2:20 PM Monday15 - September 2025
ಬ್ರೇಕಿಂಗ್ ನ್ಯೂಸ್
ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ…

ಇತ್ತೀಚಿನ ಸುದ್ದಿ

ಅಥಣಿ: ಆಮ್ಲಜನಕ ಪೂರೈಕೆ, ಹಾಸಿಗೆ ವ್ಯವಸ್ಥೆ ಕುರಿತು ಡಿಸಿಎಂ ಲಕ್ಷಣ ಸವದಿ ತುರ್ತುಸಭೆ

12/05/2021, 17:35

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ  ತಾಲ್ಲೂಕಿನಲ್ಲಿ ಕೋವಿಡ್ ಉಲ್ಭಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ‌ ಸ್ಥಿತಿಗತಿಯ ಬಗ್ಗೆ ಹಾಗೂ ಆಮ್ಲಜನಕ ,ಹಾಸಿಗೆ ವ್ಯವಸ್ಥೆ, ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಕುರಿತು , ಅಥಣಿ ಗಣ್ಯರು, ಐಎಂ ಎ ವೈಧ್ಯರು ಉನ್ನತ ಅಧಿಕಾರಿಗಳ ಜತೆ ಅಥಣಿಯಲ್ಲಿ ಡಿಸಿಎಂ

ಲಕ್ಷ್ಮಣ ಸವದಿ ತುರ್ತು  ಸಭೆ  ನಡೆಸಿದರು.

ಪಟ್ಟಣದಲ್ಲಿ ಆರ್. ಹೆಚ್. ಕುಲಕರ್ಣಿ ಸಭಾಂಗಣದಲ್ಲಿ ವೈದ್ಯರು , ಅಧಿಕಾರಿಗಳು ಮತ್ತು ವ್ಯಾಪಾರಸ್ಥರೊಂದಿಗೆ ತುರ್ತು ಸಭೆ ನಡೆಸಿ ಮಾತನಾಡಿ, ತುರ್ತಾಗಿ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಲ್ಯಾಣ ಮಂಟಪದಲ್ಲಿ  50 ಹಾಸಿಗೆಗಳ ಆಮ್ಲಜನಕ ಸಹಿತ ಆಸ್ಪತ್ರೆಯನ್ನು  ಶಿಘ್ರ ಆರಂಭಿಸುವುದು ಹಾಗೂ ಅಲ್ಲಿ  ಸಿಬ್ಬಂದಿ ನೇಮಿಸುವುದು, ತುರ್ತಾಗಿ ಇರುವ ಎಲ್ಲಾ  ಆಸ್ಪತ್ರೆಗಳಲ್ಲಿ ಆಮ್ಲಜನಕ ,ಔಷಧಿ ಗುಳಿಗೆ ಯಾವುದೇ  ಕೊರತೆಯಾಗದಂತೆ ನೊಡಿಕೊಳ್ಳುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಗಂಭೀರ ಚರ್ಚೆಯಾಯಿತು. 

ಕರೊನಾ ನಿರ್ವಹಣೆಗೆ ಸಿಬ್ಬಂದಿ ನೇಮಕ ಸೇರಿ ಅಗತ್ಯ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ .ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಜನರ ಹೆಚ್ಚಳದಿಂದಾಗಿ ಬೆಡ್ ಪುಲ್ ಆಗಿವೆ . ಈ ನಿಟ್ಟಿನಲ್ಲಿ ಹೆಚ್ಚಿನ ಬೆಡ್ ಗಳಿಗಾಗಿ ಹೊಸ ಕೋವಿಡ್ ಕೇಂದ್ರ ಆರಂಭಿಸಲು ಮತ್ತು ಮುಂದಿನ ಪರಿಹಾರಗಳ ಚರ್ಚೆ ಮಾಡಿದ್ದೇವೆ . ಅಥಣಿಯಲ್ಲಿ ಸರ್ಕಾರದಿಂದ ಬರುವ ಔಷಧಗಳು ಕೊರತೆ ಆಗದಂತೆ ಸರಿಯಾದ ಸಮಯದಲ್ಲಿ ಮುಟ್ಟಿಸಲು ಕ್ರಮ ತೆಗೆದುಕೊಂಡಿದ್ದೇವೆ ಅಥಣಿಯಲ್ಲಿ ರೆಮಿಡಿಸಿವಿರ್ ಇಂಜೆಕ್ಷನ್ ಮತ್ತು ಆಮ್ಲಜನಕ 

ಕೊರತೆ ನೀಗಿಸಿದ್ದು  ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಲ್ಯಾಣ ಮಂಟಪದಲ್ಲಿ 

ಐವತ್ತು ಬೆಡ್‌ಗಳ ಉಚಿತ ಚಿಕಿತ್ಸಾ ಕೇಂದ್ರವನ್ನಾಗಿಸುವ ಚಿಂತನೆ ನಡೆದಿದೆ . ಇದಕ್ಕೆ ಬೇಕಾದ ವೈದ್ಯಕೀಯ ಸಿಬ್ಬಂದಿ , ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲು ಎರಡು ದಿನ ಅಥಣಿಯಲ್ಲಿ ಉಳಿದು ಉಸ್ತುವಾರಿ ನಡೆಸಿ ಕೋವಿಡ್ ಕೇಂದ್ರ ನಿರ್ಮಿಸಿ ಉಚಿತವಾಗಿ ಸೇವೆ ನೀಡುವ ಕೆಲಸ ಆರಂಭಿಸಲಿದ್ದೇವೆ 

ತಾಲೂಕಿನ ಖಾಸಗಿ ವೈದ್ಯರು ಇದಕ್ಕೆ  ಸಹಕರಿಸುವ ನಂಬಿಕೆ ಇದೆ ಎಂದು ಹೇಳಿದರು .ಈಗಿರುವ ವ್ಯವಸ್ಥೆಯಲ್ಲಿ 35 ಆಕ್ಸಿಜನ್ ಕಾನ್ ಸ್ಟಂಟರ ಯಂತ್ರಗಳನ್ನು ಹೆಚ್ಚುವರಿಯಾಗಿ ಖರೀದಿಸಿದ್ದು ಬುಧವಾರ  ಯಂತ್ರಗಳು ಅಥಣಿ ತಲುಪಲಿವೆ .ಪುಣೆಯಿಂದ ಮೂವತ್ತೈದು ಏಳು ಲೀಟರ್ ಕೆಪಾಸಿಟಿ ಆಕ್ಸಿಜನ್ ಕಾನ್ ಸ್ಟಂಟರ ಮಷಿನ್ ಬರಲಿವೆ ಇನ್ನೂ ಹತ್ತು ಮಶೀನ್ ದೆಹಲಿಯಿಂದ ಬರಲಿವೆ . ಸುಮಾರು ಎಂಬತ್ತು ಸಾವಿರ ರೂಪಾಯಿ ಒಂದು ಮಷಿನ್ ಮೌಲ್ಯ ಇದೆ . ಅಷ್ಟೇ ಅಲ್ಲದೆ ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಆಕ್ಸಿಜನ್ ಪ್ರೊಡಕ್ಷನ್ ಯುನಿಟ್ ಇರುವ ಪ್ಲಾಂಟ್ ಮಾಡಲಾಗುತ್ತಿದೆ . ದಿನವೊಂದಕ್ಕೆ ಸುಮಾರು 390 ಲೀಟರ್ ಉತ್ಪಾದನೆ ಆಗುವ ನಾಲ್ಕು ನೂರ ಬೆಡ್ ಗಳಿಗೆ ಉಪಯೋಗವಾಗಲಿದೆ ಯಾವುದೇ ಕಾರಣಕ್ಕೂ ಜನರು ಭಯಪಡಬಾರದು ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ . ಕ್ಷೇತ್ರದ ಜನತೆಯೊಂದಿಗೆ ನಾವಿದ್ದೇವೆ ಭಯಪಡುವ ಅಗತ್ಯವಿಲ್ಲ  ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು