3:23 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಟೂರಿಸಂಗೆ ವಿಫುಲ ಅವಕಾಶ: ವಿವಂತಾ ಹೋಟೆಲ್ ಜಿಎಂ ಸಿಜು ನಂಬಿಯಾರ್

29/09/2025, 14:43

ಚಿತ್ರ/ ವರದಿ: ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ವಿಶ್ವ ವಿದ್ಯಾ ನಿಲಯದ ಎಂಬಿ ಎ ವಿಭಾಗ ಟೂರಿಸಂ ಆ್ಯಂಡ್ ಬ್ಯುಸಿ ನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಶನಿವಾರ ಮಂಗಳೂರು ವಿವಿಯ ಎಂಬಿಎ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ವಿವಂತಾ ಹೋಟೆಲ್ ಜನರಲ್ ಮ್ಯಾನೇಜರ್ ಸಿಜು ನಂಬಿಯಾರ್ ಉದ್ಘಾಟಿಸಿದರು.



ಅವರು ಮಾತನಾಡಿ, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರವಹಿಸುತ್ತದೆ. ವಿಶ್ವ ಎಲ್ಲಾ ದೇಶವು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹವನ್ನು ನೀಡುತ್ತದೆ. ಮಂಗಳೂರಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣವಿದೆ. ಇಲ್ಲಿನ ಬೀಚ್ ದೇವಾಲಯಗಳು ವಿವಿಧ ದೇಶದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿದ್ಯಾರ್ಥಿಗಳು ಸರಿಯಾಗಿ ಅವಕಾಶಗಳನ್ನು ಬಳಸಿಕೊಂಡರೆ. ಒಳ್ಳೆಯ ಭವಿಷ್ಯವಿದೆ. ಕರೋನ ನಂತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮಂಗಳೂರಿಗೆ ಐತಿಹಾಸಿಕ ಪರಂಪರೆ ಇದೆ. ಟೂರಿಸಂನಲ್ಲಿ ಅನೇಕ ವಿಭಾಗಳಿದ್ದು ನಿಮ್ಮ ನೆಚ್ಚಿನ ವಿಭಾಗಗಳನ್ನು ಆಯ್ಕೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಅವರು ಹೇಳಿದರು.


ಇನ್ನೊರ್ವ ಅತಿಥಿ ರಂಗ ಕಲಾವಿದ ಅರವಿಂದ ಬೋಳಾರ್ ಮಾತನಾಡಿ ಮನುಷ್ಯ ಜೀವನವೇ ಪ್ರವಾಸ, ಜೀವನದುದ್ದಕ್ಕೂ ಪ್ರವಾಸ ಮಾಡುತ್ತಾನೆ. ಜೀವನದಲ್ಲಿ ವಿದ್ಯೆ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ನಾನೇದರು ಇವತ್ತು ಈ ಹಂತದಲ್ಲಿ ಇದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಶಾಲಾ ಶಿಕ್ಷಕಿ, ನನ್ನ ಎರಡೇ ತಾಯಿ ಸ್ಟೇಲ್ಲ ಟೀಚರ್. ಎಂದು ವಿದ್ಯಾರ್ಥಿ ಜೀವನ ವನ್ನು ಮೆಲುಕು ಹಾಕಿಕೊಂಡರು. ನಾವು ಹೆಚ್ಚಿನ ವಿದ್ಯಾಭ್ಯಾಸ ಮಾಡದಿದ್ದರೂ, ನಮ್ಮ ಮಕ್ಕಳು ವಿದ್ಯಾವಂತರಾಗಬೇಕು. ಮಕ್ಕಳು ವಿದ್ಯೆ ಕಲಿತು, ಯಾವುದೇ ಕ್ಷೇತ್ರ ಸಾಧನೆ ಮಾಡಿದರೂ ತಂದೆ ತಾಯಿಯ ಹೆಸರು ಹೇಳದಿದ್ದರೂ ವಿದ್ಯೆ ಕಲಿತ ಗುರುಗಳನ್ನು ಹಾಗೂ ವಿದ್ಯೆ ಕೊಟ್ಟ ಸಂಸ್ಥೆಯನ್ನು ನೆನಪಿಸಿ ಕೊಂಡರೆ ಪೋಷರಿಗೆ ಅದೇ ಖುಷಿ ಎಂದರು.
ಮಂಗಳೂರು ವಿವಿಯಲ್ಲಿ ನನ್ನ ಮಕ್ಕಳು ಕಲಿಯುತ್ತಿದ್ದಾರೆ ಎಂಬ ಹೆಮ್ಮೆ ಇದೆ. ಮಂಗಳೂರು ವಿವಿ ಗೆ ದೇಶ ವಿದೇಶಗಳಲ್ಲೂ ಅದರದ್ದೇ ಆದ ಹೆಸರಿದೆ. ಹಾಗಾಗಿ ಇಲ್ಲಿ ವಿದ್ಯಾರ್ಥಿಗಳಗಿರುವ ನೀವು ಪುಣ್ಯವಂತರು. ಸಂಸ್ಥೆಯ ಹೆಸರು ಉಳಿಸಿ ಬೆಳಿಸಿ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಅಧ್ಯಕ್ಷತೆಯನ್ನು ಮಂಗಳೂರು ವಿವಿ ಪ್ರಾದ್ಯಾಪಕಿ ಪ್ರೊ. ಪರಿಣಿತಾ, ವಿಭಾಗದ ಚೇರ್ ಮ್ಯಾನ್ ಪ್ರೊ. ಶೇಖರ್ ನಾಯ್ಕ್ ಸ್ವಾಗತಿಸಿದರು.


ಉಪನ್ಯಾಸಕರುಗಳಾದ ಪ್ರಥ್ವಿ, ದೀಕ್ಷಾ, ಬಿಲ್ನ. ಕೆ ವಿನ್ ಸೆಂಟ್, ರಂಜಿತಾ ಎನ್, ಅತಿಥಿಗಳನ್ನು ಪರಿಚಯಿಸಿದರು.


ವಿದ್ಯಾರ್ಥಿ ನಾಯಕ ವರದಿ ವಾಚಿಸಿದರು. ಪ್ರಾಧ್ಯಾಪಕ ಡಾ. ಜೋಸೆಫ್ ಪಿ.ಡಿ. ವಂದಿಸಿ, ನಿರೂಪಿಸಿದರು. ಉಪನ್ಯಾಸಕ ಶಿವಣ್ಣ ಪಿ.ಬಿ. ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರುಗಿತು.

ಇತ್ತೀಚಿನ ಸುದ್ದಿ

ಜಾಹೀರಾತು