2:41 PM Thursday12 - March 2026
ಬ್ರೇಕಿಂಗ್ ನ್ಯೂಸ್
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌…

ಇತ್ತೀಚಿನ ಸುದ್ದಿ

ಆಸ್ಪತ್ರೆ ಬೆಡ್ ನಲ್ಲಿ ಮಲಗಿರುವ ಯಕ್ಷಗಾನ ಪ್ರಸಂಗಕರ್ತ, ಛಾಂದಸ ಕವಿ ಗಣೇಶ ಕೊಲೆಕಾಡಿ ನೆರವಿಗೆ ಬರುವಿರಾ?

17/05/2022, 19:58

ಮಂಗಳೂರು(reporterkarnataka.com): ಯಕ್ಷಗಾನ ಪ್ರಸಂಗಕರ್ತ, ಗುರು, ಛಾಂದಸ ಕವಿ ಗಣೇಶ ಕೊಲೆಕಾಡಿ ಅವರು ಬಾಯಿಯ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳೂರಿನ ಮಂಗಳಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಡವರಾದ ಅವರು ಚಿಕಿತ್ಸಾ ವೆಚ್ಚ ಭರಿಸಲು ದಾನಿಗಳ ನೆರವು ಕೋರಿದ್ದಾರೆ.

ಯಕ್ಷಗಾನ ಕವಿಯಾಗಿ ೬೦ ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ ಗಣೇಶ ಕೊಲೆಕಾಡಿ ಅವರು ಸಾಹಿತಿಯಾಗಿ ಅನೇಕ ಕವನ, ನಾಟಕಗಳನ್ನು ಬರೆದಿದ್ದಾರೆ. ಅವರ ನೂರಾರು ಲೇಖನಗಳು ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಯಕ್ಷಗಾನ ಗುರುವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾದಾನ ಮಾಡಿದ್ದಾರೆ. ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟರ ಪಟ್ಟಶಿಷ್ಯನೆಂಬ ಕೀರ್ತಿಗೆ ಪಾತ್ರನಾಗಿ ಛಂದಃಶಾಸ್ತ್ರದ ಬಗ್ಗೆ ಹಲವಾರು ಸಂಶೋಧನೆಗಳನ್ನು ಮಾಡಿದ್ದಾರೆ. ಲಯಬ್ರಹ್ಮ ದಿವಾಣ ಭೀಮಭಟ್ಟರ ಶಿಷ್ಯನಾಗಿ ತಾಲಗಳ ಬಗ್ಗೆಯೂ ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ. ಶೇಣಿಪ್ರಶಸ್ತಿ, ನೆಡ್ಲೆ ನರಸಿಂಹ ಭಟ್ಟ ಪ್ರಶಸ್ತಿ, ಜಿಲ್ಲಾರಾಜ್ಯೋತ್ಸವ ಪ್ರಶಸ್ತಿಯೇ ಮೊದಲಾದ ನೂರಾರು ಘನಪ್ರಶಸ್ತಿಗಳನ್ನು ಪಡೆದಿದ್ದಾರೆ.

ಮುಂಬೈನಲ್ಲಿ ನಡೆದ ದುರ್ಘಟನೆಯೊಂದರಲ್ಲಿ ದುಷ್ಕರ್ಮಿಗಳ ದಾಳಿಗೊಳಗಾಗಿ ಎರಡೂ ಕಾಲು, ಎರಡೂ ಕೈ ಮುರಿತಕ್ಕೊಳಗಾಗಿ, ತಲೆಗೂ ಬಲವಾದ ಏಟು ಬಿದ್ದು ಸುದೀರ್ಘ ಚಿಕಿತ್ಸೆಯಿಂದ ರೋಗಿಯಾಗಿ ಮನೆಯ ಒಳಗೆ ಉಳಿದುಕೊಳ್ಳಬೇಕಾಯಿತು. ಮದುವೆಯಾಗದೆ ಮುದಿತನದ ತಾಯಿಯೊಂದಿಗೆ ಜೀವನ ಕಳೆಯುವ ಪರಿಸ್ಥಿತಿ ಅವರದು. ಇದೀಗ ವಿಪರೀತವಾದ ಬಾಯಿಯ ಸೋಂಕಿನಿಂದ ಮಾತನಾಡಲು, ಆಹಾರ ಸೇವಿಸಲು ಕಷ್ಟವನ್ನು ಅನುಭವಿಸಿ, ಪೂರ್ಣ ತೆರೆಯಲಾಗದ ಬಾಯಿ, ಒಳ ಸರಿದ ನಾಲಗೆಯ ದುಸ್ಥಿತಿಯ ನಡುವೆ ಸಹಿಸಲಾರದ ನೋವಿಂದ ಬಳಲುತ್ತಿದ್ದಾರೆ. ಅವರ ಅಮ್ಮನ ಆರೋಗ್ಯವೂ ಅಷ್ಟಕಷ್ಟೇ. ಇದೀಗ ಬಾಯಿಯ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದೆ ಒಂದು ಶಸ್ತ್ರಚಿಕಿತ್ಸೆ ನಡೆದಿದೆ. ಮೇ ೧೭ರಂದು ಕುತ್ತಿಗೆ ಮತ್ತು ನಾಲಗೆಯ ಎರಡನೇ ಶಸ್ತ್ರಚಿಕಿತ್ಸೆ ನಡೆದಿದೆ. ಇದಕ್ಕೂ ಮುನ್ನ ಒಂದು ತಿಂಗಳ ಕಾಲ ಸುರತ್ಕಲ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಹಿಂದೆ ಮಂಗಳಾ ಆಸ್ಪತ್ರೆಯಲ್ಲಿ ಅಂದಾಜು ಒಂದೂವರೆ ಲಕ್ಷ ರೂ. ಬಿಲ್ ಆಗಬಹುದು ಎಂದು ಹೇಳಿದ್ದರು. ಶಸ್ತ್ರಚಿಕಿತ್ಸೆ ವೆಚ್ಚ, ಆಸ್ಪತ್ರೆ ವೆಚ್ಚ ಸೇರಿ ಇದೀಗ ಲಕ್ಷಗಟ್ಟಲೆ ಬಿಲ್ ಆಗುವ ಸಾಧ್ಯತೆಯಿದೆ. ಚಿಕಿತ್ಸಾ ವೆಚ್ಚ ಭರಿಸಲು ಸಹೃದಯಿ ದಾನಿಗಳು ನೆರವಾಗಬೇಕು ಎಂದು ಗಣೇಶ ಕೊಲೆಕಾಡಿ ಅವರು ವಿನಂತಿಸಿದ್ದಾರೆ.

ನೆರವು  ನೀಡುವವರು

ಗೂಗಲ್ ಪೇ ನಂ. 9482130381

 

ಬ್ಯಾಂಕ್ ಖಾತೆ ವಿವರ:

ಹೆಸರು: ಗಣೇಶ್ ಸುವರ್ಣ ಕೊಲೆಕಾಡಿ

SB Account No 005310500055943

The Bharat Co Operative Bank Ltd. MULKY Branch

IFSC Code No BCBM0000054.

ಇತ್ತೀಚಿನ ಸುದ್ದಿ

ಜಾಹೀರಾತು