5:25 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಅಪರೂಪದ ಗೊಂಬೆ ಪ್ರತಿಷ್ಠಾಪನೆ: ವಾಮಾಚಾರದ ಶಂಕೆ; ಕೌತುಕದ ಕಥೆ ಹಣೆಯುತ್ತಿರುವ ಗ್ರಾಮಸ್ಥರು

27/08/2021, 09:52

ವಿ.ಜಿ.ವೃಷಭೇಂದ್ರ  ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ತುಪ್ಪಕನಹಳ್ಳಿ ಗ್ರಾಮದ, ಹೊರವಲಯ ಅರಣ್ಯ ಪ್ರದೇಶದಲ್ಲಿ ಮಾಗಡಿಕಲ್ಲು ಕಟ್ಟೆ ಎಂಬಲ್ಲಿ ಅಪರೂಪದ ಗೊಂಬೆ ಕಂಡುಬಂದಿದ್ದು, ವಾಮಾಚಾರ ಪ್ರಯೋಗಕ್ಕಾಗಿ ಅದನ್ನು ವಿಧಿವತ್ತಾಗಿ ಪ್ರತಿಷ್ಠ‍ಾಪಿಸಲಾಗಿದೆ ಎಂದು ಗ್ರ‍ಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಸಕಾಲಕ್ಕೆ ಮಳೆ ಬಾರದಿದ್ದಾಗ ಅಥವಾ  ಗ್ರ‍ಾಮಕ್ಕೆ ಯಾವುದೋ ದುಷ್ಠ ಶಕ್ತಿಯ ಉಪಟಳ ಇದ್ದಾಗ, ಈ ರೀತಿಯಲ್ಲಿ  ವಾಮಾಚಾರ ಪ್ರಯೋಗದ ಮೂಲಕ ಗ್ರಾಮದಿಂದ ಹೊರಹಾಕಿ ದಿಗ್ಭಂದನ ಹಾಕಲಾಗುತ್ತದೆ ಎಂದು ಕೆಲ ಹಿರಿಯ ಗ್ರ‍ಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಗೊಂಬೆ ಪ್ರತಿಷ್ಠಾಪನೆಯನ್ನು ಯಾರು.!?ಯಾವ ಉದ್ದೇಶಕ್ಕಾಗಿ ಇಲ್ಲಿ ಪ್ರತಿಷ್ಠಾಪಿಸಿದ್ದಾರೆ..!?

ಎಂಬುದು ಇಡೀ ತುಪ್ಪಕ್ಕನಹಳ್ಳಿ ಗ್ರಾಮಸ್ಥರಲ್ಲಿ ಯಕ್ಷ ಪ್ರೆಶ್ನೆಯಾಗಿ ಮನೆ ಮಾಡಿದೆ. ಗೊಂಬೆ ಇರುವಲ್ಲಿಗೆ ತುಪ್ಪಕ್ಕನಹಳ್ಳಿ ಗ್ರಾಮಸ್ಥರು ತೀವ್ರ ಕುತೂಹಲ ಹಾಗೂ ದುಗುಡದೊಂದಿಗೆ, ಗುಂಪು ಗುಂಪಾಗಿ ದೌಡಾಯಿಸಿ ಗೊಂಬೆ ಯನ್ನು ಕಂಡು ಕೌತುಕ ಕಥೆಗಳನ್ನ ಎಣೆಯುತ್ತಿದ್ದಾರೆ. ಅಲ್ಲದೇ ಸುದ್ದಿ ತಿಳಿದ ನೆರೆ ಹೊರೆಯ ಗ್ರಾಮಸ್ಥರು ಗುಂಪು ಗುಂಪಾಗಿ, ಗೊಂಬೆ ಪ್ರತಿಷ್ಠಾಪಿಸಿರುವ ಸ್ಥಳಕ್ಕೆ ಮುತ್ತಿಗೆ ಹಾಕುತ್ತಿದ್ದಾರೆ. ಒಟ್ಟಾರೆಯಾಗಿ ಈ ಗೊಂಬೆ ನೋಡುಗರಲ್ಲಿ  ಕೌತುಕ ಹಾಗೂ ದುಗುಡ ಸೃಷ್ಟಿಸುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು