11:58 PM Saturday11 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಸೌರ ಘಟಕದ ಬೆಲೆ ಪ್ರತಿ ಯೂನಿಟ್‌ಗೆ ಕೇವಲ ₹2.15ಕ್ಕೆ ಇಳಿಕೆ: ಕೇಂದ್ರ ಇಂಧನ ಸಚಿವ ಪ್ರಲ್ಹಾದ್ ಜೋಶಿ

09/10/2025, 23:01

* ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

* ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ದೇಶದಲ್ಲಿ ಸೌರಶಕ್ತಿ ಕ್ರಾಂತಿ

* ಗುಜರಾತ್‌ಗೆ ನವೀಕರಿಸಬಹುದಾದ ಇಂಧನದಿಂದಲೇ ಶೇ.60ರಷ್ಟು ವಿದ್ಯುತ್‌

* 2014ರಲ್ಲಿ 2.8GW ಇದ್ದ ಭಾರತದ ಸೌರಶಕ್ತಿ ಸಾಮರ್ಥ್ಯ 125 GWಗೆ ಏರಿಕೆ

ಅಹಮದಾಬಾದ್(reporterkarnataka.com): ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ ಪರಿಶ್ರಮದ ಫಲವಾಗಿ ಭಾರತ ಮಾತ್ರವಲ್ಲ ಜಗತ್ತಿನಲ್ಲೇ ಇಂದು ಸೌರ ಕ್ರಾಂತಿಯಾಗಿದೆ. ಸೌರ ಘಟಕದ ಬೆಲೆ ಪ್ರತಿ ಯೂನಿಟ್‌ಗೆ ಕೇವಲ ₹2.15ಕ್ಕೆ ಇಳಿದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಗುಜರಾತ್‌ನ ಮೆಹ್ಸಾನಾದ ಗಣಪತ್ ವಿಶ್ವವಿದ್ಯಾಲಯದಲ್ಲಿ ‘ವೈಬ್ರಂಟ್ ಗುಜರಾತ್’ ಪ್ರಾದೇಶಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು 25 ವರ್ಷಗಳ ಹಿಂದೆಯೇ ಸೌರಶಕ್ತಿಗೆ ನಾಂದಿ ಹಾಡಿದರು. ದೇಶದೆಲ್ಲೆಡೆ ಸೌರ ಶಕ್ತಿ ಉತ್ಪಾದನೆಗೆ ಉತ್ತೇಜನ ನೀಡಿ ಜಗತ್ತಿಗೇ ಬೆಳಕು ತೋರಿದರು ಎಂದು ನುಡಿದರು.


25 ವರ್ಷಗಳ ಹಿಂದೆ ಸೌರ ಘಟಕದ ಪ್ರತಿ ಯೂನಿಟ್‌ಗೆ ₹18 ರಿಂದ ₹20 ರಷ್ಟಿತ್ತು. ಪ್ರಧಾನಿ ಅವರ ಆಶಯದಂತೆ ಅದೀಗ ಕೇವಲ ₹2.15ಕ್ಕೆ ಇಳಿದಿದೆ. ಸದ್ಯ ಮಧ್ಯಪ್ರದೇಶದಲ್ಲಿ ಇಷ್ಟು ಕನಿಷ್ಠ ಬೆಲೆಯಿದೆ. ಬ್ಯಾಟರಿ ಸಂಗ್ರಹಣೆಯೊಂದಿಗೆ ಸಹ ಪ್ರತಿ ಯೂನಿಟ್‌ಗೆ ₹2.70ನಷ್ಟು ಕಡಿಮೆ ಬೆಲೆ ದಾಖಲಾಗಿದೆ ಎಂದು ಸಚಿವ ಜೋಶಿ ವಿವರಿಸಿದರು.
ಸೌರ ಶಕ್ತಿ ಉತ್ಪಾದನೆಯನ್ನು ಆರಂಭದಲ್ಲಿ ಅನೇಕರು ಅನುಮಾನಿಸಿದರು. ಆದರಿಂದು ಪ್ರಧಾನಿ ಮೋದಿ ಅವರ ದೂರದೃಷ್ಟಿಯಿಂದಾಗಿ ಭಾರತವನ್ನು ಸೌರಕ್ರಾಂತಿಯಲ್ಲಿ ಜಾಗತಿಕ ಮುಂಚೂಣಿಯಲ್ಲಿರಿಸಿದೆ ಎಂದು ಜೋಶಿ ಸಂತಸ ಹಂಚಿಕೊಂಡರು.
ಗುಜರಾತ್ ಈಗ ತನ್ನ ಸ್ಥಾಪಿತ ಸಾಮರ್ಥ್ಯದ ಶೇ.60ರಷ್ಟು ವಿದ್ಯುತ್‌ ಅನ್ನು ನವೀಕರಿಸಬಹುದಾದ ಇಂಧನದಿಂದ ಪಡೆಯುತ್ತಿದೆ. 2014ರಲ್ಲಿ ದೇಶದ ಒಟ್ಟು ಸೌರ ವಿದ್ಯುತ್ ಉತ್ಪಾದನೆ ಕೇವಲ 2.8 ಗಿಗಾವ್ಯಾಟ್ ಆಗಿತ್ತು. ಈಗ ಕೇವಲ ಸೌರಶಕ್ತಿಯಿಂದಲೇ 125 GW ವಿದ್ಯುತ್ ಪಡೆಯುತ್ತಿದೆ ಎಂದು ಸೌರಕ್ರಾಂತಿ ಬಗ್ಗೆ ತಿಳಿಯಪಡಿಸಿದರು.
ಮೆಹ್ಸಾನಾವನ್ನು ಶ್ಲಾಘಿಸಿದ ಜೋಶಿ, “ಮೆಹ್ಸಾನಾ ಅತ್ಯಂತ ಕ್ರಿಯಾತ್ಮಕ ಸ್ಥಳವಾಗಿದ್ದು, ಇದನ್ನು ಶುದ್ಧ ಶಕ್ತಿಯ ದಾರಿದೀಪವೆಂದು ಪರಿಗಣಿಸಲಾಗಿದೆ” ಎಂದು ಹೇಳಿದರು. ಜಿಲ್ಲೆಯ ಮೊಧೇರಾ ಬಹುಶಃ 24×7 ಶುದ್ಧ ವಿದ್ಯುತ್ ಉತ್ಪಾದಿಸುವ ವಿಶ್ವದ ಏಕೈಕ ಗ್ರಾಮವಾಗಿದೆ, ಇದು ಬಹಳ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಎತ್ತಿ ತೋರಿಸಿದರು.

*ಭೂಮಿ ಉಷ್ಣತೆ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚು:* ನಾವು ಹೆಚ್ಚಿನ ಬೇಡಿಕೆಗಳಿಂದಾಗಿ ಪ್ರಕೃತಿ ಮತ್ತು ಜೀವವೈವಿಧ್ಯತೆಯನ್ನು ನಾಶಪಡಿಸುತ್ತಿದ್ದೇವೆ. ಕೈಗಾರಿಕಾ ಕ್ರಾಂತಿಯ ನಂತರ ಭೂಮಿಯ ಉಷ್ಣತೆ 1.1 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಇದು ಹಿಮಕರಡಿ ಮತ್ತು ಧ್ರುವ ನರಿಯಂತಹ ಜೀವಿಗಳ ಅಳಿವಿಗೆ ಕಾರಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

*ಭೂಮಿ-ಜೀವ ವೈವಿಧ್ಯತೆ ರಕ್ಷಣೆ ಅಗತ್ಯ:* ತಾಪಮಾನ 1.5 ಡಿಗ್ರಿ ಏರಿಕೆಯಾಗಲು ಗರಿಷ್ಠ 7 ವರ್ಷಗಳಿವೆ. ನಾವಿದನ್ನು ದಾಟಿದರೆ ಪರಿಸ್ಥಿತಿ ತುಂಬಾ ಗಂಭೀರವಾಗುತ್ತದೆ ಎಂದು ಎಚ್ಚರಿಸಿದ ಸಚಿವರು, ಇಂದು ಭೂಮಿಯನ್ನು ರಕ್ಷಿಸಬೇಕಾದ ಸಮಯ ಎದುರಾಗಿದ್ದು, ಜೀವವೈವಿಧ್ಯತೆಯನ್ನು ರಕ್ಷಿಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು