8:30 PM Saturday22 - August 2026
ಬ್ರೇಕಿಂಗ್ ನ್ಯೂಸ್
ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್…

ಇತ್ತೀಚಿನ ಸುದ್ದಿ

ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು ಹಿಂಡು ಕುಟುಂಬ!

10/09/2025, 13:09

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ತಲೆ ಮೇಲೆ ಒಂದು ಚೀಲ ಬೆನ್ನಿನಲ್ಲಿ ಒಂದು ಬಟ್ಟೆ ತುಂಬಿದ ಬ್ಯಾಗ್ ನಿಂತ ಗಂಡಸರು, ಕಂಕುಳದಲ್ಲಿ ಒಂದು ಮಗು ಅಕ್ಕ ಪಕ್ಕ ಮತ್ತೇರಡು ಮಕ್ಕಳು. ಹಾಸನ ಬಸ್ ಅಂತೂ ಫುಲ್. ಈ ದೃಶ್ಯಗಳು ಕಂಡು ಬಂದದ್ದು ಕುಶಾಲನಗರ ಬಸ್ ನಿಲ್ದಾಣದಲ್ಲಿ.
ಸರಿ ಸುಮಾರು 10 ಗಂಟೆಗೆ ಒಂದರ ಹಿಂದೆ ಒಂದರಂತೆ, ಕೋಣನೂರು, ಅರಕಲಗೋಡು, ಸಕಲೇಶಪುರ, ಚಿಕ್ಕಮಗಳೂರು ಭಾಗಕ್ಕೆ ಕುಶಾಲನಗದಿಂದ ಬಸ್ ಗಳು ಹೆಚ್ಚಾಗಿ ಸಂಚರಿಸುತ್ತದೆ.


ಸಾಮಾನ್ಯವಾಗಿ ಈ ಸಮಯದಲ್ಲಿ ಬೆರಳೆಣಿಕೆಯ ಪ್ರಯಾಣಿಕರು ಹಾಸನ ಬಸ್ ಹತ್ತಿದರೆ, ಬುಧವಾರ ಬಸ್ ನಿರ್ವಾಹಕರು ಸ್ಥಳೀಯರಿಗಿಂತ ಅಸ್ಸಾಂ ಕಾರ್ಮಿಕರನ್ನು ತುಂಬಿಸುವಲ್ಲಿ ಬ್ಯುಸಿ ಆಗಿದ್ದ ದೃಶ್ಯಗಳು ಕಂಡು ಬಂತು. ಕೊಡಗಿನ ಯಾವುದೇ ಖಾಸಗಿ, ಸಾರಿಗೆ ಬಸ್ ಗಳಾಗಲಿ ಕನಿಷ್ಠ ಹತ್ತು ಮಂದಿ ಅಂತೂ ಅಸ್ಸಾಂ ಕಾರ್ಮಿಕರು ಇದ್ದೆ ಇರುತ್ತಾರೆ. ಅವರ ಭಾಷೆ, ಚೀರಾಟ, ವಿಮಲ್ ಪಾನ್ ಮಸಾಲೆ ಘಾಟು ಅಸ್ಸಾಂ, ಪಶ್ಚಿಮ ಬಂಗಾಳ, ಒರಿಸ್ಸಾ ರಾಜ್ಯದಲ್ಲಿ ಇದೆವೋ ಅನ್ನಿಸುತ್ತದೆ. ಇವರೆಲ್ಲ ನಿಜಕ್ಕೂ ಅಸ್ಸಾಮಿಗಳ ಅಥವಾ ನೆರೆಯ ರಾಷ್ಟ್ರ ಬಾಂಗ್ಲಾದೇಶದವರ ಎಂದು ಅನುಮಾನಿಸುವುದು ಕಷ್ಟ ಕಾರಣ ಇವರ ಬಳಿ ಸ್ಥಳೀಯ ವಿಳಾಸದ ಆಧಾರ್ ಕಾರ್ಡ್ ಗಳಿದೆ. ಒಟ್ಟಿನಲ್ಲಿ, ಕೆಲ ಗಂಟೆಗಳ ಕಾಲ ಸ್ಥಳೀಯರಂತೂ ಬಸ್ ಗಳಲ್ಲಿ ಸೀಟು ಸಿಗದೆ ಹೈರಾಣ ಆಗಿದಂತೂ ಸತ್ಯ.

ಇತ್ತೀಚಿನ ಸುದ್ದಿ

ಜಾಹೀರಾತು