3:42 PM Saturday23 - August 2025
ಬ್ರೇಕಿಂಗ್ ನ್ಯೂಸ್
ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು…

ಇತ್ತೀಚಿನ ಸುದ್ದಿ

ಮಂಗಳೂರು ನಗರದಲ್ಲಿ ಬಾಯಿ ತೆರೆದು ಬಲಿಗಾಗಿ ಕಾಯುತ್ತಿದೆ ಫುಟ್ ಪಾತ್ ಗಳು!: ಕಾರ್ಪೊರೇಟರ್ ಗಳು ಏನು ಮಾಡುತ್ತಿದ್ದಾರೆ ?

22/04/2021, 05:04

ಮಂಗಳೂರು(reporterkarnataka news): ಚೆನ್ನಾಗಿರುವ ರಸ್ತೆಯನ್ನು ಅಗೆದು ಮತ್ತೆ ಕಾಂಕ್ರೀಟ್ ಹಾಕುತ್ತಾರೆ, ಕೆಡಹಿದ ಕ್ಲಾಕ್ ಟವರ್ ನ ಜಾಗದಲ್ಲಿ ಮೊಡರ್ನ್ ಕ್ಲಾಕ್ ಟವರ್ ಕಟ್ಟಿಸುತ್ತಾರೆ.

ಆದರೆ ಜನ ಸಾಮಾನ್ಯರು ಓಡಾಡುವ ಫುಟ್ ಪಾತ್ ಮಾತ್ರ ಅಲ್ಲಲ್ಲಿ ಬಾಯಿ ಬಿಟ್ಟು ಬಲಿಗಾಗಿ ಕಾಯುತ್ತಿದೆ.

ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ಮಂಗಳೂರಿನಲ್ಲಿ ಫುಟ್ ಪಾತ್ ಅವ್ಯವಸ್ಥೆ ಹೇಳಿ ತೀರದು. ಪ್ರಭಾವಿ ವ್ಯಕ್ತಿಗಳ ಮನೆ, ಕಚೇರಿ ಇರುವ ಪ್ರದೇಶದಲ್ಲಿ 5 ವರ್ಷಕ್ಕೊಮ್ಮೆ ಬೇಕಾದರೂ ಫುಟ್ ಪಾತ್ ಚಪ್ಪಡಿ ಕಲ್ಲು ಬದಲಾಯಿಸಲಾಗುತ್ತದೆ. ಉಳಿದ ಕಡೆಗಳಲ್ಲಿ 20- 30 ವರ್ಷಗಳಿಂದ ಶಿಥಿಲಾವಸ್ಥೆಯಲ್ಲೇ ಫುಟ್ ಪಾತ್ ಗಳಿವೆ. ಮಂಗಳೂರಿನ ಬಡ ಹಾಗೂ ಕೆಳ ಮಧ್ಯಮ ವರ್ಗದವರು ನಗರದಲ್ಲಿ ನಡೆದಾಡಲು ಫುಟ್ ಪಾತ್ ಬಳಸುತ್ತಾರೆ. ಆದರೆ ಇಲ್ಲಿನ ಶ್ರೀಮಂತರು ತಮ್ಮ ಕಾರು ಪಾರ್ಕ್ ಮಾಡಲು ಫುಟ್ ಪಾತ್ ಉಪಯೋಗಿಸುತ್ತಾರೆ. ಮಂಗಳೂರು ಮಹಾನಗರಪಾಲಿಕೆ ಆಡಳಿತಕ್ಕೆ ತನ್ನ 60 ವಾರ್ಡ್ ಗಳ ಪೈಕಿ ಕನಿಷ್ಠ 30 ವಾರ್ಡ್‌ಗಳಲ್ಲಿ ಸುಸಜ್ಜಿತ ಫುಟ್ ಪಾತ್ ನಿರ್ಮಿಸಲು ಇದುವರೆಗೆ ಸಾಧ್ಯವಾಗಲಿಲ್ಲ.

ಪ್ರಸ್ತುತ ನಾವು ಈ ವರದಿಯಲ್ಲಿ ಹೇಳಲು ಹೊರಟಿರುವುದು ಲೇಡಿಹಿಲ್ ಪ್ರದೇಶದ ಫುಟ್ ಪಾತ್ ಅವ್ಯವಸ್ಥೆ. ಉರ್ವ ಚಿಲಿಂಬಿಯ ರಿಲಯನ್ಸ್ ಸೂಪರ್ ಮಾರ್ಕೆಟ್ ಬಳಿ ಫುಟ್ ಪಾತ್ ಗಳು ಬಾಯಿಬಿಟ್ಟಿವೆ. ಕಳೆದ ಎರಡು ವರ್ಷಗಳಿಂದ ನಾಗರಿಕರು ದೂರುಗಳನ್ನು ನೀಡಿದರೂ ಜನಪ್ರತಿನಿಧಿಗಳಾಗಲಿ, ಮಂಗಳೂರು ಮಹಾನಗರಪಾಲಿಕೆ ಅಧಿಕಾರಿ ಕ್ಯಾರೇ ಎನ್ನುತ್ತಿಲ್ಲ. ಹಾಗೆ ಲೇಡಿಹಿಲ್ ಶಾಲೆಯ ಪಕ್ಕದ ರಸ್ತೆಯ ಫುಟ್ ಪಾತ್ ಪರಿಸ್ಥಿತಿಯೂ ತೀರಾ ಕೆಟ್ಟು ಹೋಗಿದೆ. ಅದೇ ರೀತಿ ಲಾಲ್ ಭಾಗ್ ಭಾರತ್ ಮಹಲ್ ಪಕ್ಕ ಫುಟ್ ಪಾತ್ ಅಪಾಯಕಾರಿ ಸ್ಥಿತಿಯಲ್ಲಿ ಬಾಯಿ ತೆರದುಕೊಂಡಿದೆ. ವಿಶೇಷವೆಂದರೆ ಈ ಪ್ರದೇಶಗಳು ಪಾಲಿಕೆ ಕಚೇರಿಯ ಸನಿಹದಲ್ಲಿಯೇ ಇದೆ. ಇನ್ನು ಸ್ಟೇಟ್ ಬ್ಯಾಂಕ್ ಸಿಟಿ ಬಸ್ ಗಳು ನಿಲ್ಲುವ ಜಾಗದಲ್ಲಿ ಜನರು ಫುಟ್ ಪಾತ್ ಮೇಲೆ ತಂತಿಯಲ್ಲಿ ಸವಾರಿ ಮಾಡಿದಂತೆ ಬಹಳ ಎಚ್ಚರಿಕೆಯಿಂದ ನಡೆದಾಡಬೇಕಾಗುತ್ತದೆ. ಚರಂಡಿಯ ಎರಡು ಬದಿಗೆ ಕಟ್ಟಿದ ಕಲ್ಲು ಕುಸಿದು ಬಿದ್ದು ಮೇಲಿನ ಹಾಸು ಅಲುಗಾಡುತ್ತಿದೆ. ಕುದ್ರೋಳಿ, ಅಳಕೆ, ಬಂದರು, ಪಾಂಡೇಶ್ವರ, ಪಳ್ನೀರ್, ಹಂಪನಕಟ್ಟೆ ಪ್ರದೇಶ, ಜಪ್ಪು, ಮಾರ್ಗನ್ಸ್ ಗೇಟ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಫುಟ್ ಪಾತ್ ಬಾಯಿ ತೆರೆದಿರುವುದನ್ನು ಕಾಣಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು