11:27 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಮೂತ್ರಜನಕಾಂಗದ ಸೋಂಕು: ಕಾರಣಗಳೇನು? ಇದನ್ನು ತಡೆಗಟ್ಟುವುದು ಹೇಗೆ?

05/02/2022, 11:22

ಮೂತ್ರ ಜನಕಾಂಗದ ಸೋಂಕು ಮಹಿಳೆಯರು ಮತ್ತು ಪುರುಷರನ್ನು ಕಾಡುವ ಸಾಮಾನ್ಯವಾದ ಸೊಂಕಾಗಿದೆ. ಆದರೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುತ್ತದೆ.
ಮೂತ್ರನಾಳ, ಮೂತ್ರಚೀಲ, ಅಥವಾ ಕಿಡ್ನಿ  ಹೀಗೆ ಬೇರೆ ಬೇರೆ ಭಾಗ ಸೊಂಕಿಗೆ ಒಳಗಾಗಬಹುದು.


ಕಾರಣಗಳು ಏನು?

ಇದು ಹೆಚ್ಚಾಗಿ ಬ್ಯಾಕ್ಟರಿಯ ಅಥವಾ ಫಂಗಸ್ನಿಂದಾಗಿ ಬರುವ ತೊಂದರೆಯಾಗಿದೆ. ಈ ಸೂಕ್ಷ್ಮಣು ಜೀವಿಗಳು ಮೂತ್ರ ನಳಿಕೆಯ ಮೂಲಕ ದೇಹವನ್ನು ಪ್ರವೇಶಿಸಿ ಸೋಂಕು ತಗಲುತ್ತದೆ.

ಮಧುಮೇಹ ಇರುವವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಇಂತಹ ಸೋಂಕು ಸುಲಭವಾಗಿ ತಗಲುತ್ತದೆ. ಕಿಡ್ನಿ ಸ್ಟೋನ್ 

ಪುರುಷರಲ್ಲಿ ದೊಡ್ಡದಾದ ಪ್ರೊಸ್ಟೆಟ್ ಗ್ರಂಥಿಯ ಸಮಸ್ಯೆಯಿಂದಾಗಿ ಉರಿಮೂತ್ರ ಉಂಟಾಗುತ್ತದೆ.

ಲಕ್ಷಣಗಳು ಏನು?

*ಸೊಂಟನೋವು

*ಮೇಲಿಂದ ಮೇಲೆ ಮೂತ್ರ ವಿಸರ್ಜನೆ

*ಮೂತ್ರ ವಿಸರ್ಜನೆ ಸಮಯದಲ್ಲಿ ನೋವು *ಉರಿಮೂತ್ರ

*ಮೂತ್ರದ ಬಣ್ಣ ಹಾಗೂ ವಾಸನೆಯಲ್ಲಿ ವ್ಯತ್ಯಾಸ *ಕಿಬ್ಬೊಟ್ಟೆ ನೋವು

*ಚಳಿ, ಜ್ವರ, ವಾಂತಿ

ಪತ್ತೆ ಹಚ್ಚುವ ವಿಧಾನಗಳು ಏನು?

ಯೂರಿನ್ ಅನಾಲಿಸಿಸ್ : ಇದರ ಮೂಲಕ ಸೊಂಕಿನ ತೀವ್ರತೆಯನ್ನು ಪತ್ತೆಹಚ್ಚಬಹುದು.

ಯೂರಿನ್ ಕಲ್ಚರ್ : ಇದರಿಂದ ಯಾವ ಸೂಕ್ಷ್ಮಣು ಜೀವಿಯಿಂದ ತೊಂದರೆ ಉಂಟಾಗಿದೆ ಎಂದು ತಿಳಿದುಕೊಳ್ಳಬಹುದು.

ಅಲ್ಟ್ರಾಸೌಂಡ್ : ಒಂದುವೇಳೆ  ಚಿಕಿತ್ಸೆ ನಂತರವೂ ಗುಣಮುಖವಾಗದೆ ಇದ್ದಲ್ಲಿ, ಇದರ ಮೂಲಕ ಮೂತ್ರ ನಾಳ ಅಥವಾ ಕೋಶದಲ್ಲಿಇರುವ ತೊಂದರೆಯನ್ನು ಪತ್ತೆ ಹಚ್ಚಬಹುದು.

ಸಿಸ್ಟೋಸ್ಕೋಪಿ: ಇದರ ಮೂಲಕ ಮೂತ್ರಕೋಶದ ಒಳಭಾಗವನ್ನು ವೀಕ್ಷಿಸಿ ಸೂಕ್ತ ಕಾರಣವನ್ನು ತಿಳಿದುಕೊಳ್ಳಬಹುದು.


ತಡೆಗಟ್ಟುವ ಕ್ರಮ ಹೇಗೆ?

*ಹೆಚ್ಚಿನ ಪ್ರಮಾಣದಲ್ಲಿ  ನೀರನ್ನು ಕುಡಿಯುವುದರಿಂದ ಬ್ಯಾಕ್ಟರಿಯ ಬೆಳೆಯದಂತೆ ತಡೆಯಬಹುದು.

*ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು.

*ಮೂತ್ರವನ್ನು ತಡೆಹಿಡಿಯದೇ ಇರುವುದು

*ಮಧುಮೇಹ ನಿಯಂತ್ರಣ

* ಮಲಬದ್ಧತೆ ಆಗದಂತೆ ಎಚ್ಚರವಹಿಸುವುದು

*ವಿಟಮಿನ್ C ಜಾಸ್ತಿ ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಮೂತ್ರದ ಸೋಂಕು ಬಾರದಂತೆ ತಡೆಗಟ್ಟಬಹುದು.

*ಮೂತ್ರಜನಕಾಂಗದ ಸೋಂಕು ಉಂಟಾದ ತಕ್ಷಣ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸೋಂಕು ತೀವ್ರತೆಯನ್ನು ನಿಯಂತ್ರಿಸಬಹುದು.

ಡಾ. ಭವ್ಯ ಶೆಟ್ಟಿ
ಹೋಮಿಯೋಪತಿ ವೈದ್ಯರು
ಶ್ರೀ ಗುರು ಹೋಮಿಯೋಪತಿ

ಇತ್ತೀಚಿನ ಸುದ್ದಿ

ಜಾಹೀರಾತು