8:11 AM Friday7 - November 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ‘ಬಿಸಿತುಪ್ಪ’ವಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Bangalore | ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ದಿಢೀರ್… ಸರ್ಕಾರಕ್ಕೆ ಕಾಳಜಿ ಇದ್ದಲ್ಲಿ ಬೆಳೆಗಾರರ ಆಗ್ರಹದಂತೆ ಕಬ್ಬಿಗೆ ದರ ನಿಗದಿಗೊಳಿಸಲಿ, ಪ್ರತಿ ಟನ್… ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ…

ಇತ್ತೀಚಿನ ಸುದ್ದಿ

ಡಿಜಿಟಲ್ ನಲ್ಲಿ ಹಣದ ಹೂಡಿಕೆ ಬಗ್ಗೆ ಎಚ್ಚರ ವಹಿಸಿ: ಡಿವೈಎಸ್’ಪಿ ಗಜಾನನ ವಾಮನ ಸುತಾರ

01/09/2024, 12:03

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಕುರುವಳ್ಳಿಯ ತುಂಗಾ ನದಿಯ ಸಮೀಪ ಓರ್ವ ಯುವಕ ನಾಪತ್ತೆಯಾಗಿದ್ದಾನೆ. ಆತನ ವಾಟ್ಸಾಪ್ ಸ್ಟೇಟಸ್ ಗಮನಿಸಿದಾಗ ಆನ್ಲೈನ್ ಹಣದ ವ್ಯವಹಾರದಿಂದ ಮನನೊಂದು ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ಟೇಟಸ್ ಹಾಕಿ ಕಾಣೆಯಾಗಿದ್ದಾನೆ. ಅವನನ್ನು ಹುಡುಕಲು ಪ್ರಯತ್ನ ಪಡುತ್ತಾ ಇದ್ದೇವೆ ಎಂದು ಡಿವೈಎಸ್’ಪಿ ಗಜಾನನ ವಾಮನ ಸುತಾರ ಹೇಳಿದರು.
ಶನಿವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ವಿಷಯದಲ್ಲಿ ಮೇಲ್ನೋಟಕ್ಕೆ ಆತ ಆನ್ಲೈನ್ ವ್ಯವಹಾರದಲ್ಲಿ ತುಂಬಾ ಹಣವನ್ನು ಕಳೆದುಕೊಂಡಿದ್ದ ಎಂದು ತಿಳಿದು ಬಂದಿದೆ. ಆತ ಎಲ್ಲಿ ಹಣವನ್ನು ವ್ಯವಹಾರ ಮಾಡಿದ್ದ? ಯಾವ ಕಾರಣಕ್ಕೆ ಮಾಡಿದ್ದ? ಅದರಲ್ಲಿ ಏನಾದರು ಮೋಸ ಆಗಿದ್ಯಾ? ಅಥವಾ ಬಲವಂತವಾಗಿ ಯಾರಾದರೂ ದುರಾಸೆ ತೋರಿಸಿ ಮಾಡಿದ್ದಾರಾ? ಎಂದು ತನಿಖೆ ನಡೆಸುತ್ತೇವೆ. ಹಾಗೇನಾದ್ರೂ ಮಾಡಿದ್ದರೆ ಕೂಡಲೇ ಅವರ ಮೇಲೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ತಿಳಿಸಿದರು.
*ಡಿಜಿಟಲ್ ಹೂಡಿಕೆ ಬಗ್ಗೆ ಎಚ್ಚರ ವಹಿಸಿ:* ತೀರ್ಥಹಳ್ಳಿಯಲ್ಲಿ ಇತ್ತೀಚಿಗೆ ಆನ್ಲೈನ್ ಟ್ರೇಡಿಂಗ್, ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿ, ಇಂತ ಹೂಡಿಕೆ ಮೇಲೆ ಜನ ತುಂಬಾ ಹಣವನ್ನು ಹಾಕುತ್ತಿದ್ದಾರೆ ಎಂಬ ಮಾಹಿತಿ ಬರುತ್ತಿದೆ. ಯಾವುದೇ ಡಿಜಿಟಲ್ ಹೂಡಿಕೆ ಗೆ ಅದರದ್ದೇ ಆದ ರಿಸ್ಕ್ ಪ್ರೊಫೈಲ್ ಇರುತ್ತದೆ. ಎಷ್ಟೋ ಜನರಿಗೆ ಹೂಡಿಕೆ ಬಗ್ಗೆ ಮಾಹಿತಿ ಇರುವುದಿಲ್ಲ. ಸ್ನೇಹಿತರು, ಅಥವಾ ಮೂರನೇ ವ್ಯಕ್ತಿ ಹೇಳಿರುವುದನ್ನು ಕೇಳಿ ಹಣ ಹಾಕುವ ಪ್ರಯತ್ನ ನಡೆಯುತ್ತಿದೆ. ಕಷ್ಟಪಟ್ಟು ದುಡಿದ ಹಣವನ್ನು ಎಲ್ಲೆಲ್ಲೋ ಹೂಡಿಕೆ ಮಾಡಿ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಬರುತ್ತಿದೆ. ಅಂತಹ ಚಕ್ರವ್ಯೂಹಕ್ಕೆ ಸಿಲುಕಬೇಡಿ ಎಂದರು.
ಡಿಜಿಟಲ್ ಹಣವನ್ನು ಹೂಡಿಕೆ ಮಾಡಿ ಎಂದು ಯಾರಾದರೂ ಬಲವಂತ ಮಾಡಿದರೆ ತಕ್ಷಣ ಪೊಲೀಸ್ ಗಮನಕ್ಕೆ ತನ್ನಿ, ನಾವು ಅಂತವರ ಮೇಲೆ ಶಿಸ್ತು ಕ್ರಮ ಕೈಗೊಂಡು ಪ್ರಕರಣ ದಾಖಲು ಮಾಡುತ್ತೇವೆ. ಹಣ ದುಪ್ಪಟ್ಟು ಆಗುತ್ತದೆ ಎಂಬ ದುರಾಸೆಗಾಗಿ ವಂಚನೆ ಮಾಡುವವರು ತುಂಬಾ ಜನರು ಇದ್ದಾರೆ. ಈ ವಿಷಯದಲ್ಲಿ ಅತ್ಯಂತ ಜಾಗೂರಕರಾಗಿರಿ ಎಂದು ಮನವಿ ಮಾಡಿದರು.
*ಪೋಷಕರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ:*
ಕೆಲವೊಂದು ಅಂಗಡಿಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಟೀ ಜೊತೆಗೆ ಸಿಗರೇಟ್ ಕೊಡುತ್ತಿದ್ದಾರೆ. ಮುಂಭಾಗ ಅಂಗಡಿ ರೀತಿ ಒಳಗೆ ಶೆಡ್ ರೀತಿ ಮಾಡಿಕೊಂಡಿರುತ್ತಾರೆ. ಅಲ್ಲಿ ಟೀ ಸಿಗರೇಟ್ ಜೊತೆಗೆ ಆನ್ಲೈನ್ ಗೇಮ್ ಆಡುವ ವ್ಯವಸ್ಥೆ ಕಂಡು ಬರುತ್ತಿದೆ. ಈಗಾಗಲೇ 3 ಅಂಗಡಿಗಳ ಮೇಲೆ ಪ್ರಕರಣ ದಾಖಲು ಮಾಡಿದ್ದೇವೆ. ಅಂಗಡಿ ಅಥವಾ ಪೆಟ್ಟಿ ಅಂಗಡಿಗಳಿಗೆ ಹೇಳುವುದಾದರೆ 18 ವರ್ಷದ ಒಳಗಿನ ಮಕ್ಕಳಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಿಗರೇಟ್, ಗುಟ್ಕಾ ಕೊಟ್ಟ ಮಾಹಿತಿ ತಿಳಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲು ಮಾಡುತ್ತೇವೆ. ಇನ್ನು ಮಕ್ಕಳ ಬಗ್ಗೆ ಪೋಷಕರು ಕೂಡ ಜಾಗ್ರತೆ ವಹಿಸಬೇಕು ಎಂದರು.
*ಗಣಪತಿ ಹಬ್ಬಕ್ಕೆ ಡಿಜೆ ಕಥೆ ಏನು?:* ಗಣಪತಿ ಹಬ್ಬಕ್ಕೆ ಡಿಜೆ ಬಳಸಲು ಅನುಮತಿ ಕೊಡುತ್ತಿಲ್ಲ. ಡಿಜೆ ಸೌಂಡ್ ನಿಂದ, ರೋಗಿಗಳಿಗೆ, ವಯೋ ವೃದ್ಧರಿಗೆ, ಪುಟಾಣಿ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈಗ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬ ಜೊತೆ ಜೊತೆಗೆ ಬರುತ್ತಿವೆ.ಎಲ್ಲರೂ ಸೇರಿ ಸಾಮರಸ್ಯ ಪೂರಕವಾಗಿ ಆಚರಣೆ ಮಾಡೋಣ.ನಮ್ಮ ತೀರ್ಥಹಳ್ಳಿ ಶಾಂತಿಯುತವಾದ ನಾಡು,ಇಲ್ಲಿ ಯಾವುದೇ ಕೋಮು ಸೌಹಾರ್ದ ಕೆಡುವಂತಹ ಕೃತ್ಯಗಳಿಗೆ ಅವಕಾಶ ಇಲ್ಲ ಎಂದರು.
ಈ ವಿಚಾರವಾಗಿ ಎರಡು ದಿನದಲ್ಲಿ ಮೀಟಿಂಗ್ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.
*ಸೋಶಿಯಲ್ ಮೀಡಿಯಾ ಮೇಲೆ ಹದ್ದಿನ ಕಣ್ಣು!:*
ಸೋಶಿಯಲ್ ಮೀಡಿಯಾ ಸೆಂಟರ್ ನಲ್ಲಿ ಫೇಸ್ಬುಕ್, ವಾಟ್ಸಪ್, ಇನ್ಸ್ಟಾಗ್ರಾಮ್ ಸೇರಿ ಇತರ ಸೋಶಿಯಲ್ ಮೀಡಿಯಾದಲ್ಲಿ ಏನೆಲ್ಲಾ ಶೇರ್ ಆಗುತ್ತದೆ ಎಂಬುದನ್ನು ನೋಡುತ್ತಾ ಇರುತ್ತೇವೆ.
ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆ ಅಥವಾ ಗಲಭೆ ಸೃಷ್ಟಿ ಮಾಡುವ ಮೆಸೇಜ್ ಗಳಿಗೆ ಅವಕಾಶ ಇಲ್ಲ.ಅಂತಹದ್ದು ಕಂಡು ಬಂದರೆ ಕೇಸ್ ದಾಖಲು ಮಾಡುತ್ತೇವೆ ಎಂದರು.
*ತೀರ್ಥಹಳ್ಳಿಯಲ್ಲಿ ಗಾಂಜಾ ಕಥೆ ಏನು?:*
ಗಾಂಜಾ ಬೆಳೆಯುವುದು, ಗಾಂಜಾ ಸರಬರಾಜು ಮಾಡುವುದು, ಗಾಂಜಾ ಸೇದುವುದು ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಪ್ರಕರಣ ದಾಖಲು ಮಾಡುತ್ತಿದ್ದೇವೆ. ಕೋಣಂದೂರು ಹಾಗೂ ಹುಲ್ಲತ್ತಿಯಲ್ಲಿ ಗಾಂಜಾ ಬೆಳೆದ ಬಗ್ಗೆ ಕೇಸ್ ದಾಖಲಿಸಿದ್ದೇವೆ. ಗಾಂಜಾ ಸರಬರಾಜು ಮಾಡುವ ಪ್ರಕರಣ ಕೂಡ ಹಿಡಿದಿದ್ದೇವೆ. ಗಾಂಜಾ ಸೇದುವುದು ಕೂಡ ಕಂಡು ಬಂದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಈ ವರ್ಷದಲ್ಲಿ 22 ಕೇಸ್ ಈಗಾಗಲೇ ದಾಖಲಿಸಿದ್ದೇವೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು