9:53 PM Friday11 - April 2025
ಬ್ರೇಕಿಂಗ್ ನ್ಯೂಸ್
Karnataka BJP | ದಲಿತರ ತುಳಿದವರೇ ಕಾಂಗ್ರೆಸಿಗರು: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಜನ ಬೇಸತ್ತಿರುವುದಕ್ಕೆ ಜನಾಕ್ರೋಶ ಯಾತ್ರೆಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿ : ಪ್ರತಿಪಕ್ಷದ ನಾಯಕ… ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನದ ಬಾಲ್ಡೋಟಾ ಇಂಟಿಗ್ರೇಟೆಡ್ ಸ್ಟೀಲ್ ಪ್ರಾಜೆಕ್ಟ್ ಎಂಬೆಸ್ಸಿ ಗಾಲ್ಫ್ ಲಿಂಕ್ ನ ಸಿಎಸ್ಆರ್ ನಿಧಿಯಿಂದ ಮರಿಯ ನಿಕೇತನ ಶಿಕ್ಷಣ ಸಂಸ್ಥೆಗೆ… Home Minister | ಡಿಸಿಆರ್ ಇ ಪೊಲೀಸ್ ಠಾಣೆಗಳಿಗೆ ನೂತನ ವಾಹನ ಹಸ್ತಾಂತರ:… ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತಲಾಗದ ಪ್ರತಿಪಕ್ಷ: ಬಿಜೆಪಿ ವಿರುದ್ದ… UGCET- 25 | 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಹತೆ: ಕ್ಯೂಆರ್ ಕೋಡ್,… Bangalore | ರಾಜ್ಯದ ಕಟ್ಟ ಕಡೆಯ ಮನುಷ್ಯನಿಗೂ ನ್ಯಾಯ, ನೆಮ್ಮದಿ ಕೊಡಿಸಲು ಜನ… ಕುತ್ಲುರು ಸರಕಾರಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ 2 ಕಂಪ್ಯೂಟರ್ ಹಾಗೂ ಪ್ರೊಜೆಕ್ಟರ್… ವಿರಳಾತಿ ವಿರಳ ಕಾಯಿಲೆಗೆ ತುತ್ತಾದ ಚಿಣ್ಣರ ಚಿಕಿತ್ಸೆಗೆ ಕಾರ್ಪೊರೇಟ್‌ ಕಂಪನಿಗಳು ನೆರವು ನೀಡಲಿ:…

ಇತ್ತೀಚಿನ ಸುದ್ದಿ

ಚಳ್ಳಕೆರೆ ಚಿಗುರು ಈ ಕಿಡ್ಸ್ ಶಾಲಾ 8ನೇ ವರ್ಷದ ವಾರ್ಷಿಕೋತ್ಸವ:   ಮನಸೂರೆಗೊಂಡ ಮಕ್ಕಳ ಕಾರ್ಯಕ್ರಮ ವೈವಿಧ್ಯ

07/03/2024, 11:54

ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಿಗುರು ಈ ಕಿಡ್ಸ್ ಶಾಲಾ 8ನೇ ವರ್ಷದ ವಾರ್ಷಿಕೋತ್ಸವ ಚಳ್ಳಕೆರೆಯ ಯಾದವ ವಿದ್ಯಾರ್ಥಿ ಹಾಸ್ಟೇಲ್ ನಲ್ಲಿ ನಡೆಯಿತು.
ಶಾಲೆಯ ಶಿಕ್ಷಕ ನಾಗೇಶ್ ಅವರು ಮಾತನಾಡಿ, ಈ ಸಂಸ್ಥೆ ಮಕ್ಕಳಿಗೆ ಸಿಗುವ ಒಳ್ಳೆಯ ಸಂಸ್ಕಾರ, ಬೋಧನೆ ಎಲ್ಲದಕ್ಕಿಂತ ಒಂದು ಹೆಜ್ಜೆ ಮುಂದೆ ಇದೆ. ಎಲ್ಲಾ ಶಾಲೆಗಳಲ್ಲಿ ನಾನು ನೋಡಿದ ಹಾಗೇ ಮಕ್ಕಳನ್ನು ಪ್ರೀತಿಯಿಂದ ಶಿಕ್ಷಕರು ನೋಡಿಕೊಳ್ಳುವುದು. ಅವರು ಕಲಿಸುವ ರೀತಿ ಮಂತ್ರ ಪಠನೆ, ಮಕ್ಕಳ ಮಾತುಗರಿಕೆ, ಈ ಶಾಲೆಯ ಬೋಧನೆಯನ್ನು ಎತ್ತಿ ಹಿಡಿಯುತ್ತದೆ ಎಂದರು. ಮಕ್ಕಳು ಸಹ ಅಷ್ಟೇ ವೇಗವಾಗಿ ಕಲಿಯುತ್ತಿರುವುದು ಎಲ್ಲಾ ಪೋಷಕರಿಗೆ ಸಂತಸ ತರುತ್ತದೆ ಎಂದರು.


ಚಿಗುರು ಈ ಕಿಡ್ಸ್ ಪ್ರಿ ಸ್ಕೂಲ್ ಸಂಸ್ಥೆಯ ಅಧ್ಯಕ್ಷರಾದ ಜಡೆಕುಂಟೆ ಎನ್.ಚಿಕ್ಕಣ್ಣ ಮಾತನಾಡಿ, ನಮ್ಮ ಸಂಸ್ಥೆ 8 ವರ್ಷ ದಿಂದ ನೆಡೆಸಿಕೊಂಡು ಬರುತ್ತಿದ್ದು, ಉತ್ತಮ ಶಿಕ್ಷಕರ ವೃಂದ ಹೊಂದಿದೆ. ಮಕ್ಕಳಿಗೆ ಉತ್ತಮ ಆಚಾರ ವಿಚಾರ ಮತ್ತು ಬೋಧನೆಯನ್ನು ನೀಡುತ್ತಿದ್ದಾರೆ. ಇದರಿಂದಾಗಿಯೇ ನಮ್ಮ ಸಂಸ್ಥೆ ಹೆಸರನ್ನು ನಮ್ಮ ಶಾಲೆಯ ಮಕ್ಕಳೇ ಈ ಶಾಲೆಗೆ ಕೀರ್ತಿ ತರುತ್ತಿದ್ದಾರೆ ಎಂದರು.
ಗ್ರಾಮ ಲೆಕ್ಕಾಧಿಕಾರಿ ಹರೀಶ್, ಶಿಕ್ಷಕರಾದ ನಾಗೇಶ್ , ಐಎಂಐ ಟಿಐ ಕಾಲೇಜು ಕಾರ್ಯದರ್ಶಿ ಸಯ್ಯದ್ ಅಹಮ್ಮದ್, ಸಂಸ್ಥೆಯ ಅಧ್ಯಕ್ಷರು ಎನ್. ಚಿಕ್ಕಣ್ಣ ಜಯಮ್ಮ, ಕಾರ್ಯದರ್ಶಿ ಶಶಿಕುಮಾರ್,
ಮುಖ್ಯಶಿಕ್ಷಕಿ ಸ್ಫೂರ್ತಿ ಎಸ್, ಪುಷ್ಪಾ, ಶಾಂತಾ, ಸಾವಿತ್ರಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು