಿ ಮತ್ತು ರಸ್ತೆಯ ವ್ಯತ್ಯಾಸ ಕಾಣುತ್ತಿಲ್ಲ. ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿ ಪ್ರಯಾಣಿಕರು ನದಿಯಲ್ಲಿ ಪ್ರವಾಹ ಇಳಿಯಲು ಕಾಯುತ್ತಿದ್ದಾರೆ.

ಪ್ರಯಾಣಿಕರಿಗೆ ದಿಕ್ಕು ತೋಚದಂತೆ  ರಸ್ತೆ ಮೇಲೆ ನೀರು ಹರಿದು ಬಂದು ಇದು ನದಿನಾ ಅಥವಾ ರಸ್ತೆ ನಾ ಅಂತಾ ತಿಳಿಯದೇ ತಮ್ಮ ತಮ್ಮ ಸಣ್ಣ ವಾಹಾನಗಳು ರಸ್ತೆ ಬದಿಗೆ ನೀಲಿಸಿ ನೀರಿನ ರಭಸ ಕಡಿಮೇ ಆಗುವ ನೀರಿಕ್ಷೆಯಲ್ಲಿ‌ ಕಾದುಕೊಳ್ಳಿತ್ತಿದ್ದಾರೆ,

ಇನ್ನೂ ಲಾರಿ ಚಾಲಕರು ಭಾರ ಹೆಚ್ಚಿರುವುದರಿಂದ ನೀರಿನ ಮೇಲೆಯೇ ಸವಾರಿ ಮಾಡುತ್ತಿದ್ದಾರೆ. ಇಲ್ಲಿ ನೀರು ಹರಿದು‌ ಹೋಗಲು ಸರಾಗ ಮಾರ್ಗ ಇಲ್ಲದ ಕಾರಣ ರಸ್ತೆ ಮೇಲೆ ನೀರು ನುಗ್ಗಿ ಪ್ರತಿ ವರ್ಷ ವು ಮಳೆಗಾಲದಲ್ಲಿ‌ ಇಂಥಹ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರರು‌ ವಾಹನ ಶುಲ್ಕ ಭರಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಆಗುವ ಸಂಭವಗಳ ಬಗ್ಗೆ ‌ಗಮನ ಹರಿಸುವುದಿಲ್ಲ. ಕೇವಲ ಹಣ ಮಾಡಲು ಮಾತ್ರ ಈ ಹೆದ್ದಾರಿ ಸೀಮಿತವಾಗಿದೆ ಅಂತಾ ಹೇಳಿದರು‌ ತಪ್ಪೆನಿಲ್ಲ. ಇನ್ನಾದರೂ ಎಚ್ಚತ್ತುಕೊಂಡು‌ ಇಂತಹ ಸಮಸ್ಯೆಗಳನ್ನು ಆಲಿಸಿ ರಸ್ತೆ ಸಂಚಾರಕ್ಕೆ ಸುಗಮಗೊಳಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು