5:51 PM Thursday19 - February 2026
ಬ್ರೇಕಿಂಗ್ ನ್ಯೂಸ್
Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ…

ಇತ್ತೀಚಿನ ಸುದ್ದಿ

Eduction & Employment | ದುಬಾರಿಯಾದ ಜೀವನ ವ್ಯವಸ್ಥೆಯಲ್ಲಿ ದೀರ್ಘಕಾಲಿಕ ಶಿಕ್ಷಣ ವ್ಯವಸ್ಥೆ ಬೇಕೇ?

21/04/2025, 15:43

ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ದಿನದಿಂದ ದಿನಕ್ಕೆ ಜೀವನದ ವೆಚ್ಚ ಏರುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಜನರ ಬದುಕು ತೀವ್ರ ಸಂಕಷ್ಟದತ್ತ ಸಾಗುತ್ತಿದೆ. ಆಹಾರ, ಬಾಡಿಗೆ, ಆರೋಗ್ಯ, ಸಾರಿಗೆ, ವಿದ್ಯುತ್, ನೀರು ಮತ್ತು ಇತರ ಮೂಲಭೂತ ಅಗತ್ಯ ಸೇವೆಗಳು ಈಗ ದುಬಾರಿಯ ಗಡಿಯಾಚಿವೆ. ಇಂತಹ ಸಂದರ್ಭದಲ್ಲಿ ಶಿಕ್ಷಣವೂ ವ್ಯಾಪಾರೀಕರಣದ ದಾರಿಯಲ್ಲೇ ಸಾಗುತ್ತಿರುವುದರಿಂದ, “ಈ ದುಡಿಮೆಯ ಯುಗದಲ್ಲಿ ದೀರ್ಘಕಾಲಿಕ ಶಿಕ್ಷಣವೇಕೆ?” ಎಂಬ ಪ್ರಶ್ನೆ ಬಹುಜನರ ಮನದಲ್ಲಿ ಮೂಡುತ್ತಿದೆ.
ಒಂದೆಡೆ ಪದವೀಧರರಾಗುವವರೆಗೆ ಭಾರಿ ವೆಚ್ಚದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು, ನಂತರ ಉದ್ಯೋಗವಿಲ್ಲದೇ ನಿರಾಶೆಯಲ್ಲಿ ಸಿಲುಕುವ ಘಟನೆಗಳು ಹೆಚ್ಚುತ್ತಿರುವಾಗ, ಇನ್ನೊಂದೆಡೆ “ಸಣ್ಣ ಕೋರ್ಸ್ ಮಾಡಿ ಕೆಲಸ ಪಡೆಯೋಣ” ಎಂಬ ತಾತ್ಕಾಲಿಕ ಧೋರಣೆ ಸಹ ಸಾಮಾನ್ಯವಾಗಿದೆ. ತಾತ್ಕಾಲಿಕ ನೆಮ್ಮದಿಗೆ ಇದು ಸಹಕಾರಿಯಾಗಬಹುದು, ಆದರೆ ದೀರ್ಘಾವಧಿಯಲ್ಲಿ ಸಮರ್ಥ ಪರಿಹಾರವಲ್ಲ ಎಂಬುದರಲ್ಲಿ ತಜ್ಞರೊಬ್ಬರಿಗೂ ಅನುಮಾನವಿಲ್ಲ.
ದೀರ್ಘಕಾಲಿಕ ಶಿಕ್ಷಣ ಎಂದರೆ ಕೇವಲ ಪದವಿ ಪೂರ್ಣಗೊಳಿಸುವುದಲ್ಲ; ಇದು ನಿರಂತರ ಕಲಿಕೆಯ ಪ್ರಕ್ರಿಯೆ. ಬದಲಾಗುತ್ತಿರುವ ತಂತ್ರಜ್ಞಾನ, ಆರ್ಥಿಕತೆ ಹಾಗೂ ಸಾಮಾಜಿಕ ಪರಿವರ್ತನೆಗಳಿಗೆ ತಕ್ಕಂತೆ ಹೊಸ ಜ್ಞಾನವನ್ನು ಪಡೆದುಕೊಳ್ಳುವ ತವಕ ವ್ಯಕ್ತಿತ್ವದ ವೃದ್ಧಿಗೆ ಹಾಗೂ ಉದ್ಯೋಗಸಾಧ್ಯತೆಗಳಿಗೆ ಆಧಾರಸ್ತಂಭವಾಗಿದೆ. ಶಿಕ್ಷಣವು ವ್ಯಕ್ತಿಗೆ ವಿಶ್ಲೇಷಣಾ ಶಕ್ತಿ, ಜವಾಬ್ದಾರಿಯ ಭಾವನೆ ಹಾಗೂ ಸಮಾಜದ ಬಗ್ಗೆ ಅರಿವು ನೀಡುವ ಪ್ರಮುಖ ಸಾಧನವಾಗಿದೆ.
ಈ ಭವಿಷ್ಯ ನಿರ್ಮಾಣದಲ್ಲಿ ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ತ್ರಿಕೋನದಂತೆ ಕಾರ್ಯನಿರ್ವಹಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ, ಆಧುನಿಕ ಪಠ್ಯಕ್ರಮ, ತಾಂತ್ರಿಕ ಹಾಗೂ ವಿದೇಶಿ ಭಾಷಾ ತರಬೇತಿ ನೀಡುವ ಕಾರ್ಯಕ್ಕೆ ಆದ್ಯತೆ ನೀಡಬೇಕು.
“ಶಿಕ್ಷಣವೆಂದರೆ ಖರ್ಚು ಅಲ್ಲ, ಭವಿಷ್ಯದ ಹೂಡಿಕೆ” ಎಂಬ ಮನೋಭಾವ ಬೆಳೆಸಿದರೆ ಮಾತ್ರ ನಾವು ಅರಿವಿನ ಸಮಾಜವೊಂದನ್ನು ರೂಪಿಸಬಲ್ಲೆವು. ದುಬಾರಿ ಜಗತ್ತಿನಲ್ಲಿ ದೀರ್ಘಕಾಲಿಕ ಶಿಕ್ಷಣವೇ ನಿಜವಾದ ಬೆಳಗಿನ ಬೆಳಕು.ದುಬಾರಿಯಾದ ದುನಿಯಾ ಜೀವನ ವ್ಯವಸ್ಥೆಯಲ್ಲಿ ದೀರ್ಘಕಾಲಿಕ ಶಿಕ್ಷಣ ವ್ಯವಸ್ಥೆ ಬೇಕೇ ?

ಇತ್ತೀಚಿನ ಸುದ್ದಿ

ಜಾಹೀರಾತು