10:32 PM Tuesday21 - May 2024
ಬ್ರೇಕಿಂಗ್ ನ್ಯೂಸ್
ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;…

ಇತ್ತೀಚಿನ ಸುದ್ದಿ

ಪ್ರಧಾನಿ ನೋಡಲು ಬಂದವರೆಲ್ಲ ಬಿಜೆಪಿ ವೋಟರ್ಸ್ ಅಲ್ಲ; ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

15/04/2024, 23:56

ಮಂಗಳೂರು(reporterkarnataka.com):ಮೋದಿ ಅವರು ಈ ದೇಶದ ಪ್ರಧಾನಿ. ಅವರು ಮಂಗಳೂರಿಗೆ ಬಂದಿರೋದಕ್ಕೆ ಸ್ವಾಗತ. ಆದರೆ ಅವರು ಬಂದಿರೋ ಉದ್ದೇಶ ಸರಿಯಿಲ್ಲ. ಎಲ್ಲಾ ಕಡೆಯಿಂದ ಪ್ರಧಾನಿ ನೋಡಲು ಜನ ಬಂದಿದ್ದಾರೆ. ಹಾಗಂತ ಬಂದವರೆಲ್ಲ ಬಿಜೆಪಿ ವೋಟರ್ಸ್ ಎಂದು ಹೇಳಲು ಸಾಧ್ಯ ಇಲ್ಲ. ನಾನು ಆ ಸಂದರ್ಭದಲ್ಲಿ ಇರ್ಲಿಲ್ಲ ಇದ್ದಿದ್ದರೆ ನಾನು ನೋಡಲು ಹೋಗುತ್ತಿದೆ. ಯಾಕಂದ್ರೆ ಅವರು ನಮ್ಮ ಪ್ರಧಾನಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಸುರತ್ಕಲ್ ನಲ್ಲಿ ಇಂದು ಮತಯಾಚನೆ ಸಂದರ್ಭದಲ್ಲಿ ಮೋದಿ ರೋಡ್ ಶೋನಿಂದ ಪದ್ಮರಾಜ್ ಅವರಿಗೆ ಹಿನ್ನಡೆ ಯಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ಪ್ರಧಾನಿ ಮೋದಿ ಅವರು ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕಿದ್ದನ್ನು ಗೌರವಿಸುತ್ತೇನೆ. ಆದರೆ ಈ ಹಿಂದೆ ಹಲವಾರು ಬಾರಿ ಅವರು ಮಂಗಳೂರಿಗೆ ಬಂದಿದ್ದಾರೆ. ಅಗ ಯಾರೂ ನಿಮಗೆ ಗುರುಗಳನ್ನು ನೆನಪಿಸಲ್ಲವೇ? ಈ ಬಾರಿ ಅಪ್ಪಟ ಅನುಯಾಗಿ 27 ವರ್ಷಗಳಿಂದ ನಾರಾಯಣ ಗುರುಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ ಪದ್ಮರಾಜ್ ಚುನಾವಣೆ ನಿಂತಾಗ ಪ್ರಧಾನ ಮಂತ್ರಿಗಳಿಗೆ ನಾರಾಯಣ ಗುರುಗಳ ನೆನಪಾಗುತ್ತಾ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ ಎಂದರು.
ಕಾಂಗ್ರೆಸ್ ಸಂಸದರು ಇರುವಾಗ 41 ವರ್ಷಗಳಿಂದ ಉದ್ಯೋಗ ಸೃಷ್ಟಿಯಾಗಿತ್ತು. ಆದರೆ ಬಿಜೆಪಿ ಎಂಪಿಗಳು 33 ವರ್ಷಗಳಿಂದ ಎಷ್ಟು
ಉದ್ಯೋಗ ಸೃಷ್ಟಿ ಮಾಡಿದ್ದಾರೆ? ಒಂದು ಯೋಜನೆಯನ್ನಾದರೂ ದ.ಕ. ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದಿದಿದ್ದಾರೆಯೇ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನಿಸಿದರು .
ಮುಂಬೈ ನಗರದಲ್ಲಿ ದಿವಸದಲ್ಲಿ 20 ಗಂಟೆ ಲವಲವಿಕೆಯಿಂದ ಇರುತ್ತದೆ. ಹಾಗೆ ನಮ್ಮ ಮಂಗಳೂರು ಎಲ್ಲಾ ಅರ್ಹತೆ ಹೊಂದಿದೆ. ಆದರೆ ಮಂಗಳೂರು ಮಾತ್ರ 9 ಗಂಟೆ ಬಂದಾಗುತ್ತದೆ ಯಾಕೆ ?. ಮೆಡಿಕಲ್ ಹಬ್, ಕೈಗಾರಿಕೆ, ಉದ್ಯೋಗ ಸೃಷ್ಟಿಯಾಗದ ಕಾರಣ, ಮಕ್ಕಳು ವಿದೇಶಕ್ಕೆ ಹೋಗಿ ಅಪ್ಪ ಅಮ್ಮ ಅನಾಥ ವಾಗುತ್ತಿದ್ದಾರೆ. ಇದು ಬಿಜೆಪಿ ಎಂಪಿಗಳ 33 ವರ್ಷಗಳ ಸಾಧನೆ ಎಂದು ಪದ್ಮರಾಜ್ ಟೀಕಿಸಿದರು.
ಬಿಜೆಪಿಯು ಜಾತಿ- ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆದು ಹಾಕಿದ್ದಲ್ಲದೆ ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಕೊಡಲಿ ಏಟು ನೀಡಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಪ್ರಚೋದಿಸಿ, ಅವರಿಂದ ಕಾನೂನುಬಾಹಿರ ಕೆಲಸ ಮಾಡಿಸಿ ಜೈಲು ಸೇರುವಂತೆ ಮಾಡಿದ್ದು ಬಿಜೆಪಿ ಪಕ್ಷದ ಸಾಧನೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು