6:04 PM Monday9 - March 2026
ಬ್ರೇಕಿಂಗ್ ನ್ಯೂಸ್
ವಿವಿಧ ಬೇಡಿಕೆ ಆಗ್ರಹಿಸಿ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಮಾ.11ರಂದು ಪ್ರತಿಭಟನೆ ಮೋದಿ ದೇಶದ ಮಾರ್ಯಾದೆ ಹಾಳು‌‌ ಮಾಡುತ್ತಿದ್ದಾರೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟು‌… ಕಂಬಳಕ್ಕೆ ರಾಜ್ಯ ಸರಕಾರದಿಂದ ಹಣಕಾಸಿನ ನೆರವು: ಬಂಟ್ವಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಹೈಕಮಾಂಡ್ ಸೂಚಿಸಿದರೆ ಕ್ಷಣಾರ್ಧದಲ್ಲಿ ಕುರ್ಚಿ ಬಿಡಲು ಸಿದ್ಧ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಜನಾಶೀರ್ವಾದವಿದ್ದರೆ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ: ಮೈಸೂರಿನಲ್ಲಿ‌ ಸಿಎಂ ಸಿದ್ದರಾಮಯ್ಯ Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ

ಇತ್ತೀಚಿನ ಸುದ್ದಿ

30 ವರ್ಷಗಳ ಹಿಂದಿನ ಸಹಪಾಠಿಗೆ ಬಣಕಲ್ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಆರ್ಥಿಕ ನೆರವು: ವಾಟ್ಸಾಪ್ ಗ್ರೂಪ್ ರಚಿಸಿ ಕಾರ್ಯಪ್ರವೃತ್ತಿ

24/02/2024, 10:45

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಣಕಲ್ ಪ್ರೌಢಶಾಲೆಯ 1989-90 ಬ್ಯಾಚಿನ ವಿದ್ಯಾರ್ಥಿಗಳು ಸೊಂಟದ ಬಲ ಕಳೆದುಕೊಂಡು ಮೂಲೆಗುಂಪಾಗಿರುವ ಸಹಪಾಠಿ ಅಚ್ಯುತ ಪೂಜಾರಿ ಅವರಿಗೆ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ವಿದ್ಯಾರ್ಥಿ ಸೈಯದ್ ನವೀದ್ ಮಾತನಾಡಿ’ ಬಣಕಲ್ ಪ್ರೌಡ ಶಾಲೆಯ ಹಳೇ ವಿದ್ಯಾರ್ಥಿಗಳಾದ ನಾವು ನಮ್ಮ ಸ್ನೇಹಿತ ಸ್ಟ್ಯಾನಿ ಲೋಬೊ ಮುಖಾಂತರ ಮೂವತ್ತಮೂರು ವರ್ಷದ ನಂತರ ವಾಟ್ಸಾಪ್ ಗ್ರೂಪ್ ರಚಿಸಿ ಸ್ನೇಹಿತರ ಯೋಗಕ್ಷೇಮ ವಿಚಾರಿಸುತ್ತಿದ್ದೇವು. ಡಿಸೆಂಬರ್ ತಿಂಗಳಿನಲ್ಲಿ ಈ ಗ್ರೂಪ್ ರಚಿಸಿ ಕಷ್ಟದಲ್ಲಿರುವ ನಮ್ಮ ಸಹಪಾಠಿಗಳಿಗೆ ನೆರವಾಗುವ ಉದ್ದೇಶದಿಂದ ಈ ಗ್ರೂಪ್ ರಚಿಸಲಾಯಿತು’ಎಂದರು. ಸಹಪಾಠಿ ವಸಂತ್ ಎಸ್. ಪೂಜಾರಿ ಮಾತನಾಡಿ’ ನಮ್ಮ ಸಹಪಾಠಿ ಅಚ್ಯುತ ಪೂಜಾರಿ 28 ವರ್ಷದಿಂದ ಸೊಂಟದ ಬಲ ಕಳೆದು ಕೊಂಡು ದುಡಿಯಲಾಗದೇ ಮನೆಯ ಹಾಸಿಗೆ ಹಿಡಿದಿದ್ದರು. ಅವರ ಅಣ್ಣ ಅತ್ತಿಗೆ ಮಗನಂತೆ ಅವರ ಸೇವೆ ಮಾಡುತ್ತಿದ್ದಾರೆ ಎಂದು ವಿಷಯ ಕೇಳಿ ನಮಗೆ ಸಂತೋಷವಾಯಿತು. ಆದರೂ ಸ್ನೇಹಿತರ ಸಹಕಾರದಿಂದ ನಮ್ಮ ತಂಡದಿಂದ 1ಲಕ್ಷ 20 ಸಾವಿರ ಹಣವನ್ನು ಅಚ್ಯುತ ಪೂಜಾರಿ ಅವರಿಗೆ ಚೆಕ್ ಮೂಲಕ ನಾವು ವಿತರಿಸಿದೆವು. ಅಚ್ಯುತ ನಮ್ಮೆಲ್ಲರ ಸಹಪಾಠಿಗಳ ಗುರುತು ಹಚ್ಚಿ ಆನಂದ ಬಾಷ್ಪ ಸುರಿಸಿದರು. ಅವರ ಅಣ್ಣ ಅತ್ತಿಗೆಯವರ ಕಣ್ಣುಗಳು ಕೂಡ ತೇವವಾದವು. ಇದರಿಂದ ಬೇರೆ ವಿದ್ಯಾರ್ಥಿಗಳು ಕೂಡ ಶಾಲೆ ಸ್ನೇಹಿತರನ್ನು ಮರೆಯದೇ ಇತರರಿಗೂ ಇಂತಹ ಕಾರ್ಯಗಳು ಮಾದರಿಯಾಗಬೇಕು ಎಂಬುದು ನಮ್ಮ ತಂಡದ ಮೂಲ ಉದ್ದೇಶವಾಗಿದೆ’ಎಂದರು.ಈ ಸಂದರ್ಭದಲ್ಲಿ ಸ್ನೇಹಿತ ಸಹಪಾಠಿಗಳಾದ ಸ್ಟ್ಯಾನಿ ಲೋಬೊ,ಅಬ್ದುಲ್ ಸಲಾಂ, ಬಿ.ಜಿ.ಪ್ರಕಾಶ್, ವಿನಯ ಪ್ರಭು, ಮುನೀರ್,ಅನಿಲ್ ಮೊಂತೆರೊ, ನಾರಾಯಣ್,ಸುಕೇಶ್,ಬಿ.ಎಸ್.ಕಲ್ಲೇಶ್, ಎಸ್.ಎನ್.ರವಿ, ಸುವರ್ಣಲತ,ಕೆ.ಎಲ್.ರಘು, ರಿಯಾಜುದ್ದೀನ್,ಶಾರದಾ,ಟಿ.ಎಸ್.ಗಣೇಶ್,ಟಿ.ಎಸ್. ಪ್ರಸನ್ನ,ಗಣೇಶ್ ಸಬ್ಬೇನಹಳ್ಳಿ,ಹರೀಶ್ ಸುಭಾಷನಗರ, ಬಿ.ಸಿ.ಉಮೇಶ್,ಎಂ.ಎಸ್.ಪ್ರವೀಣ್, ಆಲ್ವಿನ್ ತೋಮಸ್ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು