4:12 PM Thursday12 - March 2026
ಬ್ರೇಕಿಂಗ್ ನ್ಯೂಸ್
ರಾಯಚೂರು | ಒಳ ಮೀಸಲಾತಿ ಹೋರಾಟ: ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ ಮಲೆಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಕ್ತರಲ್ಲಿ ಹೆಚ್ಚಿದ ಆತಂಕ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್‌: ಮೌಲ್ಯ 10 ಪಟ್ಟು ಹೆಚ್ಚು,… ಪೆಟಾ ಮೇಲ್ಮನವಿ ವಜಾ: ರಾಜ್ಯದೆಲ್ಲೆಡೆ ಕಂಬಳ ಆಯೋಜನೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನಿಗಮಗಳಿಗೆ ಅನುದಾನ ಕಡಿತ, ಆಸ್ಪತ್ರೆಗಳಲ್ಲಿ ಔಷಧಿ ಇಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ಚಿಕ್ಕಮಗಳೂರು: ಹಸುವನ್ನು ತುಳಿದು ಕೊಂದ ಕಾಡಾನೆ; ಮಾಣಿಮಕ್ಕಿ ಗ್ರಾಮಸ್ಥರಲ್ಲಿ ಆತಂಕ ತೀರ್ಥಹಳ್ಳಿ: ಕುವೆಂಪು ಜೈವಿಕ ಅರಣ್ಯದಲ್ಲಿ ಹತ್ತಿಕೊಂಡ ಬೆಂಕಿ; ಅರಣ್ಯಾಧಿಕಾರಿಗಳ ದೌಡು ಝೂ ಅಭಿ ಇನ್ನಿಲ್ಲ: ಕಾಲು ನೋವಿನಿಂದ ಬಳಲುತ್ತಿದ್ದ ಮತ್ತಿಗೋಡು ಶಿಬಿರದ ಸಾಕಾನೆ ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌…

ಇತ್ತೀಚಿನ ಸುದ್ದಿ

Mangaluru | ಜೆಪ್ಪು ಸೆಮಿನರಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

15/12/2025, 22:01

ಮಂಗಳೂರು(reporterkarnataka.com): ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (FOCUS), ಮಂಗಳೂರು, 2025ರ ಕ್ರಿಸ್ಮಸ್ ಆಚರಣೆಯನ್ನು ನಗರದ ಜೆಪ್ಪು ಸೆಮಿನರಿಯ ಮರಿಯಾ ಜಯಂತಿ ಹಾಲ್‌ನಲ್ಲಿ ಆಚರಿಸಿತು.
ಕಾರ್ಯಕ್ರಮವನ್ನು ಮಂಗಳೂರು ಧರ್ಮಕ್ಷೇತ್ರದ YCS YSM ನಿರ್ದೇಶಕರಾದ ರೆ. ಫಾ. ರೋಶನ್ ಡಿಕುನ್ಹ ಅವರು ಆಶೀರ್ವದಿಸಿದರು ಮತ್ತು ರಚನಾ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಮಾಜಿ ಅಧ್ಯಕ್ಷ ಜಾನ್ ಬಿ. ಮೊಂತೇರೊ ಅವರು ಅಧ್ಯಕ್ಷತೆ ವಹಿಸಿದರು. ಈ ದಿನದ ಮುಖ್ಯ ಅತಿಥಿಯಾಗಿ ಬಂಟ್ವಾಳ ತಾಲೂಕಿನ ಹಿರಿಯ ಸಹಾಯಕ ನಿರ್ದೇಶಕ (ತೋಟಗಾರಿಕೆ) ಜೋ ಪ್ರದೀಪ್ ಡಿಸೋಜ ಅವರು ಉಪಸ್ಥಿತರಿದ್ದರು
ಅದೇ ದಿನ ಸಂಸ್ಥೆಯ ವಾರ್ಷಿಕ  ಸಭೆ ನಡೆಯಿತು ಮತ್ತು 2026-27ನೇ ಸಾಲಿನ ಹೊಸ ಪದಾಧಿಕಾರಿಗಳ ಚುನಾವಣೆ ನಡೆಯಿತು.

*ಚುನಾಯಿತರಾದ ಹೊಸ ಪದಾಧಿಕಾರಿಗಳು:*
ಅಧ್ಯಕ್ಷ: ಮೆಲ್ವಿನ್ ಪ್ರಕಾಶ್ ಪಿರೇರಾ, ಮೆಸ್ಕಾಂ, ಬಂಟ್ವಾಳ
ಉಪಾಧ್ಯಕ್ಷ: ಕೆವಿನ್ ಲೋಬೊ, ಸಿದ್ದಕಟ್ಟೆ, ಬಂಟ್ವಾಳ
ಕಾರ್ಯದರ್ಶಿ: ಪಿಯುಸ್ ಡಿಸೋಜ, ಮೆಸ್ಕಾಂ, ಮಂಗಳೂರು
ಕೋಶಾಧಿಕಾರಿ: ಮೆಲ್ವಿನ್ ಡಿಸೋಜ, ಮೆಸ್ಕಾಂ, ಉಳ್ಳಾಲ
ಸಂಯೋಜಕ: ಸುನಿಲ್ ಮೊಂತೇರೊ, ಮೆಸ್ಕಾಂ, ಗುರುಪುರ ಕೈಕಂಬ
ಸಂಘಟನಾ ಕಾರ್ಯದರ್ಶಿ: ಸಿರಿಲ್ ರಾಬರ್ಟ್ ಡಿಸೋಜ, ಪೆರ್ಮನ್ನೂರು, ಉಳ್ಳಾಲ ಇವರು ಆಯ್ಕೆಯಾದರು
ಸಂಸ್ಥೆಯು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಬಹುಮಾನ ವಿತರಿಸಿತು. ಹಾಗೆಯೇ ದಾನಧರ್ಮದ ಭಾಗವಾಗಿ ಇಬ್ಬರು ಕ್ಯಾನ್ಸರ್ ರೋಗಿಗಳಿಗೆ ಸಹಾಯವನ್ನು ಒದಗಿಸಿತು.
ಗಣ್ಯರನ್ನು ಜಾನ್ ಡಿಸೋಜ ಫೋಕಸ್ ಸಂಘಟನೆ ಅಧ್ಯಕ್ಷರು ಸ್ವಾಗತಿಸಿದರು, ಸಂಘಟನೆಯ ಕಾರ್ಯದರ್ಶಿಗಳಾದ ಬೀನಾ ಡಿಸೋಜರವರು ಧನ್ಯವಾದ ಅರ್ಪಿಸಿದರು, ಕಾರ್ಯ ನಿರ್ವಹಣೆಯನ್ನು ಸಂಘಟನೆಯ ಕನ್ವೇನರ್ ಮೌರಿಸ್ ಡಿಸೋಜಾ ಅವರು ನೆರವೇರಿಸಿದರು.
ಮನೋರಂಜನೆ ಆಟ ಇತ್ಯಾದಿಗಳನ್ನು ವಿಲ್ಫ್ರೆಡ್ ಮತಾಯಸ್ ಅವರು ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಸುಮಾರು 92 ಜನ ವಿವಿಧ ಸರ್ಕಾರಿ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ಹಾಗೂ ನಿವೃತ್ತ ಅಧಿಕಾರಿ ಹಾಗೂ ನೌಕರರು, ವಿದ್ಯುತ್ ಗುತ್ತಿಗೆದಾರರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು