9:20 PM Wednesday22 - July 2026
ಬ್ರೇಕಿಂಗ್ ನ್ಯೂಸ್
ಶಾಸಕ ಪೊನ್ನಣ್ಣ ಕೋರಿಕೆ‌: ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ 3 ಕೋಟಿ ಅನುದಾನ… ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿ ಕುಶಾಲನಗರದ ಎಸ್. ಎಸ್. ನಕುಲ್ ನೇಮಕ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರ ಧರ್ಮದೇಟು; ಪೊಲೀಸ್ ವಶಕ್ಕೆ ವಂದೇ ಮಾತರಂ ಗೀತೆಗೆ ಹೊಸ ರೂಲ್ಸ್: ಸಂಸತ್ ಮುಂಗಾರು ಅಧಿವೇಶನದಲ್ಲಿ ಮಸೂದೆ ಮಂಡನೆ ತೀರ್ಥಹಳ್ಳಿ | ಗುಂಡುಗದ್ದೆ ಬಳಿ ಆಟವಾಡುತ್ತಾ ರಸ್ತೆಗೆ ಬಂದ ಮಗು: ಕಾರು ಡಿಕ್ಕಿಯಾಗಿ… ಧಾರವಾಡ ಟು ಬೆಂಗಳೂರು: ಲಾರಿಯಲ್ಲಿ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಗೋವುಗಳ ಮಾಂಸ ವಶ Mangaluru | ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ:… ದಾರಿ ತಪ್ಪಿ ನಾಪೋಕ್ಲು ಪಟ್ಟಣ ಪ್ರವೇಶಿಸಿದ ಜಿಂಕೆ: ವಾಹನಗಳ ಅರ್ಭಟ, ಬೀದಿ ನಾಯಿಗಳ… ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ನಿರ್ಧಾರ ಕೈಬಿಡದಿದ್ದರೆ ಧರಣಿ: ವಿವಿಧ ಸಂಘಟನೆಗಳ ಆಕ್ರೋಶ

ಇತ್ತೀಚಿನ ಸುದ್ದಿ

Mangaluru | ಜೆಪ್ಪು ಸೆಮಿನರಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

15/12/2025, 22:01

ಮಂಗಳೂರು(reporterkarnataka.com): ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (FOCUS), ಮಂಗಳೂರು, 2025ರ ಕ್ರಿಸ್ಮಸ್ ಆಚರಣೆಯನ್ನು ನಗರದ ಜೆಪ್ಪು ಸೆಮಿನರಿಯ ಮರಿಯಾ ಜಯಂತಿ ಹಾಲ್‌ನಲ್ಲಿ ಆಚರಿಸಿತು.
ಕಾರ್ಯಕ್ರಮವನ್ನು ಮಂಗಳೂರು ಧರ್ಮಕ್ಷೇತ್ರದ YCS YSM ನಿರ್ದೇಶಕರಾದ ರೆ. ಫಾ. ರೋಶನ್ ಡಿಕುನ್ಹ ಅವರು ಆಶೀರ್ವದಿಸಿದರು ಮತ್ತು ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಜಾನ್ ಬಿ. ಮೊಂತೇರೊ ಅವರು ಅಧ್ಯಕ್ಷತೆ ವಹಿಸಿದರು. ಈ ದಿನದ ಮುಖ್ಯ ಅತಿಥಿಯಾಗಿ ಬಂಟ್ವಾಳ ತಾಲೂಕಿನ ಹಿರಿಯ ಸಹಾಯಕ ನಿರ್ದೇಶಕ (ತೋಟಗಾರಿಕೆ) ಜೋ ಪ್ರದೀಪ್ ಡಿಸೋಜ ಅವರು ಉಪಸ್ಥಿತರಿದ್ದರು
ಅದೇ ದಿನ ಸಂಸ್ಥೆಯ ವಾರ್ಷಿಕ  ಸಭೆ ನಡೆಯಿತು ಮತ್ತು 2026-27ನೇ ಸಾಲಿನ ಹೊಸ ಪದಾಧಿಕಾರಿಗಳ ಚುನಾವಣೆ ನಡೆಯಿತು.

*ಚುನಾಯಿತರಾದ ಹೊಸ ಪದಾಧಿಕಾರಿಗಳು:*
ಅಧ್ಯಕ್ಷ: ಮೆಲ್ವಿನ್ ಪ್ರಕಾಶ್ ಪಿರೇರಾ, ಮೆಸ್ಕಾಂ, ಬಂಟ್ವಾಳ
ಉಪಾಧ್ಯಕ್ಷ: ಕೆವಿನ್ ಲೋಬೊ, ಸಿದ್ದಕಟ್ಟೆ, ಬಂಟ್ವಾಳ
ಕಾರ್ಯದರ್ಶಿ: ಪಿಯುಸ್ ಡಿಸೋಜ, ಮೆಸ್ಕಾಂ, ಮಂಗಳೂರು
ಕೋಶಾಧಿಕಾರಿ: ಮೆಲ್ವಿನ್ ಡಿಸೋಜ, ಮೆಸ್ಕಾಂ, ಉಳ್ಳಾಲ
ಸಂಯೋಜಕ: ಸುನಿಲ್ ಮೊಂತೇರೊ, ಮೆಸ್ಕಾಂ, ಗುರುಪುರ ಕೈಕಂಬ
ಸಂಘಟನಾ ಕಾರ್ಯದರ್ಶಿ: ಸಿರಿಲ್ ರಾಬರ್ಟ್ ಡಿಸೋಜ, ಪೆರ್ಮನ್ನೂರು, ಉಳ್ಳಾಲ ಇವರು ಆಯ್ಕೆಯಾದರು
ಸಂಸ್ಥೆಯು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ವಿತರಿಸಿತು. ಹಾಗೆಯೇ ದಾನಧರ್ಮದ ಭಾಗವಾಗಿ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಸಹಾಯವನ್ನು ಒದಗಿಸಿತು.
ಗಣ್ಯರನ್ನು ಜಾನ್ ಡಿಸೋಜ ಫೋಕಸ್ ಸಂಘಟನೆ ಅಧ್ಯಕ್ಷರು ಸ್ವಾಗತಿಸಿದರು, ಸಂಘಟನೆಯ ಕಾರ್ಯದರ್ಶಿಗಳಾದ ಬೀನಾ ಡಿಸೋಜರವರು ಧನ್ಯವಾದ ಅರ್ಪಿಸಿದರು, ಕಾರ್ಯ ನಿರ್ವಹಣೆಯನ್ನು ಸಂಘಟನೆಯ ಕನ್ವೇನರ್ ಮೌರಿಸ್ ಡಿಸೋಜಾ ಅವರು ನೆರವೇರಿಸಿದರು.
ಮನೋರಂಜನೆ ಆಟ ಇತ್ಯಾದಿಗಳನ್ನು ವಿಲ್ಫ್ರೆಡ್ ಮತಾಯಸ್ ಅವರು ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಸುಮಾರು 92 ಜನ ವಿವಿಧ ಸರ್ಕಾರಿ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಹಾಗೂ ನಿವೃತ್ತ ಅಧಿಕಾರಿ ಹಾಗೂ ನೌಕರರು, ವಿದ್ಯುತ್ ಗುತ್ತಿಗೆದಾರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು