10:57 PM Thursday6 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಆರಗಗೆ ಭಾರಿ ಮುಖಭಂಗ: ಪಲ್ಟಿ ಹೊಡೆದ ಗುಡ್ಡೇಕೊಪ್ಪ ಗ್ರಾಪಂ ಅವಿಶ್ವಾಸ ನಿರ್ಣಯ; ಗುರುವಿಗೆ ತಿರುಮಂತ್ರ ಹಾಕಿದ ಶಿಷ್ಯ..!

06/11/2025, 22:56

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಶಾಸಕ ಆರಗ ಜ್ಞಾನೇಂದ್ರ ಅವರ ಊರು ಆದ ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅವಿಶ್ವಾಸ ನಿರ್ಣಯ ಪಲ್ಟಿ ಹೊಡೆದಿದೆ. ಹಾಲಿ ಅಧ್ಯಕ್ಷ ಅಗಸಾಡಿ‌ ಶಾಮಣ್ಣ ವಿರುದ್ಧ ಶಾಸಕ ಆರಗ ಜ್ಞಾನೇಂದ್ರರೇ ರೂಪಿಸಿದ್ದ ಅವಿಶ್ವಾಸ ನಿರ್ಣಯ ಗುರುವಾರ ಮಂಡನೆಯಾಗಿದೆ. ಅಗಸಾಡಿ‌ ಶಾಮಣ್ಣನ ವಿರುದ್ಧ 6 ಮತ ಚಲಾವಣೆಯಾಗಿದ್ದು 4 ಸದಸ್ಯರು ಗೈರಾಗಿದ್ದಾರೆ. ಇದರಿಂದಾಗಿ ಅವಿಶ್ವಾಸ ನಿರ್ಣಯ ಪಲ್ಟಿ ಹೊಡೆದಿದೆ..
ರಾಜ್ಯದ ಮಾಜಿ‌ ಗೃಹಸಚಿವ ಆರಗ ಜ್ಞಾನೇಂದ್ರರವರು ಸ್ವಕ್ಷೇತ್ರ ಗುಡ್ಡೇಕೊಪ್ಪ ಗ್ರಾಮ ಪಂಚಾಯತಿಯ ಮೇಲೆ ಹಲವು ವರ್ಷಗಳಿಂದ ನಿಯಂತ್ರಣ ಸಾಧಿಸಿದ್ದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾನರ್ ಹಿಡಿಯುವವರು ಕೂಡ ಇರಲಿಲ್ಲ. ಅವಿಶ್ವಾಸ ನಿರ್ಣಯ ಮಂಡನೆ ತಮ್ಮ ಪರವಾಗಿ ನಡೆದೆ ನಡೆಯುತ್ತದೆ ಎಂಬ ನಂಬಿಕೆಯಲ್ಲಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಸೇರಿದಂತೆ ಶಾಸಕರಿಗೆ ಮುಖಭಂಗವಾಗಿದೆ.
ಕಟ್ಟ ಬಿಜೆಪಿ ಅಭಿಮಾನಿ, ಆರಗ ಜ್ಞಾನೇಂದ್ರ ಅವರ ಶಿಷ್ಯರಾಗಿರುವ ಅಗಸಾಡಿ ಶಾಮಣ್ಣ ಬಿಜೆಪಿ ತಂತ್ರಗಾರಿಕೆಗೆ ತಿರುಮಂತ್ರ ರೂಪಿಸಿ ನಾಲ್ವರು ಸದಸ್ಯರು ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಗುಡ್ಡೇಕೊಪ್ಪದಲ್ಲಿ ಹಲವು ವರ್ಷಗಳಿಂದ ಹಿಡಿತ ಸಾಧಿಸಿದ್ದ ಜ್ಞಾನೇಂದ್ರರ ಅಸ್ಥಿತ್ವ ಅಲುಗಾಡುವಂತೆ ಮಾಡಿದ್ದಾರೆ.
ಜಯಪೂಜಾರಿ ಹಿರೇಸರ (ಉಪಾಧ್ಯಕ್ಷರು), ರಾಘವೇಂದ್ರ ಪವರ್, ಸೂರ್ಯಕಲ ರವಿ, ಉಮಚಂದ್ರನಯ್ಕ್, ಗುರುಮೂರ್ತಿ ಗೌಡ್ರು, ಮಮತಾ ಗೋವಿಂದಪ್ಪ ಆವಿಶ್ವಾಸ ಸಭೆಗೆ ಹಾಜರಾಗಿ ಮತ ಚಲಾಯಿಸಿದರು. ಅಧ್ಯಕ್ಷ ಅಗಸಾಡಿ ಶಾಮಪ್ಪ, ಸಂದೇಶ ಶೆಟ್ಟಿ ಜಯಪುರ, ನಾಗರತ್ನ ಯಲ್ಲಪ್ಪ, ಜಯಂತಿ ರಮೇಶ್ ಸಭೆಗೆ ಗೈರಾಗಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು