ಇತ್ತೀಚಿನ ಸುದ್ದಿ
Chikkamagaluru | ತರೀಕೆರೆಯ ಅಮೃತಾಪುರದಲ್ಲಿ ಚೀಟಿ ಹಣದ ವಿಚಾರವಾಗಿ ಗಲಾಟೆ: ಯುವಕನ ಬರ್ಬರ ಕೊಲೆ
21/04/2025, 16:47

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.
ಚೀಟಿ ಹಣದ ವಿಚಾರವಾಗಿ ಯುವಕನೊಬ್ಬನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ನಡೆದಿದೆ.
ಸಂಜು ನಾಯ್ಕ (26) ಮೃತ ದುರ್ದೈವಿ. ರುದ್ರೇಶ್ ನಾಯ್ಕ (26) ಕೊಲೆ ಆರೋಪಿಯಾಗಿದ್ದಾನೆ. ಕೊಲೆ ತಪ್ಪಿಸಲು ಬಂದ ಅವಿನಾಶ್ ಗೆ ಹಲ್ಲಿನಿಂದ ಗಂಭೀರ ಗಾಯವಾಗುವಂತೆ ಕಚ್ಚಿ ರುದ್ರೇಶ್ ಗಾಯಗೊಳಿಸಿದ್ದಾನೆ.
ಅಮೃತಾಪುರ ಸೇವಾಲಾಲ್ ಸಂಘದಲ್ಲಿನ ಚೀಟಿ ವ್ಯವಹಾರ ನಡೆಸಲಾಗುತ್ತಿತ್ತು.
ಚೀಟಿ ಸರಿಯಾಗಿ ಕಟ್ಟದೇ ಸಂಜು ನಾಯ್ಕ ಗಲಾಟೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಗ್ರಾಮಸ್ಥರು ಸಂಜು ನಾಯ್ಕ ನನ್ನು ನೀನು ಚೀಟಿಗೆ ಬೇಡ ವಾಪಸ್ ಕಳಿಸಿದ್ದರು. ಮನೆಗೆ ಬಂದ ಮೇಲೆ ಚೀಟಿ ಸದಸ್ಯರ ಜೊತೆ ಫೋನಿನಲ್ಲಿ ಜಗಳವಾಡಿದ್ದ. ನಂತರ ನೇರವಾಗಿ ಹೋಗಿ ಮತ್ತೆ ಜಗಳ ಮಾಡುವಾಗ ದೊಣ್ಣೆಯಲ್ಲಿ ಹೊಡೆದ ಚೀಟಿ ಸದಸ್ಯ ರುದ್ರೇಶ್ ಕೊಲೆ ಮಾಡಿದ್ದಾನೆ.
ತೀವ್ರ ರಕ್ತಸ್ರಾವದಿಂದ ಸಂಜು ನಾಯ್ಕ ಸ್ಥಳದಲ್ಲೇ ಸಾವು
ಕೊಲೆ ಆರೋಪಿ ರುದ್ರೇಶ್ ನಾಯ್ಕ ಪೊಲೀಸರ ವಶಕ್ಕೆಪಡೆದಿದ್ದಾರೆ.
ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.