3:00 AM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ವಿಟಮಿನ್ ‘ಎ’ ಪ್ರಾಮುಖ್ಯತೆ: ಯಾವುದರಲೆಲ್ಲ ಇದು ಸಿಗುತ್ತದೆ?; ಕೊರತೆಯ ಲಕ್ಷಣಗಳೇನು ?

28/01/2022, 23:31

ಮೊಟ್ಟ ಮೊದಲು ಕಂಡುಹಿಡಿದ ವಿಟಮಿನ್ ಅಂದರೆ ವಿಟಮಿನ್ A. ಇದು ಕಣ್ಣಿನ ಆರೋಗ್ಯಕ್ಕೆ ಬೇಕಾದ ಅತೀ ಮುಖ್ಯವಾದ ಅಂಶವಾಗಿದೆ. ಇದು ಸಸ್ಯಾಹಾರ ಹಾಗು ಮಾಂಸಾಹಾರ ಎರಡೂ ಮೂಲಗಳಿಂದ ದೊರೆಯುತ್ತದೆ.

ಮೊಟ್ಟೆ, ಕೋಳಿ ಮಾಂಸ, ಲಿವರ್, ಹಾಲು, ತುಪ್ಪ ,ಬೆಣ್ಣೆ, ಕಾಳುಗಳು , ಹಸಿರು ತರಕಾರಿ, ಕ್ಯಾರಟ್, ಸಿಹಿಗುಂಬಳಕಾಯಿ, ಹಳದಿ ಬಣ್ಣದ ಹಣ್ಣು ಪಪ್ಪಾಯ, ಮಾವಿನಕಾಯಿ, ಫಿಶ್ ಲಿವರ್ ಆಯಿಲ್ ಇವುಗಳಲ್ಲಿ ಹೇರಳವಾಗಿ ವಿಟಮಿನ್ A ಕಂಡು ಬರುತ್ತದೆ.

ಬೇರೆ ಬೇರೆ ಕಾರಣಗಳಿಂದ ಇದರ ಅಂಶದ ಕೊರತೆ  ನಮ್ಮ ದೇಹದಲ್ಲಿ ಕಂಡುಬರುತ್ತದೆ.

* ಜೀರ್ಣನಾಂಗವ್ಯೂಹದಲ್ಲಿನ ತೊಂದರೆಯಿಂದಾಗಿ ನಾವು ಸೇವಿಸಿದ ವಿಟಮಿನ್ಅನ್ನು ನಮ್ಮ ದೇಹ ಸರಿಯಾಗಿ ಹೀರಿಕೊಳ್ಳದೇ ಇರುವುದರಿಂದ

* ಲಿವರ್ /ಪಿತ್ತಜನಕಾಂಗದ ಖಾಯಿಲೆ

* ಗರ್ಭಿಣಿಯರಲ್ಲಿ, ಬೆಳೆಯುವ ಮಕ್ಕಳಲ್ಲಿ ಅಧಿಕ  ಬೇಡಿಕೆ  ಇದ್ದಾಗ ಸರಿಯಾಗಿ ಆಹಾರದಲ್ಲಿ ಪೂರೈಕೆ ಆಗದೇ ಇರುವುದರಿಂದ ವಿಟಮಿನ್ A ಕೊರತೆ ಉಂಟಾಗುತ್ತದೆ.

ಲಕ್ಷಣಗಳು ಏನು?:

ಮೊತ್ತ ಮೊದಲಿಗೆ ಕಂಡು ಬರುವ ಲಕ್ಷಣ ಎಂದರೆ ಇರುಳುಗಣ್ಣು, ಮಂದ ಬೆಳಕಿನಲ್ಲಿ ಸರಿಯಾಗಿ ಕಾಣಿಸದೇ ಇರುವುದು, ಒಣ ಚರ್ಮ, ಮೂಳೆಗಳ ಸರಿಯಾದ ಬೆಳವಣಿಗೆ ಆಗದೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತವಾಗುವುದು, ರೋಗ ನಿರೋಧಕ ಶಕ್ತಿ ಕಡಿಮೆ ಆಗಿ ಸೋಂಕು  ಸುಲಭವಾಗಿ ತಗಲುವುದು , ನರಗಳ ಕಾರ್ಯಕ್ಷಮತೆ ತಗ್ಗುವುದು, ಕಣ್ಣಿನ ಬಿಳಿಭಾಗಕ್ಕೆ ಸಂಬಂಧಿಸಿದ ತೊಂದರೆ, ಕೆಲವೊಮ್ಮೆ ಶಾಶ್ವತವಾಗಿ ದೃಷ್ಟಿಹೀನರನ್ನಾಗಿ ಮಾಡಬಹುದು.

RDA ಪ್ರಕಾರ ಒಬ್ಬ ಆರೋಗ್ಯವಂತನಿಗೆ, ಮಗುವಿನಿಂದ ಹಿಡಿದು ವಯಸ್ಕರವರೆಗೆ ದಿನವೊಂದಕ್ಕೆ ಸುಮಾರು 350ರಿಂದ 950 ಮೈಕ್ರೋ ಗ್ರಾಂನಷ್ಟು ವಿಟಮಿನ್ A ಆಹಾರದ ಮೂಲಕ ಸೇವನೆ ಮಾಡುವುದದಿಂದ ಈ ಎಲ್ಲಾ ತೊಂದರೆಗಳು ಬಾರದಂತೆ ತಡೆಗಟ್ಟಬಹುದು. ಹಾಗೆಂದು ಅತಿಯಾದ ಸೇವನೆಯೂ ಸಹ ತೊಂದರೆಯನ್ನ ಉಂಟುಮಾಡಬಹುದು. ಆದ್ದರಿಂದ ದೇಹಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣವನ್ನು ಸೇವನೆ ಮಾಡುವುದು ಒಳಿತು.

✍️ ಡಾ. ಭವ್ಯ ಶೆಟ್ಟಿ

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ

ಇತ್ತೀಚಿನ ಸುದ್ದಿ

ಜಾಹೀರಾತು