10:55 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಎಂಆರ್‍ಪಿಎಲ್ ರಸ್ತೆಯ ರೈಲ್ವೆ ಮೇಲ್ಸೇತುವೆ ಕಾಂಕ್ರಿಟೀಕರಣ: ಶಾಸಕ ಡಾ. ಭರತ್ ಶೆಟ್ಟಿ ಉದ್ಘಾಟನೆ

04/02/2025, 00:04

ಸುರತ್ಕಲ್(reporterkarnataka.com): ಸುರತ್ಕಲ್ ಎಂಆರ್‍ಪಿಎಲ್ ರಸ್ತೆಯ ರೈಲ್ವೆ ಮೇಲ್ಸೇತುವೆಯನ್ನು ಮಂಗಳೂರು ಮಹಾನಗರ ಪಾಲಿಕೆ ನಿಧಿ 78 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಸು ಸುಸಜ್ಜಿತ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು ಸೋಮವಾರ ಶಾಸಕ ಡಾ.ಭರತ್ ಶೆಟ್ಟಿ ವೈ. ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ರೈಲ್ವೆ ಇಲಾಖೆಯ ಆಧೀನದಲ್ಲಿರುವ ಸೇತುವೆಯಾದರೂ ಜನರ ಹಿತದೃಷ್ಠಿಯಿಂದ ಎನ್‍ಒಸಿ ಪಡೆದು ಕಾಂಕ್ರಿಟ್ ಮಾಡಲಾಗಿದೆ.
ರೈಲ್ವೆ ಮೇಲ್ಸೇತುವೆಯನ್ನು ಚತುಷ್ಪಥ ಮಾಡುವ ಅಗತ್ಯವಿದ್ದು ಜಾಗ ಗುರುತಿಸಿ ಹೆಚ್ಚುವರಿ ಕಾಂಕ್ರಿಟ್ ಮಾಡಲಾಗಿದೆ. ಸಂಸದರಾದ ಬೃಜೇಶ್ ಚೌಟ ಹಾಗೂ ರೈಲ್ವೆ ಸಚಿವ ಸೋಮಣ್ಣ ಅವರಲ್ಲಿ ಪ್ರಸ್ತಾವನೆ ಇರಿಸಲಾಗಿದ್ದು ಭವಿಷ್ಯದಲ್ಲಿ ಅನುದಾನ ದೊರಕುವ ಭರವಸೆಯಿದೆ ಎಂದರು. ಹಂಪ್ಸ್ ಆಳವಡಿಸಿ ವೇಗ ನಿಯಂತ್ರಣಕ್ಕೆ ಒತ್ತು ನೀಡಲಾಗಿದೆ ಎಂದರು.
ರಸ್ತೆಯನ್ನು ಅವಧಿಗಿಂತ ಮುಂಚಿತವಾಗಿ ತ್ವರಿತವಾಗಿ ನಿರ್ಮಿಸಲು ಸಹಕರಿಸಿದ ಪಾಲಿಕೆ ಎಂಜಿನಿಯರ್ ಕಾರ್ತಿಕ್ ಶೆಟ್ಟಿ ,ಗುತ್ತಿಗೆದಾರರಾದ ಸುಧಾಕರ ಪೂಂಜಾ,ಮನಪಾ ಸದಸ್ಯರನ್ನು ಹಾಗೂ ಸುಮಾರು ಒಂದು ತಿಂಗಳ ಕಾಲ ಸಂಚಾರದಲ್ಲಿ ಸಹಕರಿಸಿದ ವಾಹನ ಚಾಲಕರು,ಸ್ಥಳೀಯರನ್ನು ಶಾಸಕರು ಶ್ಲಾಘಿಸಿದರು.
ಶಾಸಕರು ಹೊಸ ರಸ್ತೆಯಲ್ಲಿ ಆಟೋ ರಿಕ್ಷಾ ಸ್ವತಃ ಚಲಾಯಿಸಿ ಹೊಸ ರಸ್ತೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.


ಮೇಯರ್ ಮನೋಜ್ ಕುಮಾರ್ ಮಾತನಾಡಿ ಶಾಸಕರ ನೆರವಿನೊಂದಿಗೆ ಇಲ್ಲಿನ ಸೇತುವೆ ಕಾಂಕ್ರಿಟ್ ಮಾಡಲಾಗಿದ್ದು ಮೂಲಸೌಕರ್ಯಗಳಿಗೆ ಒತ್ತು ನೀಡಲಾಗಿದೆ ಎಂದರು. ಉಪಮೇಯರ್ ಬಾನುಮತಿ, ಸ್ಥಳೀಯ ಮನಪಾ ಸದಸ್ಯರಾದ ಸರಿತಶಶಿಧರ್, ವರುಣ್ ಚೌಟ, ಲೋಕೇಶ್ ಬೊಳ್ಳಾಜೆ,ನಯನ ಆರ್.ಕೋಟ್ಯಾನ್, ಶ್ವೇತ ಎ, ಶೋಭಾ ರಾಜೇಶ್,ವೇದಾವತಿ,ಲಕ್ಷ್ಮೀಶೇಖರ್ ದೇವಾಡಿಗ, ಮನಪಾದ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಸಹಕಾರ ಭಾರತಿ ಪ್ರಕೋಷ್ಟದ ಅಶೋಕ್ ಶೆಟ್ಟಿ ತಡಂಬೈಲ್, ಬಿಜೆಪಿ ಮಂಡಲ ಪ್ರಮುಖರು, ಪದಾಧಿಕಾರಿಗಳು, ರಿಕ್ಷಾಚಾಲಕ ಮಾಲಕ ,ಕಾರು ಚಾಲಕ ಮಾಲಕ ಸಂಘದ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು