5:18 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಪ್ರಧಾನಿ ನೋಡಲು ಬಂದವರೆಲ್ಲ ಬಿಜೆಪಿ ವೋಟರ್ಸ್ ಅಲ್ಲ; ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

15/04/2024, 23:56

ಮಂಗಳೂರು(reporterkarnataka.com):ಮೋದಿ ಅವರು ಈ ದೇಶದ ಪ್ರಧಾನಿ. ಅವರು ಮಂಗಳೂರಿಗೆ ಬಂದಿರೋದಕ್ಕೆ ಸ್ವಾಗತ. ಆದರೆ ಅವರು ಬಂದಿರೋ ಉದ್ದೇಶ ಸರಿಯಿಲ್ಲ. ಎಲ್ಲಾ ಕಡೆಯಿಂದ ಪ್ರಧಾನಿ ನೋಡಲು ಜನ ಬಂದಿದ್ದಾರೆ. ಹಾಗಂತ ಬಂದವರೆಲ್ಲ ಬಿಜೆಪಿ ವೋಟರ್ಸ್ ಎಂದು ಹೇಳಲು ಸಾಧ್ಯ ಇಲ್ಲ. ನಾನು ಆ ಸಂದರ್ಭದಲ್ಲಿ ಇರ್ಲಿಲ್ಲ ಇದ್ದಿದ್ದರೆ ನಾನು ನೋಡಲು ಹೋಗುತ್ತಿದೆ. ಯಾಕಂದ್ರೆ ಅವರು ನಮ್ಮ ಪ್ರಧಾನಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಸುರತ್ಕಲ್ ನಲ್ಲಿ ಇಂದು ಮತಯಾಚನೆ ಸಂದರ್ಭದಲ್ಲಿ ಮೋದಿ ರೋಡ್ ಶೋನಿಂದ ಪದ್ಮರಾಜ್ ಅವರಿಗೆ ಹಿನ್ನಡೆ ಯಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ಪ್ರಧಾನಿ ಮೋದಿ ಅವರು ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಹಾರ ಹಾಕಿದ್ದನ್ನು ಗೌರವಿಸುತ್ತೇನೆ. ಆದರೆ ಈ ಹಿಂದೆ ಹಲವಾರು ಬಾರಿ ಅವರು ಮಂಗಳೂರಿಗೆ ಬಂದಿದ್ದಾರೆ. ಅಗ ಯಾರೂ ನಿಮಗೆ ಗುರುಗಳನ್ನು ನೆನಪಿಸಲ್ಲವೇ? ಈ ಬಾರಿ ಅಪ್ಪಟ ಅನುಯಾಗಿ 27 ವರ್ಷಗಳಿಂದ ನಾರಾಯಣ ಗುರುಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ ಪದ್ಮರಾಜ್ ಚುನಾವಣೆ ನಿಂತಾಗ ಪ್ರಧಾನ ಮಂತ್ರಿಗಳಿಗೆ ನಾರಾಯಣ ಗುರುಗಳ ನೆನಪಾಗುತ್ತಾ ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ ಎಂದರು.
ಕಾಂಗ್ರೆಸ್ ಸಂಸದರು ಇರುವಾಗ 41 ವರ್ಷಗಳಿಂದ ಉದ್ಯೋಗ ಸೃಷ್ಟಿಯಾಗಿತ್ತು. ಆದರೆ ಬಿಜೆಪಿ ಎಂಪಿಗಳು 33 ವರ್ಷಗಳಿಂದ ಎಷ್ಟು
ಉದ್ಯೋಗ ಸೃಷ್ಟಿ ಮಾಡಿದ್ದಾರೆ? ಒಂದು ಯೋಜನೆಯನ್ನಾದರೂ ದ.ಕ. ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದಿದಿದ್ದಾರೆಯೇ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಶ್ನಿಸಿದರು .
ಮುಂಬೈ ನಗರದಲ್ಲಿ ದಿವಸದಲ್ಲಿ 20 ಗಂಟೆ ಲವಲವಿಕೆಯಿಂದ ಇರುತ್ತದೆ. ಹಾಗೆ ನಮ್ಮ ಮಂಗಳೂರು ಎಲ್ಲಾ ಅರ್ಹತೆ ಹೊಂದಿದೆ. ಆದರೆ ಮಂಗಳೂರು ಮಾತ್ರ 9 ಗಂಟೆ ಬಂದಾಗುತ್ತದೆ ಯಾಕೆ ?. ಮೆಡಿಕಲ್ ಹಬ್, ಕೈಗಾರಿಕೆ, ಉದ್ಯೋಗ ಸೃಷ್ಟಿಯಾಗದ ಕಾರಣ, ಮಕ್ಕಳು ವಿದೇಶಕ್ಕೆ ಹೋಗಿ ಅಪ್ಪ ಅಮ್ಮ ಅನಾಥ ವಾಗುತ್ತಿದ್ದಾರೆ. ಇದು ಬಿಜೆಪಿ ಎಂಪಿಗಳ 33 ವರ್ಷಗಳ ಸಾಧನೆ ಎಂದು ಪದ್ಮರಾಜ್ ಟೀಕಿಸಿದರು.
ಬಿಜೆಪಿಯು ಜಾತಿ- ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆದು ಹಾಕಿದ್ದಲ್ಲದೆ ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಕೊಡಲಿ ಏಟು ನೀಡಿದೆ. ಆರ್ಥಿಕವಾಗಿ ಹಿಂದುಳಿದವರನ್ನು ಪ್ರಚೋದಿಸಿ, ಅವರಿಂದ ಕಾನೂನುಬಾಹಿರ ಕೆಲಸ ಮಾಡಿಸಿ ಜೈಲು ಸೇರುವಂತೆ ಮಾಡಿದ್ದು ಬಿಜೆಪಿ ಪಕ್ಷದ ಸಾಧನೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು