2:34 PM Saturday8 - August 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ…

ಇತ್ತೀಚಿನ ಸುದ್ದಿ

30 ವರ್ಷಗಳ ಹಿಂದಿನ ಸಹಪಾಠಿಗೆ ಬಣಕಲ್ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಆರ್ಥಿಕ ನೆರವು: ವಾಟ್ಸಾಪ್ ಗ್ರೂಪ್ ರಚಿಸಿ ಕಾರ್ಯಪ್ರವೃತ್ತಿ

24/02/2024, 10:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಣಕಲ್ ಪ್ರೌಢಶಾಲೆಯ 1989-90 ಬ್ಯಾಚಿನ ವಿದ್ಯಾರ್ಥಿಗಳು ಸೊಂಟದ ಬಲ ಕಳೆದುಕೊಂಡು ಮೂಲೆಗುಂಪಾಗಿರುವ ಸಹಪಾಠಿ ಅಚ್ಯುತ ಪೂಜಾರಿ ಅವರಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ವಿದ್ಯಾರ್ಥಿ ಸೈಯದ್ ನವೀದ್ ಮಾತನಾಡಿ’ ಬಣಕಲ್ ಪ್ರೌಡ ಶಾಲೆಯ ಹಳೇ ವಿದ್ಯಾರ್ಥಿಗಳಾದ ನಾವು ನಮ್ಮ ಸ್ನೇಹಿತ ಸ್ಟ್ಯಾನಿ ಲೋಬೊ ಮುಖಾಂತರ ಮೂವತ್ತಮೂರು ವರ್ಷದ ನಂತರ ವಾಟ್ಸಾಪ್ ಗ್ರೂಪ್ ರಚಿಸಿ ಸ್ನೇಹಿತರ ಯೋಗಕ್ಷೇಮ ವಿಚಾರಿಸುತ್ತಿದ್ದೇವು. ಡಿಸೆಂಬರ್ ತಿಂಗಳಿನಲ್ಲಿ ಈ ಗ್ರೂಪ್ ರಚಿಸಿ ಕಷ್ಟದಲ್ಲಿರುವ ನಮ್ಮ ಸಹಪಾಠಿಗಳಿಗೆ ನೆರವಾಗುವ ಉದ್ದೇಶದಿಂದ ಈ ಗ್ರೂಪ್ ರಚಿಸಲಾಯಿತು’ಎಂದರು. ಸಹಪಾಠಿ ವಸಂತ್ ಎಸ್. ಪೂಜಾರಿ ಮಾತನಾಡಿ’ ನಮ್ಮ ಸಹಪಾಠಿ ಅಚ್ಯುತ ಪೂಜಾರಿ 28 ವರ್ಷದಿಂದ ಸೊಂಟದ ಬಲ ಕಳೆದು ಕೊಂಡು ದುಡಿಯಲಾಗದೇ ಮನೆಯ ಹಾಸಿಗೆ ಹಿಡಿದಿದ್ದರು. ಅವರ ಅಣ್ಣ ಅತ್ತಿಗೆ ಮಗನಂತೆ ಅವರ ಸೇವೆ ಮಾಡುತ್ತಿದ್ದಾರೆ ಎಂದು ವಿಷಯ ಕೇಳಿ ನಮಗೆ ಸಂತೋಷವಾಯಿತು. ಆದರೂ ಸ್ನೇಹಿತರ ಸಹಕಾರದಿಂದ ನಮ್ಮ ತಂಡದಿಂದ 1ಲಕ್ಷ 20 ಸಾವಿರ ಹಣವನ್ನು ಅಚ್ಯುತ ಪೂಜಾರಿ ಅವರಿಗೆ ಚೆಕ್ ಮೂಲಕ ನಾವು ವಿತರಿಸಿದೆವು. ಅಚ್ಯುತ ನಮ್ಮೆಲ್ಲರ ಸಹಪಾಠಿಗಳ ಗುರುತು ಹಚ್ಚಿ ಆನಂದ ಬಾಷ್ಪ ಸುರಿಸಿದರು. ಅವರ ಅಣ್ಣ ಅತ್ತಿಗೆಯವರ ಕಣ್ಣುಗಳು ಕೂಡ ತೇವವಾದವು. ಇದರಿಂದ ಬೇರೆ ವಿದ್ಯಾರ್ಥಿಗಳು ಕೂಡ ಶಾಲೆ ಸ್ನೇಹಿತರನ್ನು ಮರೆಯದೇ ಇತರರಿಗೂ ಇಂತಹ ಕಾರ್ಯಗಳು ಮಾದರಿಯಾಗಬೇಕು ಎಂಬುದು ನಮ್ಮ ತಂಡದ ಮೂಲ ಉದ್ದೇಶವಾಗಿದೆ’ಎಂದರು.ಈ ಸಂದರ್ಭದಲ್ಲಿ ಸ್ನೇಹಿತ ಸಹಪಾಠಿಗಳಾದ ಸ್ಟ್ಯಾನಿ ಲೋಬೊ,ಅಬ್ದುಲ್ ಸಲಾಂ, ಬಿ.ಜಿ.ಪ್ರಕಾಶ್, ವಿನಯ ಪ್ರಭು, ಮುನೀರ್,ಅನಿಲ್ ಮೊಂತೆರೊ, ನಾರಾಯಣ್,ಸುಕೇಶ್,ಬಿ.ಎಸ್.ಕಲ್ಲೇಶ್, ಎಸ್.ಎನ್.ರವಿ, ಸುವರ್ಣಲತ,ಕೆ.ಎಲ್.ರಘು, ರಿಯಾಜುದ್ದೀನ್,ಶಾರದಾ,ಟಿ.ಎಸ್.ಗಣೇಶ್,ಟಿ.ಎಸ್. ಪ್ರಸನ್ನ,ಗಣೇಶ್ ಸಬ್ಬೇನಹಳ್ಳಿ,ಹರೀಶ್ ಸುಭಾಷನಗರ, ಬಿ.ಸಿ.ಉಮೇಶ್,ಎಂ.ಎಸ್.ಪ್ರವೀಣ್, ಆಲ್ವಿನ್ ತೋಮಸ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು