1:51 AM Saturday2 - August 2025
ಬ್ರೇಕಿಂಗ್ ನ್ಯೂಸ್
SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ ಶಿರೂರು ಗುಡ್ಡ ಕುಸಿತ ದುರಂತ ಕಥನ ಬೆಳ್ಳಿತೆರೆ ಮೇಲೆ ನೋಡಿ: ಮಲಯಾಳಂನಲ್ಲಿ ಸಿನಿಮಾ…

ಇತ್ತೀಚಿನ ಸುದ್ದಿ

ಮಾತೃ ಶಕ್ತಿಯಿಂದ ಸ್ವಾಸ್ಥ್ಯ ಸಮೃದ್ಧಿ: ಅಮೃತ ಆರೋಗ್ಯ ಮೇಳದಲ್ಲಿ ಚಿತ್ತರಂಜನ್ ಬೋಳಾರ್

23/01/2024, 18:48

ಮಂಗಳೂರು(reporterkarnataka.com): ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಆಯೋಜಿಸಿದ “ಅಮೃತ ಆರೋಗ್ಯ ಮೇಳ” ವು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಉಪಸ್ಥಿತಿಯಲ್ಲಿ ಜರುಗಿತು.
ಯೇನಪೋಯ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು ಆಸ್ಪತ್ರೆಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಈ ಶಿಬಿರವನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಗಳ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಉದ್ಘಾಟಿಸಿದರು. ಅವರು ಮಾತನಾಡಿ
ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರ ಆಶ್ರಮದ ಮಾನವೀಯ ಸೇವಾ ಉಪಕ್ರಮಗಳು, ಉಚಿತ ವೈದ್ಯಕೀಯ ಶಿಬಿರಗಳು ಕಳೆದ 25 ವರ್ಷಗಳಿಂದ ಹೆಚ್ಚಿನ ಪ್ರಚಾರ ಪಡೆಯದೆ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಆತ್ಮಶಕ್ತಿ ಹಾಗೂ ಬಿಲ್ಲವ ಸಂಘಗಳ ಹೆಚ್ಚಿನ ಶಿಬಿರಗಳಲ್ಲಿ ಮಠದ ವೈದ್ಯಕೀಯ ತಂಡ ಉಚಿತವಾಗಿ ತಪಾಸಣೆ ನಡೆಸಿ ಔಷಧಗಳನ್ನು ಕೂಡ ಉಚಿತವಾಗಿ ವಿತರಣೆ ಮಾಡಿಕೊಂಡು ಬಂದಿದ್ದಾರೆ. ಇಂತಹ ಉಚಿತ ಶಿಬಿರಗಳು ಜನರು ರೋಗ ಬರುವ ಸಾಕಷ್ಟು ಮುಂಚಿತವಾಗಿ ಕಂಡುಬರುವ ಪೂರ್ವ ಲಕ್ಷಣಗಳನ್ನು ಗುರುತಿಸಿ ರೋಗಬರದಂತೆ ತಡೆಯಲು ಅತ್ಯಂತ ಉಪಯುಕ್ತ ವಿಧಾನವಾಗಿದೆ. ಅಮ್ಮನವರ ಆಶೀರ್ವಾದವನ್ನು ನಡೆಯುವ ಈ ಶಿಬಿರದಲ್ಲಿ ಬಂದಂತ ಎಲ್ಲರಿಗೂ ಆರೋಗ್ಯ ಪೂರ್ಣ ಜೀವನವನ್ನು ನೀಡಿ ಹರಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.


ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ.ಸುಚಿತ್ರಾ ರಾವ್ ಸ್ವಾಗತಿಸಿದರು. ಡಾ‌ ದೇವದಾಸ್ ಪುತ್ರನ್ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಯೇನಪೋಯ ದಂತ ವೈದ್ಯಕೀಯ ಆಸ್ಪತ್ರೆಯ ಡಾ.ಸುಪ್ರಿಯಾ ಎ., ಸೇವಾ ಸಮಿತಿಯ ಉಪಾದ್ಯಕ್ಷ ಸುರೇಶ್ ಅಮೀನ್, ದಿಲೀಪ್ ಕುಮಾರ್, ರಾಜನ್, ಆಯುಧ್ ನ ಡಾ.ತನುಷಾ ಶೆಟ್ಟಿ, ಪೂರ್ಣಿಮಾ, ರೂಪಾ, ಆತ್ಮಶಕ್ತಿ ಯ ಗೋಪಾಲ್, ಏನಪೋಯ ಆಸ್ಪತ್ರೆಯ ಭರತ್, ಸಮೀರ್ ನಮಿತ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕರು ವಿವಿಧ ತಜ್ಞ ವೈದರಿಂದ ಉನ್ನತ ತಪಾಸಣೆ, ದಂತ ಚಿಕಿತ್ಸೆ ಮೊದಲಾದ ಸೌಲಭ್ಯಗಳ ಪ್ರಯೋಜನ ಪಡೆದರು.

ಇತ್ತೀಚಿನ ಸುದ್ದಿ

ಜಾಹೀರಾತು