9:39 PM Sunday15 - June 2025
ಬ್ರೇಕಿಂಗ್ ನ್ಯೂಸ್
Bangalore | ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ: ಮಾಜಿ ಪ್ರಧಾನಿ… ಬಸವಸಾಗರ ಜಲಾಶಯ ಭರ್ತಿ: 8 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ Kalburgi | ಮೀಸಲಾತಿ, ಜಾತಿ ಗಣತಿ ಕಾಂಗ್ರೆಸ್ಸಿನ ರಾಜಕೀಯ ಡ್ರಾಮಾ: ಕೇಂದ್ರ ಸಚಿವ… ಆರೋಗ್ಯ ಆವಿಷ್ಕಾರ’ದಂತಹ ಕಾರ್ಯಕ್ರಮ ಬಿಜೆಪಿ ಕಲ್ಪನೆಗೂ ಬರಲಿಕ್ಕೆ ಸಾಧ್ಯವಿಲ್ಲ: ಆರೋಗ್ಯ ಸಚಿವ ದಿನೇಶ್… Mangaluru | ಕೋಮು ಹಿಂಸಾಚಾರ ಹತ್ತಿಕ್ಕಲು ವಿಶೇಷ ಕಾರ್ಯಪಡೆ ರೆಡಿ: 4 ತುಕಡಿಗಳ… ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಮುಖ್ಯಮಂತ್ರಿ… ಲಕ್ಕೀ ಲೇಡಿ: ಟ್ರಾಫಿಕ್ ನಲ್ಲಿ 10 ನಿಮಿಷ ಸಿಲುಕಿದ ಮಹಿಳೆಗೆ ಫ್ಲೈಟ್ ಮಿಸ್;… ಅಹಮದಾಬಾದ್: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ಬೋಯಿಂಗ್ ಪತನ; ಬೆಂಕಿಯುಂಡೆಯಾದ… New Delhi | ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ… Mangaluru | ಕೋಮು ನಿಗ್ರಹ ಪಡೆ ಮುಖ್ಯಸ್ಥರಾಗಿ ಅಮಿತ್ ಸಿಂಗ್ ನೇಮಕ: ತುಳುನಾಡು,…

ಇತ್ತೀಚಿನ ಸುದ್ದಿ

ಅಂದು ಪಂಪವೆಲ್ ಗ್ ಬಲೆ! ಇಂದು ಪಂಪವೆಲ್ ಗ್ ಬರೋಚ್ಚಿ !!

29/05/2021, 16:48

ಮಂಗಳೂರು: ಇಂದು ಪಂಪವೆಲ್ ನೀರಿನಲ್ಲಿ ತೇಲಾಡುತ್ತಿದೆ. ಪಂಪವೆಲ್ ಮಾರ್ಗವಾಗಿ ಹೋಗುವವರು ಬೇರೆದಾರಿ ಹುಡುಕುವುದು ಉತ್ತಮ. ಯಾಕೆಂದರೆ ಪಂಪವೆಲ್ ಮೇಲ್ಸೆತುವೆ ಅಡಿಯಲ್ಲಿ ನೀರುತುಂಬಿ ವಾಹನ ಸವಾರರು ಪರದಾಡುತ್ತಿದ್ದಾರೆ.  ಪಂಪವೆಲ್ ಪ್ಲೈಒವರ್ ಆಗುವಾಗಲೂ ನಮ್ಮದು ಅವಸ್ಥೆ ! ಈಗ ಆದಮೇಲೂ ದುರವಸ್ಥೆ. ಒಟ್ಟು ನಮ್ಮೂರಿನ ಹಣೆಬರಹ ಸರಿ ಇಲ್ಲವಾ ಅಂತ ಅನುಸುತ್ತೆ.  


ಪ್ಲೈಒವರ್ ದಶಮಾನೋತ್ಸವ ಆಚರಿಸಿಕೊಂಡ ಬಳಿಕ ಅಳುತ್ತ ಅಳುತ್ತ ಉದ್ಘಾಟನಾ ಭಾಗ್ಯ ಕಂಡಿದ್ದ ಮೇಲ್ಸೇತುವೆ ಅಂದು ಪಂಪವೆಲ್ ಗೆ ಬಲೆ! ಎಂದು ಪ್ರಸಿದ್ಧಿಯಾಗಿದ್ದರೆ ಇಂದು ತನ್ನ ಕಳಪೆ ಕಾಮಗಾರಿಯಿಂದಾಗಿ ಮಂಗಳೂರಿನ ಜನರ ಬಾಯಲ್ಲಿ ಪಂಪವೆಲ್ ಗೆ ಬರೋಚ್ಚಿ!! ಎಂದು ಪ್ರಸಿದ್ದಿಯಗುತ್ತಿದೆ. ಕಾರಣವಿಷ್ಟೆ! ನವಯುಗ ಎಂಬ ದರಿದ್ರ ಕಂಪನಿಯ ಬೇಜವಾಬ್ದಾರಿ, ದರಿದ್ರತನ, ಬುದ್ದಿಗೇಡಿತನದ ಹಾಗೂ ನಿಷ್ಕ್ರಿಯ ತನದ ಫಲವನ್ನು ಮಂಗಳೂರಿಗರು ಅನುಭವಿಸಬೇಕಿದೆ. ಇದನ್ನೆಲ್ಲ ಗಮನಿಸಿ ಎಚ್ಚೆತ್ತುಕೊಂಡು ಆವಾಂತರಗಳನ್ನು ಸರಿಪಡಿಸಬೇಕಿದ್ದ ಜನಪ್ರತಿನಿಧಿಗಳು ಮಾತ್ರ ನಿದ್ದೆಮಾಡುತ್ತಿರುವುದು ನಮ್ಮೂರಿಗಿರುವ ಮತ್ತೊಂದು ಶಾಪ. ಒಟ್ಟಿನಲ್ಲಿ ಹೇಳುವುದಾದ್ರೆ ಅಪ್ಪ ಅಮ್ಮನ ಜಗಳದಲ್ಲಿ ಕೂಸುಬಡವಾದಂತೆ ಮಂಗಳೂರಿಗರ ಸ್ಥಿತಿಯಾಗಿದೆ.

– ದಿಲ್ ರಾಜ್ ಆಳ್ವ

ಇತ್ತೀಚಿನ ಸುದ್ದಿ

ಜಾಹೀರಾತು