4:28 AM Wednesday5 - November 2025
ಬ್ರೇಕಿಂಗ್ ನ್ಯೂಸ್
Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭ

30/07/2025, 18:06

ಧರ್ಮಸ್ಥಳ(reporterkarnataka.com): ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ದೂರುದಾನ ಸಮ್ಮುಖದಲ್ಲಿ ಸ್ಪಾಟ್ ನಂಬರ್ 2 ಮತ್ತು 3ರ ಅಗೆತ ನಡೆದಿದ್ದು, ಯಾವುದೇ ಅಸ್ತಿಪಂಜರ ಲಭ್ಯವಾಗಿಲ್ಲದ ಹಿನ್ನೆಲೆಯಲ್ಲಿ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭಗೊಂಡಿದೆ.
ಈಗಾಗಲೇ ಉತ್ಖನನ ನಡೆಸಿದ ಸ್ಪಾಟ್ ನಂಬರ್ 1,2 ಮತ್ತು 3ಕ್ಕಿಂತ ಈ ಪ್ರದೇಶ ಭೌಗೋಳಿಕ ಸ್ವಲ್ಪ ಭಿನ್ನವಾಗಿದೆ. ಪುತ್ತೂರು ಅಸಿಸ್ಟೆಂಟ್ ಕಮಿಷನರ್ ಸ್ಟೆಲ್ಲಾ ವರ್ಗೀಸ್ ಅವರ ಜತೆ ಎಸ್ಐಟಿ ತಂಡ ಸ್ಪಾಟ್ ನಂಬರ್ 4ಕ್ಕೆ ತೆರಳಿದೆ. ಕಡಿದಾದ ದಾರಿಯಲ್ಲಿ ಈ ಸ್ಪಾಟ್ ಗೆ ಎಸ್ ಐಟಿ ಹಾಗೂ ಅಧಿಕಾರಿಗಳ ತಂಡ ತೆರಳಬೇಕಾಗಿದೆ.
ಇಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ.
ಶವ ಹೂತ್ತಿಟ್ಟ ಸ್ಥಳದ ಉತ್ಖನನ ಕಾರ್ಯ ನಿನ್ನೆ(ಮಂಗಳವಾರ) ಆರಂಭಿಸಲಾಗಿತ್ರು. ನಿನ್ನೆ ಸ್ಪಾಟ್ ನಂಬರ್ 1ರಲ್ಲಿ ಅಗೆತ ನಡೆಸಲಾಗಿತ್ರು. ಆದರೆ, ಎಸ್ ಐಟಿ ತಂಡ ಯಾವುದೇ ಅಸ್ತಿಪಂಜರ ಸಿಗದ ಬರಿಗೈಯಲ್ಲಿ ವಾಪಸಾಗಿತ್ತು. ಎರಡನೇ ದಿನವಾದ ಇಂದು(ಬುಧವಾರ) ಸ್ಪಾಟ್ 2, 3ರಲ್ಲಿ ಮಧ್ಯಾಹ್ನ 3 ಗಂಟೆ ತನಕ ಉತ್ಖನನ ನಡೆಸಿತ್ತು. ಆದರೆ ಅಸ್ತಿಪಂಜರವಿರುವ ಯಾವುದೇ ಕುರುಹು ಲಭ್ಯವಾಗಲಿಲ್ಲ. ಆದರೆ, ಸ್ಪಾಟ್ ನಂಬರ್ 1ರಲ್ಲಿ ಡೆಬಿಟ್ ಮತ್ತು ಪಾನ್ ಕಾರ್ಡ್ ಲಭ್ಯವಾಗಿರುವ ಮಾಹಿತಿ ಇದೆ. ಇದೀಗ ಸ್ಪಾಟ್ ನಂಬರ್ 4ರ ಉತ್ಖನನ ಪ್ರಕ್ರಿಯೆ ಆರಂಭವಾಗಿದೆ. ಇಂದು ಸ್ಪಾಟ್ ನಂಬರ್ 2, 3 ಮತ್ತು 4ರ ಉತ್ಖನನ ನಡೆಸಲು ಈ ಮುನ್ನವೇ ನಿರ್ಧರಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು