10:49 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

Raichuru | ಮಸ್ಕಿ ಶ್ರೀ ಚಿಕ್ಕ ಅಂತರಗಂಗೆ ದುರ್ಗಾದೇವಿ ಜಾತ್ರೆ: ಹರಿದು ಬಂದ ಭಕ್ತ ಸಾಗರ

28/05/2025, 21:46

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಮಸ್ಕಿ ತಾಲೂಕಿನ ಅಂತರಗಂಗೆ ಗ್ರಾಮದ ಶ್ರೀ ಚಿಕ್ಕ ಅಂತರಗಂಗೆಯಲ್ಲಿ ನೆಲೆಸಿರುವ ಬಳ್ಳಾರಿ ದುರ್ಗಮ್ಮ ಎಂದು ಪ್ರಸಿದ್ಧಿಯಾಗಿದ್ದ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ಮಂಗಳವಾರ ನಡೆಯಿತು.


ನಡೆದಾಡುವ ದೇವರು ಬಳ್ಳಾರಿ ದುರ್ಗಮ್ಮ ಹೆಸರುವಾಸಿಯಾಗಿ ತನ್ನದೇ ಆದ ಒಂದು ಇತಿಹಾಸವಿದೆ. ಅಂತಹ ಶ್ರೀ ದುರ್ಗಾದೇವಿ ಜಾತ್ರೆ ಐದು ವರ್ಷಕ್ಕೊಮ್ಮೆ ನಡೆಯುತ್ತದೆ.
ಏಳು ಊರಿನ ಗೌಡರು ಸೇರಿ ಈ ಜಾತ್ರೆ ಅದ್ದೂರಿಯಿಂದ ಸಡಗರದಿಂದ ಮಾಡುತ್ತಾರೆ. ಭಕ್ತರು ತಮ್ಮ ಹರಕೆಗಳನ್ನು ತೀರಿಸಿಕೊಳ್ಳಲು ದೇವರಿಗೆ ತಮ್ಮ ಮುಡುಪನ್ನು ಅರ್ಪಿಸುವ ದೃಶ್ಯ ಕಂಡು ಬಂತು. ಭಕ್ತಿಯಿಂದ ಬೇಡಿಕೊಳ್ಳುವ ದೃಶ್ಯ ಕಂಡ ಬಂತು.
ಭಜನೆ, ಮಂಗಳಾರತಿ, ರುದ್ರಾಭಿಷೇಕ ವಾದ್ಯಗಳೊಂದಿಗೆ ಭಕ್ತರು ಕಳಸ ಕನ್ನಡಿ ಡೊಳ್ಳು ಕುಣಿತದೊಂದಿಗೆ ಜೈಕಾರದೊಂದಿಗೆ ಹುಚ್ಚಯ್ಯ ಕಾರ್ಯಕ್ರಮ ಜರಗಿತು.
ಸುತ್ತಮುತ್ತಲಿನ ಗ್ರಾಮಗಳಾದ ಗೊಲ್ಲರಟ್ಟಿ, ಮ್ಯಾದಹಾಳು, ಅಂತರಗಂಗೆ, ನಾಗರಬೆಂಚಿ, ಮೆದಿಕಿನಾಳ, ಬೈಲಗುಡ್ಡ ಹಾಗೂ ತಾಂಡ ದೊಡ್ಡಿಗಳಿಂದ ಭಕ್ತರ ಆಗಮಿಸಿ ತಮ್ಮ ತನು ಮನ ಧನದಿಂದ ದುರ್ಗಾದೇವಿ ಪೂಜಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು