5:35 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಕಣ್ಣಾರೆ ಕಂಡ ಪದ್ಮಶ್ರೀ: ಹತ್ತಾರು ಹಾಜಬ್ಬರು ನಮ್ಮ ನಡುವೆ ಹುಟ್ಟಿಬರಲಿ

20/11/2021, 22:46

ನವೆಂಬರ್ 14, 2021, ಮಕ್ಕಳ ದಿನಾಚರಣೆಯ ಸಂಭ್ರಮ. ಹೊರಗೆ ಜೋರಾಗಿ ಮಳೆ ಸುರಿಯುತ್ತಿತ್ತು. ನಮ್ಮ ಊರಿನ ಹೆಮ್ಮೆಯ ಪದ್ಮಶ್ರೀ ಪುರಸ್ಕೃತ ಹಾಜಬ್ಬ ರವರನ್ನು ಜೆಸಿಐ ಮಂಗಳಗಂಗೋತ್ರಿ ಘಟಕದ ವತಿಯಿಂದ ಭೇಟಿ ಮಾಡುವುದೆಂದು ಮೊದಲೇ ನಿರ್ಧರಿಸಲಾಗಿತ್ತು.

ಮಳೆಯ ಆರ್ಭಟ ನೋಡುವಾಗ ಕತ್ತಲಿನಲ್ಲಿ ಹೋಗುವುದೋ ಬೇಡವೋ ಎಂಬ ದ್ವಂದ್ವದಲ್ಲಿ ನಾನು  ಮುಳುಗಿದೆ. ಏನೇ ಆಗಲಿ ಅವರನ್ನು ಭೇಟಿ ಮಾಡುವುದಾಗಿ ದೃಢ ನಿಶ್ಚಯ ಮಾಡಿ ಅವರ ಮನೆಯಾದ ನ್ಯೂಪಡ್ಪು ಕಡೆಗೆ ನಮ್ಮ ಪ್ರಯಾಣ ಸಾಗಿತ್ತು.

ಅಂದಾಜು 06:45ಕ್ಜೆ ಅವರ ಮನೆಯ ದಾರಿ ತಲುಪಿದೆವು. ವರುಣರಾಯನ ಆರ್ಭಟ ಇನ್ನೂ ಜೋರಾಗಿತ್ತು. ಅದಾಗಲೇ ಕಟೀಲಿನಲ್ಲಿ ಸನ್ಮಾನ ಸಮಾರಂಭ ಮುಗಿಸಿ ಮನೆಗೆ ಬಂದಿದ್ದ ಹಾಜಬ್ಬರು. ಆ ಸುರಿಯುತ್ತಿರುವ ಮಳೆಯಲ್ಲಿ ಮನೆಯ ಜಗಲಿಯಲ್ಲಿ ನಮ್ಮನ್ನು ಎದುರುಗೊಂಡರು.

ಅವರ ಮನೆಯ ಅಂಗಳಕ್ಕೆ ಇಳಿದಾಗ ನಮಗೆ ಅದೇನೋ ಪುನೀತ ಭಾವ.ನಮ್ಮನ್ನು ನೋಡಿದ ತಕ್ಷಣ ಅದೇನು ಆದರಾತಿಥ್ಯ…..

ಅದೇ ಸರಳತೆ, ಅದೇ ನಿರ್ಲಿಪ್ತ ಭಾವ, ಅಹಂಕಾರ ಆಡಂಬರದ ಲವಲೇಶವೂ ಸುಳಿವಿಲ್ಲ..ಅದೇ ಪೂರ್ತಿ ಗುಂಡಿ ಹಾಕದ ಶರ್ಟು…

ಮನೆಯೊಳಗೆ ಬಂದ ತಕ್ಷಣ ಹಲವಾರು ಪ್ರಶಸ್ತಿಗಳು ನಮ್ಮ ಕಣ್ಣನ್ನು ಸೆಳೆದವು.

ನನ್ನ ಮನದಲ್ಲಿದ್ದ ಕುತೂಹಲ, ಆಸೆ ಎಂದರೆ ರಾಷ್ಟ್ರಪತಿಯವರು ಕೊಟ್ಟ ಪದ್ಮಶ್ರೀ ಪುರಸ್ಕಾರವನ್ನು ಕಣ್ಣಾರೆ ನೋಡಿ ಮುಟ್ಟಿ ನಮಸ್ಕರಿಸಬೇಕು ಎಂಬುದಾಗಿತ್ತು.

ಕೇವಲ ಟಿವಿಯಲ್ಲಿ ಮಾತ್ರ ಪದ್ಮಶ್ರೀ ಪುರಸ್ಕಾರದ ದೃಶ್ಯಾವಳಿ ನೋಡುತ್ತಿದ್ದ ನನಗೆ ಪದ್ಮಶ್ರೀಯನ್ನು ನೋಡಿದಾಗ ಆದ ಆನಂದ ಹೇಳತೀರದು.

ಹಾಜಬ್ಬರ ಪದ್ಮಶ್ರೀ ಪುರಸ್ಕಾರದ ಹಿಂದಿರುವ ಸಾಧನೆ ಮತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಆದಂತಹ ಅನುಭವ ಕೇಳಿದಾಗ ರೋಮಾಂಚನವಾಯಿತು.

ಪ್ರಶಸ್ತಿಯ ಬಗ್ಗೆ ಎಂದಿಗೂ ಕನಸು ಕಾಣದೆ ತನ್ನ ಮಹದಾಸೆಯನ್ನು ಈಡೇರಿಸಲು ಪಣತೊಟ್ಟ ಸಾಮಾನ್ಯ ವ್ಯಕ್ತಿಗೆ ಇಂತಹ ಪುರಸ್ಕಾರ ಬಂದಾಗ ಅದರ ಮೌಲ್ಯ ಹೆಚ್ಚಾಗುತ್ತದೆ. ಪ್ರಶಸ್ತಿಗೆ ಹಣ ಶ್ರೀಮಂತಿಕೆ ಮುಖ್ಯವಲ್ಲ ಸಾಧಿಸಲೇಬೇಕೆಂಬ ಛಲ ಒಂದಿದ್ದರೆ ಸಾಕು ಎಂಬುದಕ್ಕೆ ಹಾಜಬ್ಬರೇ ಸಾಕ್ಷಿ.


ಹಾಜಬ್ಬರ ನಿರ್ಮಲ ಮನಸ್ಸು ಸರಳತೆ ಸಹೃದಯತೆ ಮುಗ್ಧತೆ ಸಾಧಿಸುವ ಛಲ ಅಭಿಮಾನಕ್ಕೆ ಶರಣು ಶರಣು. ಇಂತಹ ಹತ್ತಾರು ಹಾಜಬ್ಬರು ನಮ್ಮ ಭಾರತ ಮಾತೆಯ ಒಡಲಿನಲ್ಲಿ ಹುಟ್ಟಿಬರಲಿ ಎಂಬುದೇ ನಮ್ಮೆಲ್ಲರ ಆಶಯ.

ಇವರ ಜೊತೆ ಮಾತನಾಡುವಾಗ ನನಗೆ ಅನಿಸಿದ್ದು ಇಷ್ಟೇ ಇವರಿಂದ ಇನ್ನೂ ನಾನು ಎಷ್ಟೊಂದು ಕಲಿಯಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು