7:49 AM Friday10 - July 2026
ಬ್ರೇಕಿಂಗ್ ನ್ಯೂಸ್
ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;… Kodagu | ಮಡಿಕೇರಿ ರಾಜಾಸೀಟ್ ನಾಳೆಯಿಂದ ಜುಲೈ 12ರವರೆಗೆ ಕ್ಲೋಸ್: ಜಿಲ್ಲಾಧಿಕಾರಿ ಆದೇಶ ನಾಗರಹೊಳೆ ಉದ್ಯಾನದ ಬೀಟ್‌ಗಾರ್ಡ್ ಮನೆಯಲ್ಲಿ ಅಕ್ರಮ ಜಿಂಕೆ ಪತ್ತೆ: ಬಂಧನ; ಬಂದೂಕು ವಶ ಮೂಗ್ರಹಳ್ಳಿ ಸೇತುವೆ ಕಾಮಗಾರಿಯಲ್ಲಿ ಸುರಕ್ಷತೆ ನಿರ್ಲಕ್ಷ್ಯ ಆರೋಪ; ಕಾಮಗಾರಿ ತಾತ್ಕಾಲಿಕ ಸ್ಥಗಿತಕ್ಕೆ ಗ್ರಾಮಸ್ಥರ… ಮರದ ದಿಮ್ಮಿ ಸಾಗಾಟ | ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ದಂತ… ಬೇಲೂರು | SIR ಕರ್ತವ್ಯದ ಒತ್ತಡಕ್ಕೆ ಕುಸಿದು ಬಿದ್ದ ನಿವೃತ್ತಿಯಂಚಿನಲ್ಲಿರುವ 60ರ ಹರೆಯದ… ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಎದುರಿಸಲು ಸಜ್ಜಾಗಿ: ಮೇಲುಸ್ತುವಾರಿ ಸಚಿವ ಯು.ಟಿ.… ಕಳಸ: ಬೈಕಿಗೆ ಸೈಡ್ ಕೊಡಲು ಹೋಗಿ ತೋಟಕ್ಕೆ ನುಗ್ಗಿದ ಕಾರು; ಪ್ರಯಾಣಿಕರು ಪಾರು ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:…

ಇತ್ತೀಚಿನ ಸುದ್ದಿ

ಬಸವಣ್ಣನವರು ಸರ್ವಧರ್ಮೀಯರನ್ನು ಒಂದು ಗೂಡಿಸಿದ ಶ್ರೇಷ್ಠರು: ಕಪರಟ್ಟಿ ಬಸವರಾಜ ಮಹಾಸ್ವಾಮೀಜಿ

31/07/2024, 15:10

ಸಂತೋಷ್ ಬೆಳಗಾವಿ

info.reporterkarnataka@gmail.com

ಬಸವಣ್ಣವರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿ ಕಲ್ಯಾಣದ ಕ್ರಾಂತಿ ಮಾಡಿ ಸರ್ವಧರ್ಮೀಯರನ್ನು ಒಂದು ಗೂಡಿಸಿ ಒಂದೇ ಎಂಬ ತತ್ವ ಸಾರಿ ಶ್ರೇಷ್ಠ ಅನಿಸಿಕೊಂಡ್ಡವರು. ವಿಶ್ವ ಗುರು ಬಸವಣ್ಣವರು ಆಧ್ಯಾತ್ಮದ ಮಾತುಗಳು ಅಮೃತವಿದ್ದಂತೆ ಎಂದು ಕಪರಟ್ಟಿ ಬಸವರಾಜ ಮಹಾಸ್ವಾಮೀಜಿಗಳು ಹೇಳಿದರು. ಅವರು ಗ್ರಾಮದ ಪಾಂಡುರಂಗ ದೇವಸ್ಥಾನದಲ್ಲಿ ನಡೆದ ಬಸವ ಮಹಾಪೂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಎಲ್ಲ ಮಾನವ ಕುಲದ ಎಳ್ಗೆ ಬಯಸಿ ಎಲ್ಲರಿಗೂ ಸ್ಥಾನಮಾನ ದೊರೆತ್ತಿದ್ದು ಬಸವಣ್ಣವ ರಿಂದ.ಅದಿಕಾರವಿಲ್ಲದಿದ್ದರು ಬಡವ ದಿನ ದಲಿತರ ಹಿಂದುಳಿದ ವರ್ಗಗಳ ಕಲ್ಯಾಣ ಸಹಾಯ ಸಹಕಾರ ನೀಡಿ ಅವರನ್ನು ಮೇಲೆಕ್ಕೆತ್ತುವ ಕೆಲಸ ಮಾಡುವರೆ ಶ್ರೇಷ್ಠರು ಅವತಾರಿಕರಲ್ಲಿ ಜಾತಿ ಬೇಧವಿಲ್ಲ ನಿಜವಾದ ಸಾಧು ಸಂತರ ಸಂಘ ಮಾಡಿ ಜೀವನವು ಉದ್ಧಾರ ಮಾಡಿಕೊಳ್ಳಿರೆಂದು ಹೇಳಿದರು. ಸಿದ್ಧಾರೂಢ ಮಠದ ಶಿವಾನಂದ ಸ್ವಾಮೀಜಿಯವರು ಮಾತನಾಡಿ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನುಡಿದಂತೆ ನಡೆದು ಪ್ರಪಂಚ ಮಾಡಿ ಪಾರಮಾರ್ಥ ಗೆದ್ದು ಮಾನವ ಜೀವನ ಸಾರ್ಥಕ ಮಾಡಿಕೊಂಡು ಮುಕ್ತಿ ಪಡೆಯಬೇಕೆಂದು ಹೇಳಿದರು. ಈ ಸಮಯದಲ್ಲಿ ಶಂಕರಯ್ಯ ಹೀರೆಮಠ. ಬಸವನ್ನಿ ಡಬ್ಬನ್ನವರ. ಶಿವಪ್ಪ ನಿಡೋಣಿ.ದುಂಡಪ್ಪ ಬಡಿಗೇರ. ಅಡಿವೆಪ್ಪ ಪಾಲಬಾಂವಿ. ಭೀಮಪ್ಪ ಹೊಸಟ್ಟಿ.ಮಲ್ಲಿಕಾರ್ಜುನ ಸಂತಿ.ಮುರಿಗೆಪ್ಪ ಮಾಲಗಾರ.ರಮೇಶ ಲೋಕಣ್ಣವರ. ಲಕ್ಷ್ಮಣ ಬಡಿಗೇರ ಉಮೇಶ ಸಿದ್ನಾಳ. ದಿನೇಶ್ ಜುಗಳಿ.ಸೇರಿದಂತೆ ಅನೇಕರಿದ್ದು ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ನಿರೂಪಿಸಿ, ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು