7:41 PM Thursday23 - April 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ… ಅಮಾನತು ಅಂತ್ಯವಲ್ಲ, ಅಬ್ದುಲ್ ಜಬ್ಬಾರ್‌ಗೆ ಇನ್ನೂ ಅವಕಾಶ ಇದೆ: ಸಚಿವ ದಿನೇಶ್ ಗುಂಡೂರಾವ್ ವರ್ಗಾವಣೆ ಆದೇಶವಿದ್ದರೂ ಪೊಲೀಸ್ ಕಮಿಷನರ್ ಕರ್ತವ್ಯದಿಂದ ಬಿಡುಗಡೆಗೊಳಿಸಿಲ್ಲ: ಮಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕ… ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ: ಮಾಲೀಕ ಸೇರಿ ಇಬ್ಬರ…

ಇತ್ತೀಚಿನ ಸುದ್ದಿ

ರಿಪೋರ್ಟರ್ ಕರ್ನಾಟಕ ವಾಯ್ಸ್ ಆಫ್ ಆರಾಧನಾ: ಸೆಪ್ಟೆಂಬರ್‌ ತಿಂಗಳ ವಿಜೇತರಾಗಿ ನಮಸ್ವಿ ಭಾಸ್ಕರ್ ಹಾಗೂ ನಿಹಾಲ್ ಆಯ್ಕೆ

16/10/2024, 14:50

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ತಿಂಗಳ ಟಾಪರ್ ಆಗಿ ನಮಸ್ವಿ ಭಾಸ್ಕರ್ ಹಾಗೂ ನಿಹಾಲ್ ಅವರು ಆಯ್ಕೆಯಾಗಿದ್ದಾರೆ.


ಪುತ್ತೂರು ನಿವಾಸಿಗಳಾದ ದೀಪಾ ಮತ್ತು ಭಾಸ್ಕರ್ ದಂಪತಿ ಪುತ್ರಿಯಾದ ನಮಸ್ವಿ ಭಾಸ್ಕರ್ ಅವರು ಅತ್ತಾವರದ ಸರೋಜಿನಿ ಮಧುಸೂಧನ್ ಕುಶೆ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತಿದ್ದಾಳೆ. ಹಾಡು, ನೃತ್ಯ, ಚಿತ್ರ ಬಿಡಿಸುದು, ನಿರೂಪಣೆ ಹಾಗೂ ಸ್ವಂತವಾಗಿ ಹಾಡು ಬರೆಯುದು, ಕಥೆ ಬರೆಯುದರಲ್ಲಿ ಆಸಕ್ತಿ ಹೊಂದಿರುವ ಬಹುಮುಖ ಪ್ರತಿಭೆ. ಈಕೆ ಹಾಡು, ನೃತ್ಯ, ಛದ್ಮವೇಷ ಮುಂತಾದುವುಗಳಲ್ಲಿ ಭಾಗವಹಿಸಿ ಅನೇಕ ಬಹುಮಾನ ಪಡೆದಿದ್ದಾಳೆ. ಇತೀಚೆಗೆ ನಡೆದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಭಕ್ತಿ ಗೀತೆ ಹಾಗೂ ಆಶು ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಂದಾಪುರ ಕಲಾವಿದ ಸಾವಿರ ಸಂಚಿಕೆಯ ಸಂಭ್ರಮದಲ್ಲಿ ಪ್ರತಿಭಾರತ್ನ ಎಂಬ ಬಿರುದು ಕೊಟ್ಟು ಗೌರವಿಸಿರುತ್ತಾರೆ. ಹಾಗೆಯೇ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪನಿಯವರು ಕಲಾರತ್ನ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ವಾಯ್ಸ್ ಆಫ್ ಆರಾಧನಾ ಸಂಸ್ಥೆಯಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನ ಮೆಚ್ಚುಗೆ ಗಳಿಸಿದ್ದಾಳೆ.
ಕುಮಾರ್ ನಿಹಾಲ್ ಮೂಡುಬಿದಿರೆಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈತ ಮೂಡಬಿದಿರೆಯ ಸುಕೇಶ್ ಮತ್ತು ಮಲ್ಲಿಕಾ ದಂಪತಿಯ ಪುತ್ರ. ಈತನ ಹವ್ಯಾಸಗಳು ಯಕ್ಷಗಾನ , ಕೀಬೋರ್ಡ್, ನಾಟಕ , ಸಂಗೀತ ಹಾಗೂ ಕವನ ಬರೆಯುವುದು. ಕೀಬೋರ್ಡ್ ಗುರುಗಳಾದ ಸಂಸ್ಕೃತ ವಿದ್ವಾನ್ ಗಜಾನನ ಮರಾಟೆ ಅವರಿಂದ ಕಲಿಯುತ್ತಿದ್ದಾನೆ. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ತುಳಸಿ ಪೇಜತೈ ಅವರಲ್ಲಿ ಅಭ್ಯಾಸಿಸುತ್ತಿದ್ದಾನೆ. ಸುಗಮ ಸಂಗೀತವನ್ನು ವಿದ್ವಾನ್ ಯಶವಂತ್ ಎಂ.ಜಿ. ಅವರಲ್ಲಿ, ಯಕ್ಷಗಾನವನ್ನು ರಕ್ಷಿತ್ ಪಡ್ರೆ ಅವರಲ್ಲಿ ಕಲಿಯುತ್ತಿದ್ದಾನೆ. ನಾಟಕ ಹಾಗೂ ಕವನ ಬರೆಯುವುದನ್ನು ಮೋಹನ್ ಹೋಸ್ಮರ್ ಅವರು ಕಲಿಸುತ್ತಿದ್ದಾರೆ. ಹಾಗೆಯೇ ಇವರು ಇನ್ಸ್ಟ್ರುಮೆಂಟ್ ನ್ನು ನುಡಿಸುವುದನ್ನು ಕಲಿಯುತ್ತಿದ್ದಾನೆ. ಈತನಿಗೆ ದಶಮ ಸಿದ್ಧಿ ಸಂಭ್ರಮದಲ್ಲಿ ಸಿದ್ಧಿ ಅವಾರ್ಡ್ ದೊರಕಿರುತ್ತದೆ.
*ದೊರೆತ ಪ್ರಶಸ್ತಿಗಳು:*
•ಮಂಗಳೂರು ವಿಶ್ವವಿದ್ಯಾನಿಲಯದ ಕನಕ ಸಂಶೋಧನಾ ಕೇಂದ್ರದ ವತಿಯಿಂದ ನಡೆಸಲ್ಪಟ್ಟ ಕನಕ ಕೀರ್ತನ ಗಂಗೋತ್ರಿ, ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದಲ್ಲಿ ಫ್ರೌಢಶಾಲೆಯ ವಿಭಾಗದಿಂದ 2023-24 ನೇ ಸಾಲಿನ ಕನಕ ಪುರಸ್ಕಾರ.
•ಮಹಿಳಾ ಮತ್ತು ಮಕ್ಕಳ ಇಲಾಖೆ ಕರ್ನಾಟಕ ಆಯೋಜಿಸಿದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
•ಬೀಚ್ ಉತ್ಸವ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ
•ಅವಿನ್ ಸ್ವರ ಸಂಗಮ ರಾಜ್ಯ ಮಟ್ಟದ ಗಾಯನ ಸ್ಪರ್ಧೆ ಚಿಕ್ಕಮಗಳೂರಿನಲ್ಲಿ ನಡೆಯಿತು ಇದರಲ್ಲಿ ಮೊದಲನೇ ಸಮಾಧಾನಕರ ಬಹುಮಾನ ಪಡೆದಿರುತ್ತಾನೆ.
•ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
•ಭಾರತ್ ಸ್ಕೌಟ್ ಮತ್ತು ಗೈಡ್ಸ್, ಕರ್ನಾಟಕ ನಡೆಸಿದ ಗೀತ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.
•ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಫ್ರೌಢ ವಿಭಾಗದ ಭಾವಗೀತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಹಾಗೂ ಅನೇಕ ಕಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾನೆ.
*ಸನ್ಮಾನ:*
* ದಕ್ಷಿಣ ಕನ್ನಡ ಜಿಲ್ಲಾ ಚಪ್ಟೆಗಾರ್ ಸಂಘದಲ್ಲಿ ಸನ್ಮಾನವನ್ನು ಮಾಡಲಾಗಿದೆ.
* ಶಾಲೆಯಲ್ಲಿ ಸನ್ಮಾನವನ್ನು ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು