12:30 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ನೇತಾರ ಪಮ್ಮಿ ಕೊಡಿಯಾಲ್ ಬೈಲ್ ಗೆ ನಿಗಮ – ಮಂಡಳಿಗಳಲ್ಲಿ ಪ್ರಾತಿನಿಧ್ಯ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಗೆ ಮನವಿ

11/11/2021, 15:28

ಮಂಗಳೂರು(reporterkarnataka.com):
ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ರಂಗದ ಮುಂದಾಳು ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಾಲ್ ಬೈಲ್ ಅವರು ತಮ್ಮ ವಿಶಿಷ್ಟ ಸೇವಾ ಮನೋಭಾವದಿಂದ ನಾಡಿನೆಲ್ಲೆಡೆ ಪರಿಚಿತರಾಗಿದ್ದಾರೆ. ಜನ ಸಾಮಾನ್ಯರ  ನೋವು- ನಲಿವು, ದುಃಖ- ದುಮ್ಮಾನಗಳಿಗೆ ತನ್ನ ಬದುಕನ್ನೇ ಧಾರೆಯೆರೆದ ಅವರಿಗೆ ನಿಗಮ -ಮಂಡಳಿಯಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಮಾಡಲಾಗಿದೆ.

ಪ್ರವೀಣ್ ಕುಮಾರ್  ಅವರು ಧಾಮಿ೯ಕ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಅಸಂಖ್ಯಾತ ಬಡ ಬಗ್ಗರ, ದೀನ, ದುಖಿ:ತರ ಆಶ್ರಯದಾತರಾಗಿರುವ  ಪಮ್ಮಿ ಅವರು ವಿಭಿನ್ನ ರೀತಿಯ ಅಧ್ಯಾಯವನ್ನು ಸೃಷ್ಠಿಸಿದ ಮೇರು ವ್ಯಕ್ತಿತ್ವದ ಯುವ  ಧುರೀಣರಾಗಿದ್ದಾರೆ.  ತನ್ನ ವರಮಾನದ ಬಹು ಭಾಗವನ್ನು ಧಾಮಿ೯ಕ, ಸಾಮಾಜಿಕ ರಂಗಗಳಲ್ಲಿ ಧಾರೆಯೆರೆದು ಸಮಾಜದ ಬಹುಮುಖ ಪ್ರಗತಿಗಾಗಿ ರಾತ್ರಿ ಹಗಲೆನ್ನದೆ ದುಡಿಯುತ್ತಿರುವ ಕ್ರಿಯಾಶೀಲ ವ್ಯಕ್ತಿ.

ಶ್ರೀ ಭಗವತಿ ದೇವಸ್ಥಾನದ ಅಭಿವೃದ್ಧಿಗಾಗಿ ರಾತ್ರಿ, ಹಗಲೆನ್ನದೆ ದುಡಿಯುತ್ತಿರುವ  ಅವರು ಧಾಮಿ೯ಕ, ಸಾಂಸ್ಕ್ರತಿಕ, ಸಾಹಿತ್ಯಿಕ, ಚಲನ ಚಿತ್ರ ನಿಮಾ೯ಣ ಮುಂತಾದ ವಿವಿಧ ರಂಗಗಳಲ್ಲಿ ವಿಜೃಂಭಿಸಿ ಜನ ಮನಗಳ ಹೃದಯದಲ್ಲಿ ನೆಲೆಸಿದ್ದಾರೆ.

ಸಾಮಾಜಿಕ ರಂಗದ ಬಹುದೊಡ್ಡ ಹೆಸರಾದ ಪಮ್ಮಿ ಕೊಡಿಯಾಲ್ ಬೈಲ್ ಬಡವ – ಬಲ್ಲಿದ,  ಹಿರಿಯ – ಕಿರಿಯ ಭೇದಭಾವವಿಲ್ಲದ ಎಲ್ಲರೊಂದಿಗೆ ಮಾನವೀಯತೆಯಿಂದ ವತಿ೯ಸುವ ಹೃದಯ ಶ್ರೀಮಂತಿಕೆಯ ಓವ೯ ತ್ಯಾಗ ಜೀವಿಯಾಗಿದ್ದಾರೆ.  ಅಹಂಕಾರ, ಅಹಂಭಾವಗಳ ಪರಿಚಯವೇ ಇಲ್ಲದ, ದ್ವೇಷ ಮತ್ಸರಗಳ ಅರಿವಿಲ್ಲದ ಸರಳ ನಿರಾಂಡಬರ ವ್ಯಕ್ತಿತ್ವದ ನಿಷ್ಕಳಂಕತೆಯ ನಿಜರೂಪದ ಸದ್ಗುಣ ಸಂಪನ್ನತೆ, ಸಚ್ಚಾರಿತ್ಯಗಳ ಸಂಗಮವಾಗಿರುವ  ಪ್ರವೀಣ್ ಕುಮಾರ್ (ಪಮ್ಮಿ) ಕೊಡಿಯಾಲ್ ಬೈಲ್ ರವರಿಗೆ ಕನಾ೯ಟಕ ಸರಕಾರವು ನಿಗಮ ಮಂಡಳಿಗಳನ್ನು  ಪುನಾ ರಚನೆ ಮಾಡುವ ಸಂದಭ೯ದಲ್ಲಿ ಸೂಕ್ತ ಪ್ರಾತಿನಿಧ್ಯ  ನೀಡ ಬೇಕಾಗಿದೆ.  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಪ್ರವೀಣ್ ಕುಮಾರ್ (ಪಮ್ಮಿ) ರವರಿಗೆ ರಾಜ್ಯದ ನಿಗಮ ಮಂಡಳಿಯ ಸೂಕ್ತ ಹುದ್ದೆ ದೊರಕಿಸಿ ಕೊಡುತ್ತಾರೆಂಬ ಭರವಸೆ ಜಿಲ್ಲೆಯ ಜನತೆಯದ್ದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು