6:58 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

Mangaluru | ಸಂತ ವಿನ್ಸೆಂಟ್ ಪಾವ್ಲ್ ಪ್ರಾದೇಶಿಕ ಸಿಟಿ ವಲಯದ ಸಾಮಾನ್ಯ ಸಭೆ: ಆಧ್ಯಾತ್ಮಿಕ ಸಮಾಲೋಚನೆ

15/09/2025, 19:16

ಮಂಗಳೂರು(reporter Karnataka.com): ಸಮಾಜ ಸೇವಾ ಸಂಘಟನೆ ಸಂತ ವಿನ್ಸೆಂಟ್ ಪಾವ್ಲ್ ಸಭಾ ಇದರ ಮಂಗಳೂರು ಪ್ರಾದೇಶಿಕ ಸಿಟಿ ವಲಯದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಆಧ್ಯಾತ್ಮಿಕ ಸಮಾಲೋಚನೆಯು ನಗರದ ದೇರೆಬೈಲ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಸುಖ ಜೀವನವನ್ನು ದಾನ ಹಾಗೂ ಧರ್ಮದ ಮೂಲಕ ನಡೆಸ ಬಹುದು ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಈ ಸಭೆಯಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಜೋಸೆಫ್ ಮಾರ್ಟಿಸ್ ಅವರು ಮಾತನಾಡಿ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಸದಸ್ಯರು ಯಾವುದೇ ಪ್ರಚಾರವಿಲ್ಲದೆ ಗೌಪ್ಯವಾಗಿ ದಾನ, ಧರ್ಮ, ಬಡವರ ಸೇವೆಯನ್ನು ಮಾಡುತ್ತಿದ್ದು, ಈ ಸೇವೆ ದೇವರ ಸೇವೆಗೆ ಸಮಾನ. ಬಡತನವು ಖಂಡಿತಾ ಶಾಪವಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ಧೃತಿಗೆಡದೆ ಪ್ರಯತ್ನವನ್ನು ಮುಂದುವರಿಸಿದರೆ ಯಶಸ್ಸು ಸಾಧಿಸ ಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಿಟಿ ವಲಯದ ಅಧ್ಯಕ್ಷ ರಿಚಾರ್ಡ್ ಪಿಂಟೊ, ಕಾರ್ಯದರ್ಶಿ ಐರಿನ್ ಪಿಂಟೊ, ಖಜಾಂಚಿ ಯೂಜಿನ್ ಲೋಬೊ, ದೇರೆಬೈಲ್ ಘಟಕದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಪ್ರಾದೇಶಿಕ ಸಿಟಿ ವಲಯದ ಉಪಾಧ್ಯಕ್ಷ ಜೋಕಿಂ ಮತ್ತು ಇತರರು ಉಪಸ್ಥಿತರಿದ್ದರು.
ಆಶಾ ಡಿ ಸಿಲ್ವಾ ನೇತೃತ್ವದ ತಂಡದಿಂದ ಪ್ರಾರ್ಥನೆ ನಡೆಯಿತು. ಕಾರ್ಯದರ್ಶಿ ಐರಿನ್ ಪಿಂಟೊ ವರದಿ ವಾಚಿಸಿದರು.
ಪ್ರಾದೇಶಿಕ ಸಿಟಿ ವಲಯವು ದೇರೆಬೈಲ್, ಕುಲಶೇಖರ, ಬೋಂದೆಲ್, ಪಾಲ್ದನೆ, ವಾಮಂಜೂರು, ಕೆಲರಾಯ್, ಬಜಾಲ್, ನೀರುಮಾರ್ಗ, ಆಂಜೆಲೋರ್, ಬಜ್ಜೋಡಿ, ಶಕ್ತಿನಗರ, ಪೆರ್ಮಾಯಿ ಚರ್ಚ್ ಗಳನ್ನು ಒಳಗೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು