4:32 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

Eduction & Employment | ದುಬಾರಿಯಾದ ಜೀವನ ವ್ಯವಸ್ಥೆಯಲ್ಲಿ ದೀರ್ಘಕಾಲಿಕ ಶಿಕ್ಷಣ ವ್ಯವಸ್ಥೆ ಬೇಕೇ?

21/04/2025, 15:43

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ದಿನದಿಂದ ದಿನಕ್ಕೆ ಜೀವನದ ವೆಚ್ಚ ಏರುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಬದುಕು ತೀವ್ರ ಸಂಕಷ್ಟದತ್ತ ಸಾಗುತ್ತಿದೆ. ಆಹಾರ, ಬಾಡಿಗೆ, ಆರೋಗ್ಯ, ಸಾರಿಗೆ, ವಿದ್ಯುತ್, ನೀರು ಮತ್ತು ಇತರ ಮೂಲಭೂತ ಅಗತ್ಯ ಸೇವೆಗಳು ಈಗ ದುಬಾರಿಯ ಗಡಿಯಾಚಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಣವೂ ವ್ಯಾಪಾರೀಕರಣದ ದಾರಿಯಲ್ಲೇ ಸಾಗುತ್ತಿರುವುದರಿಂದ, “ಈ ದುಡಿಮೆಯ ಯುಗದಲ್ಲಿ ದೀರ್ಘಕಾಲಿಕ ಶಿಕ್ಷಣವೇಕೆ?” ಎಂಬ ಪ್ರಶ್ನೆ ಬಹುಜನರ ಮನದಲ್ಲಿ ಮೂಡುತ್ತಿದೆ.
ಒಂದೆಡೆ ಪದವೀಧರರಾಗುವವರೆಗೆ ಭಾರಿ ವೆಚ್ಚದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು, ನಂತರ ಉದ್ಯೋಗವಿಲ್ಲದೇ ನಿರಾಶೆಯಲ್ಲಿ ಸಿಲುಕುವ ಘಟನೆಗಳು ಹೆಚ್ಚುತ್ತಿರುವಾಗ, ಇನ್ನೊಂದೆಡೆ “ಸಣ್ಣ ಕೋರ್ಸ್ ಮಾಡಿ ಕೆಲಸ ಪಡೆಯೋಣ” ಎಂಬ ತಾತ್ಕಾಲಿಕ ಧೋರಣೆ ಸಹ ಸಾಮಾನ್ಯವಾಗಿದೆ. ತಾತ್ಕಾಲಿಕ ನೆಮ್ಮದಿಗೆ ಇದು ಸಹಕಾರಿಯಾಗಬಹುದು, ಆದರೆ ದೀರ್ಘಾವಧಿಯಲ್ಲಿ ಸಮರ್ಥ ಪರಿಹಾರವಲ್ಲ ಎಂಬುದರಲ್ಲಿ ತಜ್ಞರೊಬ್ಬರಿಗೂ ಅನುಮಾನವಿಲ್ಲ.
ದೀರ್ಘಕಾಲಿಕ ಶಿಕ್ಷಣ ಎಂದರೆ ಕೇವಲ ಪದವಿ ಪೂರ್ಣಗೊಳಿಸುವುದಲ್ಲ; ಇದು ನಿರಂತರ ಕಲಿಕೆಯ ಪ್ರಕ್ರಿಯೆ. ಬದಲಾಗುತ್ತಿರುವ ತಂತ್ರಜ್ಞಾನ, ಆರ್ಥಿಕತೆ ಹಾಗೂ ಸಾಮಾಜಿಕ ಪರಿವರ್ತನೆಗಳಿಗೆ ತಕ್ಕಂತೆ ಹೊಸ ಜ್ಞಾನವನ್ನು ಪಡೆದುಕೊಳ್ಳುವ ತವಕ ವ್ಯಕ್ತಿತ್ವದ ವೃದ್ಧಿಗೆ ಹಾಗೂ ಉದ್ಯೋಗಸಾಧ್ಯತೆಗಳಿಗೆ ಆಧಾರಸ್ತಂಭವಾಗಿದೆ. ಶಿಕ್ಷಣವು ವ್ಯಕ್ತಿಗೆ ವಿಶ್ಲೇಷಣಾ ಶಕ್ತಿ, ಜವಾಬ್ದಾರಿಯ ಭಾವನೆ ಹಾಗೂ ಸಮಾಜದ ಬಗ್ಗೆ ಅರಿವು ನೀಡುವ ಪ್ರಮುಖ ಸಾಧನವಾಗಿದೆ.
ಈ ಭವಿಷ್ಯ ನಿರ್ಮಾಣದಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ತ್ರಿಕೋನದಂತೆ ಕಾರ್ಯನಿರ್ವಹಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ, ಆಧುನಿಕ ಪಠ್ಯಕ್ರಮ, ತಾಂತ್ರಿಕ ಹಾಗೂ ವಿದೇಶಿ ಭಾಷಾ ತರಬೇತಿ ನೀಡುವ ಕಾರ್ಯಕ್ಕೆ ಆದ್ಯತೆ ನೀಡಬೇಕು.
“ಶಿಕ್ಷಣವೆಂದರೆ ಖರ್ಚು ಅಲ್ಲ, ಭವಿಷ್ಯದ ಹೂಡಿಕೆ” ಎಂಬ ಮನೋಭಾವ ಬೆಳೆಸಿದರೆ ಮಾತ್ರ ನಾವು ಅರಿವಿನ ಸಮಾಜವೊಂದನ್ನು ರೂಪಿಸಬಲ್ಲೆವು. ದುಬಾರಿ ಜಗತ್ತಿನಲ್ಲಿ ದೀರ್ಘಕಾಲಿಕ ಶಿಕ್ಷಣವೇ ನಿಜವಾದ ಬೆಳಗಿನ ಬೆಳಕು.ದುಬಾರಿಯಾದ ದುನಿಯಾ ಜೀವನ ವ್ಯವಸ್ಥೆಯಲ್ಲಿ ದೀರ್ಘಕಾಲಿಕ ಶಿಕ್ಷಣ ವ್ಯವಸ್ಥೆ ಬೇಕೇ ?

ಇತ್ತೀಚಿನ ಸುದ್ದಿ

ಜಾಹೀರಾತು