2:11 PM Wednesday5 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ…

ಇತ್ತೀಚಿನ ಸುದ್ದಿ

ಅಪರೂಪದ ಗೊಂಬೆ ಪ್ರತಿಷ್ಠಾಪನೆ: ವಾಮಾಚಾರದ ಶಂಕೆ; ಕೌತುಕದ ಕಥೆ ಹಣೆಯುತ್ತಿರುವ ಗ್ರಾಮಸ್ಥರು

27/08/2021, 09:52

ವಿ.ಜಿ.ವೃಷಭೇಂದ್ರ  ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ತುಪ್ಪಕನಹಳ್ಳಿ ಗ್ರಾಮದ, ಹೊರವಲಯ ಅರಣ್ಯ ಪ್ರದೇಶದಲ್ಲಿ ಮಾಗಡಿಕಲ್ಲು ಕಟ್ಟೆ ಎಂಬಲ್ಲಿ ಅಪರೂಪದ ಗೊಂಬೆ ಕಂಡುಬಂದಿದ್ದು, ವಾಮಾಚಾರ ಪ್ರಯೋಗಕ್ಕಾಗಿ ಅದನ್ನು ವಿಧಿವತ್ತಾಗಿ ಪ್ರತಿಷ್ಠ‍ಾಪಿಸಲಾಗಿದೆ ಎಂದು ಗ್ರ‍ಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಕಾಲಕ್ಕೆ ಮಳೆ ಬಾರದಿದ್ದಾಗ ಅಥವಾ  ಗ್ರ‍ಾಮಕ್ಕೆ ಯಾವುದೋ ದುಷ್ಠ ಶಕ್ತಿಯ ಉಪಟಳ ಇದ್ದಾಗ, ಈ ರೀತಿಯಲ್ಲಿ  ವಾಮಾಚಾರ ಪ್ರಯೋಗದ ಮೂಲಕ ಗ್ರಾಮದಿಂದ ಹೊರಹಾಕಿ ದಿಗ್ಭಂದನ ಹಾಕಲಾಗುತ್ತದೆ ಎಂದು ಕೆಲ ಹಿರಿಯ ಗ್ರ‍ಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಗೊಂಬೆ ಪ್ರತಿಷ್ಠಾಪನೆಯನ್ನು ಯಾರು.!?ಯಾವ ಉದ್ದೇಶಕ್ಕಾಗಿ ಇಲ್ಲಿ ಪ್ರತಿಷ್ಠಾಪಿಸಿದ್ದಾರೆ..!?

ಎಂಬುದು ಇಡೀ ತುಪ್ಪಕ್ಕನಹಳ್ಳಿ ಗ್ರಾಮಸ್ಥರಲ್ಲಿ ಯಕ್ಷ ಪ್ರೆಶ್ನೆಯಾಗಿ ಮನೆ ಮಾಡಿದೆ. ಗೊಂಬೆ ಇರುವಲ್ಲಿಗೆ ತುಪ್ಪಕ್ಕನಹಳ್ಳಿ ಗ್ರಾಮಸ್ಥರು ತೀವ್ರ ಕುತೂಹಲ ಹಾಗೂ ದುಗುಡದೊಂದಿಗೆ, ಗುಂಪು ಗುಂಪಾಗಿ ದೌಡಾಯಿಸಿ ಗೊಂಬೆ ಯನ್ನು ಕಂಡು ಕೌತುಕ ಕಥೆಗಳನ್ನ ಎಣೆಯುತ್ತಿದ್ದಾರೆ. ಅಲ್ಲದೇ ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಸ್ಥರು ಗುಂಪು ಗುಂಪಾಗಿ, ಗೊಂಬೆ ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ಮುತ್ತಿಗೆ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಈ ಗೊಂಬೆ ನೋಡುಗರಲ್ಲಿ  ಕೌತುಕ ಹಾಗೂ ದುಗುಡ ಸೃಷ್ಟಿಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು