10:43 PM Monday29 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

ತಲಪಾಡಿ ದೇಗುಲ ಹೆಸರಲ್ಲಿ ಅನಧಿಕೃತ ನಿಧಿ ಸಂಗ್ರಹಿಸಿ ಸಾರ್ವಜನಿಕ ಚಂಡಿಕಾ ಯಾಗ ಆರೋಪ: ಕ್ರಮಕ್ಕೆ ಆಗ್ರಹ

21/11/2025, 21:04

ಮಂಗಳೂರು(reporterkarnataka.com): ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇಗುಲ ಹೆಸರಲ್ಲಿ ಅನಧಿಕೃತ ನಿಧಿ ಸಂಗ್ರಹಿಸಿ ಸಾರ್ವಜನಿಕ ಚಂಡಿಕಾ ಯಾಗ ನಡೆಸುತ್ತಿರುವುದಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯುಕ್ತರಿಗೆ ಸಾರ್ವಜನಿಕರು ದೂರು ನೀಡಿದ್ದಾರೆ.
ದೇವಸ್ಥಾನದಲ್ಲಿ ನ. 23ರಂದು ದೇವಸ್ಥಾನದಲ್ಲಿ ಶಿವಳ್ಳಿ ಸಭಾ ಎನ್ನುವ ಸಂಘವು “ ಸಾರ್ವಜನಿಕ ಚಂಡಿಕಾ ಯಾಗ” ಆಯೋಜಿಸಿದೆ.
ತಲಪಾಡಿ ಕ್ಷೇತ್ರದ ವತಿಯಿಂದ ಈಗಾಗಲೇ ಚಾಲ್ತಿಯಲ್ಲಿರುವ ಸಾಂಪ್ರಾದಾಯಿಕವಾಗಿರುವ ಈ “ ಚಂಡಿಕಾ ಯಾಗ “ ಸೇವಯನ್ನು ದೇವಸ್ಥಾನದ ಮತ್ತು ದೇವರ ಕಾರಣೀಕ ಸಾನಿಧ್ಯ ಉಲ್ಲೇಖಿಸಿಕೊಂಡು ಖಾಸಗಿ ಸಂಘ ಒಂದು ಸ್ವ ಲಾಭಕ್ಕೆ ಬಳಸಿಕೊಂಡು ಊರ ಪರವೂರಿನ, ಕ್ಷೇತ್ರದ ಯಾ ಸಾರ್ವಜಿನಿಕ ಭಕ್ತರಿಂದ ದೇಣಿಗೆಯನ್ನು ಸಂಗ್ರಹಿಸುವ ಪಿತೂರಿ ನಡೆದಿರುವುದು ಮೇಲ್ನೋಟಕ್ಕೆ ಕರಪತ್ರ ಹಾಗೂ ಇತರ ಬಿತ್ತಿ ಪತ್ರದಿಂದ ಕಂಡು ಬಂದಿದೆ. ಇದಕ್ಕಾಗಿ ಕರಪತ್ರಗಳನ್ನು ಮುದ್ರಿಸಿ ದೇವಸ್ಥಾನದ ಅರ್ಚಕರನ್ನೂ ಮತ್ತು ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಯಾಮಾರಿಸಿ ಕ್ಷೇತ್ರದ ಪರಿಸರದಲ್ಲಿ ಕಟೌಟ್ಗಳನ್ನು ಹಾಕಲಾಗಿದೆ. ಹಣ ಸಂಗ್ರಹಣೆಗಾಗಿ “ಶಿವಳ್ಳಿ ಸಭಾ” ಎನ್ನುವ ಹೆಸರಿನಲ್ಲಿ ಬ್ಯಾಂಕಿನ ಕ್ಯೂಆರ್ ಕೋಡ್ ನೀಡಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಖಾಸಗಿಯಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಇಲ್ಲ. ಇಂತಹ ಸಂಘದ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಜರುಗಿಸುವಂತೆ ರಘುರಾಮ್ ರಾವ್ ಕೆ. ದೂರು ನೀಡಿದ್ದಾರೆ.
ಯಾಗಕ್ಕೆ ದೇಣಿಗೆ ಸಂಗ್ರಹಿಸಿ ಉಳಿಕೆಯ ಲಕ್ಷಾಂತರ ಹಣವನ್ನು ಖಾಸಗಿಯವರು ಸ್ವಂತಕ್ಕೆ ಉಪಯೋಗಿಸಿಕೊಳ್ಳುವ ಸಾಧ್ಯತೆಯಿದ್ದು, ಉಳಿಕೆ ಹಣವನ್ನು ದೇವಸ್ಥಾನದ ನಿಧಿಗೆ ಬಳಸಿಕೊಳ್ಳ ಬೇಕು ಎಂದು ಮನವಿ ಮಾಡಿದ್ದಾರೆ.
ತಲಪಾಡಿ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯು ಅಸ್ತಿತ್ವವಿಲ್ಲದ ಕಾರಣ ನೇರವಾಗಿ ಆಡಳಿತ ಅಧಿಕಾರಿಗಳ ನೇರ ಸುಪರ್ದಿಯಲ್ಲಿದೆ. ಹೀಗಾಗಿ ಆಡಳಿತಾಧಿಕಾರಿಗೂ ದೂರು ಸಲ್ಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು