3:24 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ‘ವೈಸಿಎಸ್ ಯುವ ದಬಾಜೊ’: ಕುಲಶೇಖರ ಘಟಕ ಪ್ರಥಮ, ಆಂಜೆಲೊರ್ ಘಟಕ ದ್ವಿತೀಯ

02/11/2024, 16:23

ಮಂಗಳೂರು(reporterkarnataka.com): ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ಯಂಗ್ ಕ್ಯಾಥೋಲಿಕ್‌ ಸ್ಟೂಡೆಂಟ್ಸ್ ಸಂಚಾಲನದ ವಿದ್ಯಾರ್ಥಿಗಳಿಗೆ ವೈಸಿಎಸ್ ಯುವ ದಬಾಜೊ 2024 ಎಂಬ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಆಂಜೆಲೊರ್ ಧರ್ಮಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗ್ಗೆ 9 ಗಂಟೆಗೆ ಸಿಟಿ ವಲಯದ ಪ್ರಧಾನ ಗುರುಗಳಾದ ವಂದನೀಯ ಜೇಮ್ಸ್ ಡಿಸೋಜ ಅವರು ನೆರವೇರಿಸಿದರು. ವೇದಿಕೆಯಲ್ಲಿ ಧರ್ಮ ಕ್ಷೇತ್ರದ ಧರ್ಮಗುರುಗಳಾದ ವಂದನೀಯ ಫೆಡ್ರಿಕ್ ಲೋಬೊ, ವಸತಿ ಯಾಜಕರಾದ ವಂದನೀಯ ಸ್ಟ್ತಾನಿ ಫೆರ್ನಾಂಡಿಸ್, ಸೇವಾದರ್ಶಿ ಬ್ರ. ಜೀವನ್ ಲೋಬೊ, ವೈಸಿಎಸ್ ವಲಯ ನಿರ್ದೇಶಕರಾದ ವಂದನೀಯ ವಿಜಯ ಮೊಂತೆರೊ, ಧರ್ಮಕ್ಷೇತ್ರದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಪೌಲ್ ರೊಡ್ರಿಗಸ್, ಕಾರ್ಯದರ್ಶಿ ಲೊಲಿನಾ ಡಿಸೋಜ, ವಲಯ ಸಚೇತಕಿ ರೆನಿಟಾ ಮಿನೇಜಸ್, ಘಟಕ ಸಚೇತಕ ರೋಶನ್ ಪತ್ರಾವೊ, ಧರ್ಮಪ್ರಾಂತ್ಯದ ವೈಸಿಎಸ್ ಅಧ್ಯಕ್ಷ ಡಿಯೋನ್ ಸಲ್ದಾನಾ, ವಲಯ ವೈಸಿಎಸ್ ಅಧ್ಯಕ್ಷ ಡ್ಯಾರೆಲ್ ಮೊಂತೇರೊ, ಘಟಕಾಧ್ಯಕ್ಷ ಲಿಯೋನ್ ಡಿಸೋಜ ಅವರು ಉಪಸ್ಥಿತರಿದ್ದರು.
ವೈಯಕ್ತಿಕ ಗಾಯನ, ಪಂಗಡ ಗಾಯನ ಹಾಗೂ ವೆರೈಟಿ ವಿಭಾಗಗಳಲ್ಲಿ 9 ಘಟಕಗಳ 130 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಜೆ 4.30ಕ್ಕೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈಸಿಎಸ್ ಕುಲಶೇಖರ ಘಟಕ ಪ್ರಥಮ ಸಮಗ್ರ ಪ್ರಶಸ್ತಿ, ಆಂಜೆಲೊರ್ ವೈಸಿಎಸ್ ಘಟಕ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆಯಿತು.

ಇತ್ತೀಚಿನ ಸುದ್ದಿ

ಜಾಹೀರಾತು