ಇತ್ತೀಚಿನ ಸುದ್ದಿ
Mangaluru | ಬೈಕಂಪಾಡಿ ಬಳಿ ಕೇರಳದ ಉದ್ಯಮಿಯ ಕಾರು ಅಡ್ಡಗಟ್ಟಿ ಚಿನ್ನಾಭರಣ ದೋಚಿದ ದರೋಡೆಕೋರರು
29/06/2026, 18:16
ಮಂಗಳೂರು(reporterkarnataka.com): ಕೇರಳ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಾಡಿದ ಘಟನೆ ಸೋಮವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಬಳಿ ನಡೆದಿದೆ.
ಕೇರಳದ ಪಯ್ಯನ್ನೂರು ನಿವಾಸಿ ವಿಕಾಸ್ ಎಂಬವರು ತನ್ನ ಕುಟುಂಬದ ಜತೆ ಪಯಣಿಸುತ್ತಿದ್ದಾಗ 3 ಕಾರಿನಲ್ಲಿ ಬಂದ ದರೋಡೆಕೋರರು ಈ ಕೃತ್ಯ ಎಸಗಿದ್ದಾರೆ.
ಮೂರು ಕಾರುಗಳಲ್ಲಿ ಬಂದ ಸುಮಾರು 7-8 ಮಂದಿ ದರೋಡೆಕೋರರು ವಿಕಾಸ್ ಅವರನ್ನು ಕಾರಿನಿಂದ ಇಳಿಸಿ, ಅವರ ಪತ್ನಿ ಹಾಗೂ ಮಗುವನ್ನು ಕಾರು ಸಹಿತ ಅಪಹರಿಸಿದ್ದರು. ದರೋಡೆಕೋರರು ಪಣಂಬೂರು ಬಳಿ ಚಿನ್ನಾಭರಣಗಳನ್ನೆಲ್ಲ ಲೂಟಿ ಮಾಡಿ ವಿಕಾಸ್ ಅವರ ಪತ್ನಿ ಹಾಗೂ ಮಗುವನ್ನು ರಸ್ತೆಯಲ್ಲೇ ಬಿಟ್ಟು ಕಾರು ಸಹಿತ ಪರಾರಿಯಾಗಿದ್ದಾರೆ. ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ.












